ಮುಂಬೈ: ದೇಶವ್ಯಾಪಿ ಕೊರೋನಾ ಲಾಕ್ಡೌನ್ ಕಾರಣದಿಂದಾಗಿ ವಲಸೆ ಕಾರ್ಮಿಕರು, ಬಡ ಜನರ ದೈನಂದಿನ ಜೀವನ ಕ್ರಮ ತುಸು ಹೆಚ್ಚೇ ಅತಂತ್ರವಾಯಿತು. ತಮ್ಮದಲ್ಲದ ನಾಡಿನಲ್ಲಿ, ಕೆಲಸವಿಲ್ಲದೆ ಹಣವೂ ಇಲ್ಲದೆ ಬದುಕು ಸಾಗಿಸಬೇಕಾದ ಅನಿವಾರ್ಯತೆ ಒಂದೆಡೆಯಾದರೆ, ತಮ್ಮ ತಮ್ಮ ಪ್ರದೇಶಗಳನ್ನು ಸೇರುವ ಧಾವಂತ ಮತ್ತೊಂದೆಡೆ. ಕಾರಣ ಆಹಾರದ ಅಗತ್ಯತೆ, ಮನೆ ಬಾಡಿಗೆ, ಔಷಧಗಳನ್ನು ಸಂಗ್ರಹಿಸಿಕೊಳ್ಳುವುದಕ್ಕೂ ಕಷ್ಟ ಪಡಬೇಕಾದ ಸಂದರ್ಭದಲ್ಲಿ ಇಂತಹ ಸಮಸ್ಯೆಗಳಿಂದ ಮುಕ್ತರಾಗುವ ಸಲುವಾಗಿ ವಲಸಿಗರು ತಮ್ಮ ತಮ್ಮ ಹಳ್ಳಿಗಳನ್ನು ಸೇರಲು ಬಯಸುತ್ತಾರೆ. ಸಾರಿಗೆ ವ್ಯವಸ್ಥೆಯೂ ಇಲ್ಲದ ಕಾರಣದಿಂದಾಗಿ ಕಾಲ್ನಡಿಗೆಯ ಮೂಲಕವಾದರೂ ತಮ್ಮ ತಮ್ಮ ಊರುಗಳಿಗೆ ಸೇರಲು ವಲಸೆ ಕಾರ್ಮಿಕರು ತೀರ್ಮಾನಿಸುತ್ತಾರೆ.
ಇತ್ತ ವಲಸೆ ಕಾರ್ಮಿಕರ ಸಮಸ್ಯೆಗಳ ಪರಿಹಾರಕ್ಕೆ ಸರ್ಕಾರಗಳು ಅನೇಕ ಕ್ರಮಗಳನ್ನು ಕೈಗೊಳ್ಳುವತ್ತಲೂ ಚಿತ್ತ ಹರಿಸಿವೆ. ಅವರಿಗೆ ಬೇಕಾದ ಮೂಲಭೂತ ಅವಶ್ಯಕತೆಗಳನ್ನು ಪೂರೈಕೆ ಮಾಡುವ ಸಲುವಾಗಿ ಅನೇಕ ಯೋಜನೆಗಳನ್ನು, ಸಾರಿಗೆ ಸಂಪರ್ಕವನ್ನು ಕಲ್ಪಿಸುವ ನಿಟ್ಟಿನಲ್ಲಿಯೂ ಕಾರ್ಯಯೋಜನೆಗಳನ್ನು ಮಾಡಿತು. ಇಂತಹ ಸಂದರ್ಭದಲ್ಲಿ ವಲಸೆ ಕಾರ್ಮಿಕರಿಗೆ ಆರೋಗ್ಯ ಸಹಾಯಕ್ಕಾಗಿ ಡಾ. ಕಿಶೋರ್ ಜೈನ್, ಡಾ. ದೇಶ್ಮುಖ್ ಸೇರಿದಂತೆ ಇನ್ನಿತರ ವೈದ್ಯರು ಕೂಡಿಕೊಂಡು RSS ನ ಸ್ವಯಂಸೇವಕರ ಸಹಭಾಗಿತ್ವದಲ್ಲಿ ಸರ್ಕಾರದ ಜೊತೆಗೆ ಕೈ ಜೋಡಿಸುತ್ತಾರೆ. ಮೇ 1 ರ ಕಾರ್ಮಿಕರ ದಿನದಂದೇ ಉಚಿತ ವೈದ್ಯಕೀಯ ಚಿಕಿತ್ಸಾ ಕೇಂದ್ರವನ್ನು ಆರಂಭಿಸುತ್ತಾರೆ.
