ನವದೆಹಲಿ : ಇಂದು ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ಸ್ವಾವಲಂಬಿ ಭಾರತವಾಗಲು ನಾವು ಮುಂದಾಗಬೇಕು ಎಂದಿದ್ದಾರೆ. ಸ್ವಾವಲಂಬಿ ಭಾರತದ ಸಂಕಲ್ಪವನ್ನು ಬಲಿಷ್ಠಗೊಳಿಸಲು ವಿಶೇಷ ಆರ್ಥಿಕ ಪ್ಯಾಕೇಜ್ ರೂ. 20 ಲಕ್ಷ ಕೋಟಿ ಅನ್ನು ಘೋಷಿಸಿದ್ದಾರೆ. ಇದು ಭಾರತದ ಜಿಡಿಪಿಯ ಶೇ. 10% ರಷ್ಟಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಇಂದು ದೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಮುಖ ಅಂಶಗಳು ಇಂತಿವೆ.
ಜಗತ್ತು ಕೊರೋನಾದೊಂದಿಗೆ ಹೋರಾಡುತ್ತಾ 4 ತಿಂಗಳುಗಳೇ ಕಳೆದಿವೆ. ಕೊರೋನಾದಿಂದ ಮೃತಪಟ್ಟವರಿಗೆ ಶ್ರದ್ಧಾಂಜಲಿ. ಕೇವಲ ಒಂದು ವೈರಸ್ ಇಡೀ ಜಗತ್ತನ್ನೇ ಅಲುಗಾಡಿಸಿದೆ. ಇಂದು ಇಡೀ ಪ್ರಪಂಚವೇ ಸಂಕಷ್ಟದಲ್ಲಿದೆ. ಭಾರತದ ದೃಷ್ಟಿಯಲ್ಲಿ 21ನೇ ಶತಮಾನ ನಮ್ಮ ಕನಸಲ್ಲ, ಜವಾಬ್ದಾರಿ. ಇಂದಿನ ಪರಿಸ್ಥಿತಿ ನಮಗೆ ಪಾಠ ಕಲಿಸಿದೆ. ಅವಶ್ಯಕತೆ ಎಲ್ಲರಿಗೂ ಎಲ್ಲವನ್ನೂ ಕಲಿಸುತ್ತದೆ. ಭಾರತವು ಆಪತ್ತನ್ನು ಅವಕಾಶವಾಗಿ ಬದಲಾಯಿಸಿದೆ. ಈ ಮೊದಲು ಭಾರತದಲ್ಲಿ ಎನ್ 95 ಮಾಸ್ಕ್, ಪಿಪಿಇ ಕಿಟ್ ಉತ್ಪಾದನೆ ಆಗುತ್ತಿರಲಿಲ್ಲ. ಆದರೆ ಇಂದು ದೊಡ್ಡ ಮಟ್ಟದಲ್ಲಿ ಉತ್ಪಾದನೆಯಾಗುತ್ತಿದೆ.
ಕೊರೋನಾ ಆರಂಭದಲ್ಲಿ ಕಿಟ್ ನಮ್ಮ ಬಳಿ ಇರಲಿಲ್ಲ. ಈಗ ಸಾಕಷ್ಟು ಪ್ರಮಾಣದಲ್ಲಿ ಇದೆ. ಇಡೀ ವಿಶ್ವಕ್ಕೆ ಭಾರತ ಮಾದರಿಯಾಗಿದೆ. ಸ್ವಾವಲಂಬಿ ಭಾರತ ಎಂದು ಶಾಸ್ತ್ರಗಳು ಹೇಳಿವೆ. ಭಾರತೀಯ ಸಂಸ್ಕೃತಿ, ಸಂಸ್ಕಾರ ಸ್ವಾವಲಂಬನೆ ಬಗ್ಗೆ ಹೇಳುತ್ತದೆ. ಭೂಮಿಯನ್ನು ತಾಯಿ ಎಂದು ಆರಾಧಿಸುವುದು ಭಾರತೀಯರ ಸಂಸ್ಕೃತಿ. ಸುಖ ಸಮೃದ್ಧಿಯ ವಿಶ್ವವನ್ನು ನಿರ್ಮಾಣ ಮಾಡುವುದು ಭಾರತೀಯರ ಕನಸು. ಇಡೀ ವಿಶ್ವವೇ ಒಂದು ಪರಿವಾರ ಎಂದು ಭಾರತೀಯರು ನಂಬಿದ್ದಾರೆ.
ಟಿಬಿ, ಪೌಷ್ಟಿಕತೆ, ಪೋಲಿಯೋ ನಿರ್ಮೂಲನೆಯಲ್ಲಿ ಭಾರತ ಯಶಸ್ವಿಯಾಗಿದೆ. ಕೊರೋನಾ ವಿರುದ್ಧದ ಹೋರಾಟದಲ್ಲಿ ಹೊಸ ವಿಶ್ವಾಸದೊಂದಿಗೆ ಮುನ್ನುಗ್ಗುತ್ತಿದೆ. ಇದು ಭಾರತೀಯರಿಗೆ ಹೆಮ್ಮೆಯ ವಿಚಾರ.
ಕೊರೋನಾ ವಿರುದ್ಧದ ಹೋರಾಟದ ಬಗ್ಗೆ ಇಡೀ ವಿಶ್ವವೇ ಆಶ್ಚರ್ಯಚಕಿತವಾಗಿದೆ. ಭಾರತದ ಗುರಿ ಕಾರ್ಯ ಪ್ರಗತಿ ಇಡೀ ವಿಶ್ವದ ದಿಕ್ಕನ್ನೇ ಬದಲಾಯಿಸಿದೆ. ಭಾರತದ ಹಣೆಬರಹ ಬದಲಾದರೂ ಇಡೀ ವಿಶ್ವದ ಹಣೆಬರಹ ಬದಲಾಗುತ್ತದೆ. ಭಾರತಕ್ಕೆ ಯಾವುದು ಕೂಡ ಸಮಸ್ಯೆಯಲ್ಲ.
