ನವದೆಹಲಿ: ಭಾರತೀಯ ರೈಲ್ವೆಯ ಕ್ಯಾಟರಿಂಗ್ ಮತ್ತು ಪ್ರವಾಸೋದ್ಯಮ ನಿಗಮ (ಐಆರ್ಸಿಟಿಸಿ)ವು ವಿಶೇಷ ರೈಲುಗಳಿಗಾಗಿ ಆನ್ಲೈನ್ನಲ್ಲಿ ಟಿಕೆಟ್ ಮಾರಾಟ ಮಾಡಲು ಪ್ರಾರಂಭಿಸಿದ ನಂತರ ಸೋಮವಾರ ಮೊದಲ ಮೂರು ಗಂಟೆಗಳಲ್ಲೇ 54,000 ಪ್ರಯಾಣಿಕರಿಗೆ ಸುಮಾರು 30,000 ಟಿಕೆಟ್ಗಳನ್ನು ಮಾರಾಟ ಮಾಡಲಾಗಿದೆ.
ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ಎಲ್ಲಾ ಪ್ರಯಾಣಿಕರ ಸೇವೆಗಳನ್ನು ಸರ್ಕಾರವು ನಿರ್ಬಂಧಿಸಿದ ಸುಮಾರು 50 ದಿನಗಳ ನಂತರ, ಮೇ 11 ರಂದು ಭಾರತೀಯ ರೈಲ್ವೆ 15 ಜೋಡಿ ವಿಶೇಷ ಹವಾನಿಯಂತ್ರಿತ ರೈಲುಗಳನ್ನು ಮಂಗಳವಾರದಿಂದ ಪ್ರಾರಂಭಿಸಲಿದೆ.
ಈ ಹವಾನಿಯಂತ್ರಿತ (ಎಸಿ) ರೈಲುಗಳ ಟಿಕೆಟ್ ಮಾರಾಟದಿಂದ ಬಂದ ಆದಾಯ ಸುಮಾರು 10 ಕೋಟಿ ರೂ ಆಗಿದೆ. ಪ್ರಯಾಣಕ್ಕಾಗಿ ಟಿಕೆಟ್ ಕಾಯ್ದಿರಿಸಲು ಬಯಸುವ ಸಾವಿರಾರು ಜನರನ್ನು ಐಆರ್ಸಿಟಿಸಿ ವೆಬ್ಸೈಟ್ನಲ್ಲಿ ವೇಟಿಂಗ್ ಲಿಸ್ಟ್ನಲ್ಲಿ ಇಡಲಾಗಿದೆ. ಟಿಕೆಟ್ಗಾಗಿ ಭಾರಿ ಒತ್ತಡ ಇದ್ದ ಕಾರಣ ಐಆರ್ಸಿಟಿಸಿ ಸೈಟ್ ಕ್ರ್ಯಾಶ್ ಆದ ಕಾರಣ ಸಂಜೆ 6 ಗಂಟೆಗೆ ಎರಡು ಗಂಟೆಗಳ ವಿಳಂಬದ ಬಳಿಕ ಬುಕಿಂಗ್ ತೆರೆಯಿತು. ಆದರೆ, ಹೌರಾ-ನವದೆಹಲಿ ರೈಲಿನ ಎಲ್ಲಾ ಟಿಕೆಟ್ಗಳು ಮೊದಲ 10 ನಿಮಿಷಗಳಲ್ಲಿ ಬುಕ್ ಆಗಿವೆ. ಹೌರಾ-ನವದೆಹಲಿ ರೈಲು ಇಂದು ಸಂಜೆ 5.05 ಕ್ಕೆ ಪ್ರಯಾಣ ಆರಂಭಿಸಲಿದೆ.
ಸೋಮವಾರ ರಾತ್ರಿ 9 ಗಂಟೆ ಸುಮಾರಿಗೆ ಮಾರಾಟವು 9.9 ಕೋಟಿ ರೂ.ಗಳನ್ನು ಮುಟ್ಟಿದೆ ಎಂದು ಹೆಸರಿಸದ ರೈಲ್ವೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮುಂಬೈ-ದೆಹಲಿ ಮಾರ್ಗದ ಟಿಕೆಟ್ ಮೇ 12-17ರವರೆಗೆ ಸಂಪೂರ್ಣವಾಗಿ ಬುಕ್ ಆಗಿದೆ. “ರೈಲುಗಳು ಲಭ್ಯತೆ ಇರುವ ಹಲವಾರು ಮಾರ್ಗಗಳನ್ನು ನಾವು ಇನ್ನೂ ಹೊಂದಿದ್ದೇವೆ” ಎಂದು ರೈಲ್ವೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಐಆರ್ಸಿಟಿಸಿ ವೆಬ್ಸೈಟ್ನ ಪ್ರಕಾರ, ಭುವನೇಶ್ವರ-ನವದೆಹಲಿ ರೈಲುಗಳ ಎಲ್ಲಾ ಟಿಕೆಟ್ಗಳು ಸಂಜೆ 6.30 ರ ವೇಳೆಗೆ ಮಾರಾಟವಾಗಿವೆ.
ಇಲ್ಲಿ ಪ್ರಸ್ತಾಪಿಸಬೇಕಾದ ಸಂಗತಿಯೆಂದರೆ, ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಮುಖ್ಯಮಂತ್ರಿಗಳೊಂದಿಗಿನ ವಿಡಿಯೋ ಕಾನ್ಫರೆನ್ಸಿಂಗ್ನಲ್ಲಿ ರೈಲು ಸೇವೆಗಳ ಪುನರಾರಂಭವನ್ನು ಉಲ್ಲೇಖಿಸಿದ್ದಾರೆ ಮತ್ತು ಇದು ದೇಶದ ಆರ್ಥಿಕ ಚಟುವಟಿಕೆಗಳನ್ನು ಪುನರಾರಂಭಿಸಲು ನಿರ್ಣಾಯಕವಾಗಿದೆ ಎಂದು ಹೇಳಿದ್ದಾರೆ.
ಫೇಸ್ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಲಾಗಿರುವುದರಿಂದ ಈ ವಿಶೇಷ ಎಸಿ ರೈಲುಗಳಲ್ಲಿನ ಪ್ರಯಾಣವು ಸ್ವಲ್ಪ ಭಿನ್ನವಾಗಿರುತ್ತದೆ, ಪ್ರಯಾಣಿಕರು ತಮ್ಮ ಮೊಬೈಲ್ ಫೋನ್ನಲ್ಲಿ ಆರೋಗ್ಯ ಸೇತು ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಬೇಕಾಗುತ್ತದೆ. ಅವರನ್ನು ನಿಲ್ದಾಣದಲ್ಲಿ ಪರೀಕ್ಷಿಸಲಾಗುತ್ತದೆ ಮತ್ತು ಪ್ರಯಾಣಕ್ಕಾಗಿ ತಮ್ಮದೇ ಆದ ಕಂಬಳಿಯನ್ನು ತರಲು ತಿಳಿಸಲಾಗಿದೆ, ನೀರು ಮತ್ತು ಆಹಾರವನ್ನು ಒದಗಿಸಲು ತಿಳಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.