ನವದೆಹಲಿ: ಭಾರತ ಸಂಬಂಧಿತ ವರದಿಯನ್ನು ನೀಡಿರುವ ಯುನೈಟೆಡ್ ಸ್ಟೇಟ್ಸ್ ಕಮಿಷನ್ ಆನ್ ಇಂಟರ್ನ್ಯಾಷನಲ್ ರಿಲಿಜಿಯಸ್ ಫ್ರೀಡಮ್ (USCIRF) ವಿರುದ್ಧ ಕೇಂದ್ರ ಸರ್ಕಾರ ಭಾರೀ ಆಕ್ರೋಶವನ್ನು ವ್ಯಕ್ತಪಡಿಸಿದೆ. ಅದು ಒಂದು ಪಕ್ಷಪಾತಿಯಾದ ಸಂಸ್ಥೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿದೆ.
ಭಾರತವನ್ನು ಉಲ್ಲಂಘಕರ ಪಟ್ಟಿಗೆ ಸೇರಿಸುವಂತೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತಕ್ಕೆ ಅದು ಮಾಡಿರುವ ಶಿಫಾರಸನ್ನು ಕೇಂದ್ರ ನೇರವಾಗಿ ತಿರಸ್ಕರಿಸಿದೆ. ಭಾರತವನ್ನು ವ್ಯವಸ್ಥಿತ ಮತ್ತು ಅತಿಯಾದ ಉಲ್ಲಂಘಿಸುವ ರಾಷ್ಟ್ರಗಳ ಪಟ್ಟಿಗೆ ಸೇರಿಸಬೇಕೆಂದು ಅದು ಶಿಫಾರಸು ಮಾಡಿತ್ತು.
USCIRF ತನ್ನ ವಾರ್ಷಿಕ ವರದಿಯಲ್ಲಿ, ಭಾರತೀಯ ಸರ್ಕಾರಿ ಸಂಸ್ಥೆಗಳು ಮತ್ತು ಅಧಿಕಾರಿಗಳಿಗೆ ನಿರ್ಬಂಧ ಹೇರುವಂತೆ ಶಿಫಾರಸು ಮಾಡಿದೆ. ಇದು ತನ್ನ ಪ್ರತಿಪಾದನೆಯನ್ನು ಸಮರ್ಥಿಸಲು 2019 ರ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಯನ್ನು ಉಲ್ಲೇಖಿಸಿದೆ. ಧಾರ್ಮಿಕ ಸ್ವಾತಂತ್ರ್ಯ ಉಲ್ಲಂಘನೆಯಲ್ಲಿ ತೊಡಗಿದ್ದಕ್ಕಾಗಿ ಟ್ರಂಪ್ ಆಡಳಿತವು ಭಾರತವನ್ನು “ನಿರ್ದಿಷ್ಟ ಕಾಳಜಿಯ ದೇಶ” ಎಂದು ಪರಿಗಣಿಸಬೇಕು ಎಂದು ಅದು ಶಿಫಾರಸು ಮಾಡಿದೆ.
USCIRFನ ವಾರ್ಷಿಕ ವರದಿಯ ಅವಲೋಕನಗಳು ಮತ್ತು ಶಿಫಾರಸುಗಳ ಬಗ್ಗೆ ದೂಷಿಸಿರುವ ಕೇಂದ್ರ ವಿದೇಶಾಂಗ ಸಚಿವಾಲಯದ (ಎಂಇಎ) ವಕ್ತಾರ ಅನುರಾಗ್ ಶ್ರೀವಾಸ್ತವ ಅವರು, “USCIRF ವಾರ್ಷಿಕ ವರದಿಯಲ್ಲಿ ಭಾರತದ ಕುರಿತಾದ ಅವಲೋಕನಗಳನ್ನು ನಾವು ತಿರಸ್ಕರಿಸುತ್ತೇವೆ. ಭಾರತದ ವಿರುದ್ಧ ಅದರ ಪಕ್ಷಪಾತದ ಮತ್ತು ಪ್ರವೃತ್ತಿಯ ಟೀಕೆಗಳು ಹೊಸತಲ್ಲ” ಎಂದಿದ್ದಾರೆ.
“ಆದರೆ ಈ ಸಂದರ್ಭದಲ್ಲಿ, ಅದರ ತಪ್ಪು ನಿರೂಪಣೆ ಹೊಸ ಮಟ್ಟವನ್ನು ತಲುಪಿದೆ. ನಾವು ಅದನ್ನು ನಿರ್ದಿಷ್ಟ ಕಾಳಜಿಯ ಸಂಘಟನೆಯೆಂದು ಪರಿಗಣಿಸುತ್ತೇವೆ ಮತ್ತು ಅದಕ್ಕೆ ತಕ್ಕಂತೆ ಅದರ ವರ್ತನೆ ಇದೆ” ಎಂದಿದ್ದಾರೆ.
USCIRF ಭಾರತವನ್ನು ತಪ್ಪಾಗಿ ನಿರೂಪಿಸುವುದು ಹೊಸ ಮಟ್ಟವನ್ನು ತಲುಪಿದೆ ಎಂದು ವರದಿಯನ್ನು ನಿರಾಕರಿಸುತ್ತ ಶ್ರೀವಾಸ್ತವ ಹೇಳಿದ್ದಾರೆ. USCIRF ಅನ್ನು ಭಾರತವು ನಿರ್ದಿಷ್ಟ ಕಾಳಜಿಯ ಸಂಸ್ಥೆ ಎಂದು ಪರಿಗಣಿಸುತ್ತದೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.