ಸ್ವಾವಲಂಬಿ ಭಾರತವಾಗಲು 5 ಸ್ತಂಭಗಳ ಸೂತ್ರವಾದ 1. ಆರ್ಥಿಕತೆ, 2. ಮೂಲಭೂತ ಸೌಲಭ್ಯ, 3. ತಂತ್ರಜ್ಞಾನ ಆಧಾರಿತ ವ್ಯವಸ್ಥೆ, 4. ಜನಸಂಖ್ಯೆ, 5. ಬೇಡಿಕೆ – ಇವು ಸರಿಯಾಗಿದ್ದರೆ ಎಲ್ಲವೂ ಸರಿ ಇದ್ದಂತೆ ಎಂದರು.
ದೇಶದ ಮಧ್ಯಮ ವರ್ಗದವರಿಗೆ, ಹಗಲಿರುಳು ದುಡಿಯುವವರಿಗೆ, ಪ್ರಾಮಾಣಿಕತೆಯಿಂದ ತೆರಿಗೆ ಕಟ್ಟುವವರಿಗೆ, ರೈತರಿಗೆ, ಕಾರ್ಮಿಕರಿಗೆ, ಭಾರತದ ಉದ್ಯೋಗದಾತರಿಗೆ ಈ ಪ್ಯಾಕೇಜ್ ಎಂದರು. ಪ್ಯಾಕೇಜ್ ಕುರಿತು ಮುಂದಿನ ದಿನಗಳಲ್ಲಿ ವಿತ್ತ ಸಚಿವರು ವಿವರಿಸಲಿದ್ದಾರೆ ಎಂದರು
ಸ್ಥಳೀಯತೆಯ ಕಾರಣದಿಂದಲೇ ನಾವಿಂದು ಜೀವಂತವಾಗಿದ್ದೇವೆ. ಸ್ವದೇಶಿ ವಸ್ತುಗಳನ್ನು ವಿದೇಶಿ ಮಟ್ಟದಲ್ಲಿ ಪರಿಚಯಿಸಲಾಗಿದೆ. ಪ್ರತಿಯೊಬ್ಬರು ಸ್ಥಳೀಯ ವಸ್ತುಗಳಿಗೆ ರಾಯಭಾರಿಗಳಾಗಬೇಕು. ಖಾದಿಯನ್ನು ಖರೀದಿಸುವಂತೆ ನಾವು ಉತ್ತೇಜನ ನೀಡಿದೆವು, ಈ ಸಣ್ಣ ಪ್ರಯತ್ನಕ್ಕೆ ದೊಡ್ಡ ಫಲ ಸಿಕ್ಕಿದೆ. ಮೇಕ್ ಇನ್ ಇಂಡಿಯಾ ಕನಸು ಈಡೇರಲಿದೆ ಎಂದರು.
ರಾಜ್ಯಗಳ ಸಲಹೆ ಆಧರಿಸಿ ನಾವು ಲಾಕ್ ಡೌನ್ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತೇವೆ. 4.0 ಲಾಕ್ ಡೌನ್ ಹೊಸ ಮಾದರಿಯಲ್ಲಿ ಇರಲಿದೆ. ನಮ್ಮ ಬದುಕು ಕೇವಲ ಕೊರೋನಾ ಕೇಂದ್ರಿತವಾಗಿ ಇರಬಾರದು ಎಂದರು.
ರಾಜ್ಯಗಳ ಸಲಹೆ ಆಧರಿಸಿ ನಾವು ಲಾಕ್ಡೌನ್ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತೇವೆ. 4.0 ಲಾಕ್ ಡೌನ್ ಹೊಸ ಮಾದರಿಯಲ್ಲಿ ಇರಲಿದೆ. ನಮ್ಮ ಬದುಕು ಕೇವಲ ಕೊರೋನಾ ಕೇಂದ್ರಿತವಾಗಿ ಇರಬಾರದು. ಕೊರೋನಾ ವಿರುದ್ಧದ ಹೋರಾಟದಲ್ಲಿ ಸೋಲನ್ನು ಕಾಣುವ ಮಾತೆ ಇಲ್ಲ. ಕೊರೋನಾ ವಿರುದ್ಧ ಭಾರತ ಹೋರಾಡುತ್ತದೆ ಹೊಸ ಬದುಕನ್ನು ನಾವು ಕಟ್ಟಿಕೊಳ್ಳುತ್ತೇವೆ ಕೊರೋನಾ ವಿರುದ್ಧದ ಹೋರಾಟವನ್ನು ಮುಂದುವರಿಸುತ್ತಲೇ ಹೊಸ ಬದುಕನ್ನು ಕಟ್ಟಿಕೊಳ್ಳುತ್ತೇವೆ. ಭಾರತದ ಸಂಕಲ್ಪಶಕ್ತಿ ದೃಢವಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು.
ಆರ್ಥಿಕ ಪ್ಯಾಕೇಜ್ನ ಸಂಪೂರ್ಣ ವಿವರಗಳನ್ನು ನಾಳೆ ವಿತ್ತ ಸಚಿವ ನಿರ್ಮಲಾ ಸೀತಾರಾಮನ್ ನೀಡಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.