ಕಾರ್ಮಿಕರು ಹೇಗೆ ಹೋಗುತ್ತಾರೆ, ಅವರಿಗೆ ತೆರಳುವ ಸಂದರ್ಭದಲ್ಲಿ ಆಹಾರದ ಮೂಲ ಯಾವುದು ? ಎಂಬೆಲ್ಲಾ ಪ್ರಶ್ನೆಗಳೊಂದಿಗೆ ಆರಂಭಿಸಿದ ಚಿಕಿತ್ಸಾ ಕೇಂದ್ರದಲ್ಲಿಯೇ, ಮುಂದಿನ ದಿನಗಳಲ್ಲಿ ವಲಸಿಗ ಕಾರ್ಮಿಕರಿಗೆ ಉಚಿತ ಕುಡಿಯುವ ನೀರು, ಬಿಸ್ಕೆಟ್ ನೀಡಲಾರಂಭಿಸುತ್ತಾರೆ. ಅಲ್ಲದೆ ಕಮ್ಯುನಿಟಿ ಕಿಚನ್ ಆರಂಭಿಸಿ, ಆ ಮೂಲಕವೂ ಸುಮಾರು 2,000 ಕಾರ್ಮಿಕರಿಗೆ ಪ್ರತಿನಿತ್ಯ ಆಹಾರ ಪೊಟ್ಟಣಗಳನ್ನು ಒದಗಿಸುವ ಕೆಲಸ ಮಾಡುತ್ತಿದೆ. ಇವರ ಈ ನಿಸ್ವಾರ್ಥ ಸೇವೆಗೆ ಸಮಾಜವೂ ತೆರೆದ ಹೃದಯದಿಂದ ಸಹಾಯ ಮಾಡುತ್ತದೆ ಎಂಬ ನಂಬಿಕೆಯಂತೆ, ಇವರ ಈ ಕಾರ್ಯಕ್ಕೂ ಅನೇಕ ಜನರು ಸಹಕಾರ ನೀಡುತ್ತಾರೆ. ಗೋವಾ, ಪಿಂಪಾಲ್ಗರ್ ಮತ್ತು ರಂಜನೋಲಿ ಪ್ರದೇಶದ ಜನತೆ ಸ್ವಯಂ ಪ್ರೇರಣೆಯಿಂದಲೇ ರೊಟ್ಟಿಗಳನ್ನು ತಯಾರಿಸಿ ಡಾ. ಜೈನ್ ತಂಡಕ್ಕೆ ನೀಡುವ ಮೂಲಕವೂ ವಲಸಿಗ ಕಾರ್ಮಿಕರಿಗೆ ತಮ್ಮ ಕೈಲಾದ ಸಹಾಯವನ್ನು ಮಾಡಲಾರಂಭಿಸಿದರು.
ಇದೇ ಸಂದರ್ಭದಲ್ಲಿ ಈ ತಂಡದಿಂದ ಸಹಾಯ ಪಡೆದ ಕಾರ್ಮಿಕನೋರ್ವ ತನ್ನಲ್ಲಿದ್ದ 500 ರೂ. ಗಳನ್ನು, RSS ಮತ್ತು ವೈದ್ಯರುಗಳ ತಂಡಕ್ಕೆ ನೀಡಲು ಮುಂದಾಗುತ್ತಾರೆ. ಆದರೆ ಈ ತಂಡ ಅದನ್ನು ಸ್ವೀಕರಿಸಲು ನಿರಾಕರಿಸಿದಾಗ, ಕಣ್ಣೀರು ಹಾಕಿದ ವ್ಯಕ್ತಿ ತನ್ನ ಅಳಿಲು ಸೇವೆಯನ್ನು ಸ್ವೀಕರಿಸಲೇ ಬೇಕು. ಏಕೆಂದರೆ ನಿಮ್ಮ ಈ ನಿಸ್ವಾರ್ಥ ಕಾರ್ಯಕ್ಕೆ ನಾನೇನಾದರೂ ಕೊಡುಗೆ ನೀಡಲೇಬೇಕೆಂಬ ಆಸೆ ನನ್ನದು ಎಂದು ತಿಳಿಸುತ್ತಾರೆ. ಅಂತಹ ಸಂದರ್ಭದಲ್ಲಿ ಆ ಬಡ ಕಾರ್ಮಿಕನ ನಿಸ್ವಾರ್ಥ ಮನಸ್ಸಿಗೆ ಬೆಲೆ ನೀಡಿ ಅವನಿಂದ ಕೇವಲ 200 ರೂ. ಗಳನ್ನು ತೆಗೆದುಕೊಳ್ಳುವ ಮೂಲಕ ಆತನಿಗೆ ಸಂತೋಷ ನೀಡುತ್ತಾರೆ. ಇಂತಹ ಬಡ ವ್ಯಕ್ತಿಗಳ ಹೃದಯ ಶ್ರೀಮಂತಿಕೆಯೇ ಮುಂದಿನ ದಿನಗಳಲ್ಲಿ ಭಾರತವನ್ನು ಈ ಬಿಕ್ಕಟ್ಟಿನಿಂದ ರಕ್ಷಿಸುವುದಾಗಿ ಡಾ. ಜೈನ್ ಅಭಿಪ್ರಾಯ ಪಡುತ್ತಾರೆ.
Source : Organiser
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.