ನವದೆಹಲಿ: ಸಾಮಾಜಿಕ ಜಾಲತಾಣದಲ್ಲಿ ಹಿಂದೂ ಧರ್ಮದ ವಿರುದ್ಧ ಅವಹೇಳನಕಾರಿ ಪೋಸ್ಟ್ ಹಾಕಿದ್ದ ದೆಹಲಿಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಝಪರುಲ್ ಇಸ್ಲಾಂ ಎಂಬಾತನ ವಿರುದ್ಧ ದೆಹಲಿ ಪೊಲೀಸರು ಸೆಡಿಶನ್ ಕೇಸು ದಾಖಲಿಸಿಕೊಂಡಿದ್ದಾರೆ. ಶಾಂತಿ ಕದಡುವ ಮತ್ತು ಕೋಮು ದ್ವೇಷ ಬಿತ್ತುವ ಪ್ರಚೋದನಕಾರಿ ವರ್ತನೆಯ ಕಾರಣಕ್ಕೆ ಪೋಲೀಸರು ಪ್ರಕರಣ ದಾಖಲು ಮಾಡಿದ್ದಾರೆ. 124A, 153A ಅನ್ವಯ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಎಪ್ರಿಲ್ 28 ರಂದು ತಮ್ಮ ಫೇಸ್ಬುಕ್ನಲ್ಲಿ ಭಾರತದ ಮುಸಲ್ಮಾನರ ಪರವಾಗಿ ನಿಂತಿರುವ ಕುವೈತ್ಗೆ ಧನ್ಯವಾದಗಳು. ಭಾರತದ ಮುಸಲ್ಮಾನರ ಬಗ್ಗೆ ಅರಬ್ ದೇಶಗಳು ಕಾಳಜಿ ವಹಿಸುತ್ತಿಲ್ಲ ಎಂದು ಇಲ್ಲಿನ ಹಿಂದೂಗಳು ತಿಳಿದುಕೊಂಡಿದ್ದಾರೆ. ಭಾರತದಿಂದ ಓಡಿ ಹೋಗಿರುವ ಜಾಕಿರ್ ನಾಯ್ಕ್ ನಂತಹ ಅನೇಕ ಜನರು ದೇಶದ ಮುಸಲ್ಮಾನರ ಏಳಿಗೆಗಾಗಿ ಕೆಲಸ ಮಾಡುತ್ತಿದ್ದಾರೆ. ಒಂದು ವೇಳೆ ಹಿಂದೂಗಳಿಂದ ಮುಸ್ಲಿಮರ ಮೇಲಾಗುತ್ತಿರುವ ದೌರ್ಜನ್ಯದ ಬಗ್ಗೆ ಅರಬ್ ರಾಷ್ಟ್ರಗಳಿಗೆ ದೂರು ನೀಡಿದಲ್ಲಿ, ಇಲ್ಲಿನ ಹಿಂದೂಗಳು ನಿರ್ನಾಮವಾಗುತ್ತಾರೆ ಎಂದು ಬರೆದುಕೊಳ್ಳುವ ಮೂಲಕ ತನ್ನ ಮತಾಂಧ ಬುದ್ಧಿಯನ್ನು ತೋರ್ಪಡಿಸಿದ್ದ.
ಇವನ ಈ ಹೇಳಿಕೆಗೆ ವ್ಯಾಪಕ ಟೀಕೆಗಳು ವ್ಯಕ್ತವಾಗಿದ್ದು, ಉತನ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆಯೂ ಒತ್ತಾಯಿಸಲಾಗಿತ್ತು. ಇನ್ನು ಈತನ ಈ ಹೇಳಿಕೆಯನ್ನು ಖಂಡಿಸಿ ರಾಷ್ಟ್ರೀಯ ಅಲ್ಪಸಂಖ್ಯಾತ ಆಯೋಗದ ಮುಖ್ಯಸ್ಥ ಘಯರುಲ್ ಹಸನ್ ರಿಜ್ವಿ ಹೇಳಿಕೆ ನೀಡಿದ್ದರು. ಭಾರತದಲ್ಲಿನ ಮುಸ್ಲಿಮರು ಸ್ವತಂತ್ರವಾಗಿ ಬದುಕುತ್ತಿದ್ದಾರೆ. ಅವರಿಗೆ ದೇಶದಲ್ಲಿ ಅಭದ್ರತೆ ಇಲ್ಲ. ಇಲ್ಲಸಲ್ಲದ ಹೇಳಿಕೆಗಳ ಮೂಲಕ ವಿವಾದ ಸೃಷ್ಟಿಸದಂತೆಯೂ ತಾಕೀತು ಮಾಡಿದ್ದರು.
ತನ್ನಾ ಮಾತುಗಳನ್ನು ವಿರೋಧಿಸಿ ದೇಶದ ಮುಸ್ಲಿಮರು ಹೇಳಿಕೆ ನೀಡುವುದನ್ನು ಗಮನಿಸಿದ ಝಪರುಲ್ ಇಸ್ಲಾಂ ತದ ನಂತರ ತನ್ನ ಹೇಳಿಕೆ ತಿರುಚಲಾಗಿದೆ. ತಾನು ಅಂತಹ ಹೇಳಿಕೆ ನೀಡಿಲ್ಲ ಎಂದು ತಪ್ಪಿಸಿಕೊಳ್ಳುವ ಪ್ರಯತ್ನವನ್ನೂ ಮಾಡಿದ್ದ. ಆದರೆ ಶಾಂತಿ ಭಂಗದ ಪ್ರಯತ್ನ ಮತ್ತು ಪ್ರಚೋದನಕಾರಿ ನಡವಳಿಕೆಯ ವಿರುದ್ಧ ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.