ಜಮ್ಮು ಕಾಶ್ಮೀರ: ದೇಶದ ಯಾವುದೇ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿಯೂ ಸೇವಾ ಮನೋಭಾವದಿಂದ, ಸ್ವಾರ್ಥ ರಹಿತ ಸೇವೆ ನೀಡುತ್ತಿರುವ ಸಂಸ್ಥೆ ಆರ್ಎಸ್ಎಸ್. ಕೊರೋನ ಸೋಂಕಿನ ಸಂದರ್ಭದಲ್ಲಿಯೂ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಕಾರ್ಯ ನಿರ್ವಹಿಸುತ್ತಿದೆ. ಇದೀಗ ಜಮ್ಮು ಕಾಶ್ಮೀರದಲ್ಲಿಯೂ ಕೊರೋನಾ ವಿರುದ್ಧ ಆರ್ಎಸ್ಎಸ್ ಕೆಲಸ ಮಾಡುತ್ತಿದ್ದು, ಬಡವರ ಸೇವೆ ಮಾಡುವ ಮೂಲಕ ಮತ್ತೆ ಮೆಚ್ಚುಗೆ ಗಳಿಸಿದೆ.
ಜಮ್ಮು ಕಾಶ್ಮೀರದ ವಿವಿಧ ಭಾಗಗಳಲ್ಲಿ ಹಸಿದವರಿಗೆ ಅನ್ನ, ದಿನ ಬಳಕೆಯ ವಸ್ತುಗಳನ್ನು ನೀಡುವ ಮೂಲಕ ‘ಜನ ಸೇವೆಯೇ ಜನಾರ್ಧನ ಸೇವೆ’ ಎಂಬ ಮಾತನ್ನು ಅಕ್ಷರಶಃ ಪಾಲನೆ ಮಾಡುತ್ತಿದೆ. ಕಣಿವೆ ರಾಜ್ಯದ ಮೂಲೆ ಮೂಲೆಗೂ ಸಂಚರಿಸಿ ಲಾಕ್ಡೌನ್ನಿಂದ ತೊಂದರೆಗೊಳಗಾಗಿರುವ ಕುಟುಂಬಗಳಿಗೆ ನೆರವಿನ ಹಸ್ತ ಚಾಚುತ್ತಿದೆ. ಜೊತೆಗೆ ಅಗತ್ಯ ಮಾಸ್ಕ್ ಮತ್ತು ಸ್ಯಾನಿಟೈಜರ್ಗಳನ್ನು ತಲುಪಿಸಿ, ನಿಯಂತ್ರಣ ನಿಯಮಗಳ ಕುರಿತು ಅರಿವು ಮೂಡಿಸುವ ಮಹತ್ವದ ಕಾರ್ಯ ಮಾಡುತ್ತಿದೆ.
ಸಾಂಬಾ ಪ್ರದೇಶದ ಬೇರೆ ಬೇರೆ ಕಡೆಗಳಲ್ಲಿ ವಾಸಿಸುವ ಜನರಿಗೆ ಈ ವರೆಗೆ ಸುಮಾರು 18,000 ಆಹಾರ ಪೊಟ್ಟಣಗಳನ್ನು ಸಂಘ ನೀಡಿದೆ. ಸಂಘದ 9 ಘಟಕಗಳ ಸುಮಾರು 215 ಮಂದಿ ಹಗಲಿರುಳು ಅವಿರತವಾಗಿ ಇಲ್ಲಿ ದುಡಿಯುತ್ತಿದ್ದಾರೆ. ಸಂಘದಿಂದ ಈ ವರೆಗೆ 1500 ರಷ್ಟು ಮನೆಗಳ ನೈರ್ಮಲ್ಯೀಕರಣ, 3850 ಕುಟುಂಬಗಳು ಕಣಿವೆ ರಾಜ್ಯದಲ್ಲಿ ಸಹಾಯ ಪಡೆದಿವೆ. ಜೊತೆಗೆ ಆರೋಗ್ಯ ರಕ್ಷಣಾ ಕಾರ್ಯ ನಿರ್ವಹಿಸುವವರಿಗೂ ಸಂಘ ಸಹಕರಿಸಿದೆ.
ಇನ್ನು ಆರ್ಎಸ್ಎಸ್ನ ಸೇವಾ ಭಾರತಿಯ ಕಾರ್ಯಗಳನ್ನು ನೋಡಿ ಈ ಹಿಂದೆ ಮುಸ್ಲಿಂ ಮಹಿಳೆಯೊಬ್ಬರು ಹಜ್ಗೆ ಹೋಗಲು ಕೂಡಿಟ್ಟಿದ್ದ 5 ಲಕ್ಷ ರೂ. ಗಳನ್ನು ದೇಣಿಗೆ ನೀಡಿದ್ದು, ಇದು ಸಂಘದ ನಿಸ್ವಾರ್ಥ ಸೇವೆಗೆ ಸಿಕ್ಕ ಬೆಂಬಲ ಎಂದರೂ ತಪ್ಪಾಗಲಾರದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.