ನವದೆಹಲಿ: ಗಡಿ ಪ್ರದೇಶಗಳಲ್ಲಿ ಕಾರ್ಯತಂತ್ರದ ರಸ್ತೆಗಳು, ಸೇತುವೆಗಳು ಮತ್ತು ಸುರಂಗಗಳ ನಿರ್ಮಾಣವನ್ನು ತ್ವರಿತಗೊಳಿಸಲಾಗುವುದು, ಬಾರ್ಡರ್ ರೋಡ್ಸ್ ಆರ್ಗನೈಝೇಶನ್ (ಬಿಆರ್ಒ) ಈ ಗುರಿಯತ್ತ ತೀವ್ರವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ನವದೆಹಲಿಯಲ್ಲಿ ನಿನ್ನೆ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಬಿಆರ್ಒ ನಡೆಸುತ್ತಿರುವ ಮೂಲಸೌಕರ್ಯ ಯೋಜನೆಗಳನ್ನು ಸಚಿವರು ಪರಿಶೀಲಿಸಿದರು ಎಂದು ವರದಿಗಳು ತಿಳಿಸಿವೆ.
ಸಭೆಯಲ್ಲಿ, ಗಡಿ ಪ್ರದೇಶಗಳ ಮುಂಚೂಣಿ ಸಂಪರ್ಕದ ಸ್ಥಿತಿಯನ್ನು ಪರಿಶೀಲಿಸಲಾಯಿತು ಮತ್ತು ನಡೆಯುತ್ತಿರುವ ಯೋಜನೆಗಳನ್ನು ಹೆಚ್ಚಿಸುವ ಮತ್ತು ಗಡಿ ಪ್ರದೇಶಗಳಲ್ಲಿ ಕಾರ್ಯತಂತ್ರದ ರಸ್ತೆಗಳು, ಸೇತುವೆಗಳು ಮತ್ತು ಸುರಂಗಗಳ ನಿರ್ಮಾಣವನ್ನು ತ್ವರಿತಗೊಳಿಸುವ ಅಗತ್ಯತೆಯ ಬಗ್ಗೆ ಚರ್ಚಿಸಲಾಯಿತು.
ವಿವಿಧ ಯೋಜನೆಗಳ ಪ್ರಗತಿಗೆ ಧಕ್ಕೆಯಾಗದಂತೆ ಕೋವಿಡ್-19 ಕಾರಣದಿಂದ ವಿಧಿಸಲಾದ ನಿರ್ಬಂಧಗಳ ಸಮಯದಲ್ಲೂ ಕೂಡ BRO ನಿರಂತರವಾಗಿ ಕೆಲಸ ಮಾಡಿದೆ.
ಬಾರೀ ಹಿಮಪಾತದ ಹೊರತಾಗಿಯೂ, 60 ವರ್ಷಗಳ ಹಳೆಯ ದಾಖಲೆಯನ್ನು ಮುರಿದು ಎಲ್ಲಾ ಆಯಕಟ್ಟಿನ ಪಾಸ್ಗಳು ಮತ್ತು ರಸ್ತೆಗಳನ್ನು ಅವುಗಳ ಸರಾಸರಿ ವಾರ್ಷಿಕ ಆರಂಭಿಕ ದಿನಾಂಕಗಳಿಗೆ ಒಂದು ತಿಂಗಳ ಮುಂಚಿತವಾಗಿಯೇ ಸಂಚಾರಕ್ಕಾಗಿ ತೆರವುಗೊಳಿಸಲಾಗಿದೆ.
ಬಿಆರ್ಒ ತನ್ನ ಸಾಧನೆಗಳಿಗಾಗಿ ಶ್ಲಾಘನೆಗಳಿಗೆ ಪಾತ್ರವಾಗಿದೆ, ಇನ್ನೂ ಹೆಚ್ಚಿನ ಹಿರಿಮೆಗಳನ್ನು ಸಾಧಿಸಲು ತನ್ನ ಕೆಲಸವನ್ನು ಮುಂದುವರೆಸಬೇಕೆಂದು ಸಿಂಗ್ ಅದಕ್ಕೆ ಸಲಹೆ ನೀಡಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.