ನವದೆಹಲಿ: ಮುಂದುವರೆದ ದೇಶಗಳಲ್ಲಿ ಸೃಷ್ಟಿಯಾದ ಕೊರೋನಾವೈರಸ್ ಕೆಟ್ಟ ಪರಿಸ್ಥಿತಿ ಭಾರತದಲ್ಲಿ ಸೃಷ್ಟಿಯಾಗುವ ಬಗ್ಗೆ ಸರಕಾರದ ನಿರೀಕ್ಷೆಯಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಹೇಳಿದ್ದಾರೆ.
“ಮುಂದುವರೆದ ದೇಶಗಳಲ್ಲಿ ಸೃಷ್ಟಿಯಾದ ಅತಿ ಕೆಟ್ಟ ಪರಿಸ್ಥಿತಿ ಭಾರತದಲ್ಲಿ ಸೃಷ್ಟಿಯಾಗುತ್ತದೆ ಎಂಬ ಯಾವುದೇ ನಿರೀಕ್ಷೆ ನಮ್ಮಲ್ಲಿ ಇಲ್ಲ. ಆದರೂ ನಾವು ಯಾವುದೇ ಕೆಟ್ಟ ಪರಿಸ್ಥಿತಿಯನ್ನು ನಿಭಾಯಿಸಲು ಸನ್ನದ್ಧರಾಗುತ್ತಿದ್ದೇವೆ” ಎಂದು ಹರ್ಷವರ್ಧನ್ ಹೇಳಿದ್ದಾರೆ.
ಈಶಾನ್ಯ ರಾಜ್ಯಗಳ ಆರೋಗ್ಯ ಸಚಿವರೊಂದಿಗೆ ಮತ್ತು ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿ ಮಾತನಾಡಿದ ಅವರು, ಕೋವಿಡ್-19 ವಿರುದ್ಧದ ಹೋರಾಟದಲ್ಲಿ ಭಾರತವು ಸುಧಾರಣೆಯನ್ನು ಕಾಣುತ್ತಿದೆ ಎಂದು ಹೇಳಿದ್ದಾರೆ.
“ದೇಶದಲ್ಲಿ ಸಾವಿನ ಪ್ರಮಾಣವು ಈಗಲೂ 3.3% ಇದೆ. ಚೇತರಿಕೆ ಪ್ರಮಾಣವು 29.9% ಇದೆ. ಕಳೆದ ಮೂರು ದಿನಗಳಿಂದ ದುಪ್ಪಟ್ಟುಕೊಳ್ಳುವಿಕೆಯು 11 ದಿನಗಳಾಗಿದೆ. ಕಳೆದ ಏಳು ದಿನಗಳಿಂದ ಇದು 9.9 ದಿನಗಳು ಆಗಿದೆ” ಎಂದಿದ್ದಾರೆ.
“ನಾವು 843 ಆಸ್ಪತ್ರೆಗಳನ್ನು ಕೊರೋನಾವೈರಸ್ ರೋಗಿಗಳಿಗಾಗಿ ಮೀಸಲಿಡಲಾಗಿದೆ. ಇದರಲ್ಲಿ 1,35, 643 ಬೆಡ್ಗಳು ಇವೆ. ಈ ಬೆಡ್ಗಳು ಐಸಿಯು ಮತ್ತು ಐಸೋಲೇಶನ್ ಬೆಡ್ಗಳನ್ನೂ ಹೊಂದಿದೆ” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.