ನವದೆಹಲಿ: ಮಹಾರಾಷ್ಟ್ರದ ಪಾಲ್ಘರ್ನಲ್ಲಿ ನಡೆದ ಇಬ್ಬರು ಸಾಧುಗಳ ಹತ್ಯೆಯನ್ನು ಖಂಡಿಸಿ ಏಪ್ರಿಲ್ 28 ರಂದು ಪ್ರತಿಯೊಬ್ಬರು ದೀಪ ಬೆಳಗಿಸಿ ಮತ್ತು ಒಂದು ಹೊತ್ತು ಉಪವಾಸವನ್ನು ಆಚರಿಸಿ ಸಂತರಿಗೆ ಶ್ರದ್ಧಾಂಜಲಿ ಸಮರ್ಪಿಸೋಣ ಎಂದು ವಿಶ್ವ ಹಿಂದೂ ಪರಿಷತ್ ಮತ್ತು ಹಿಂದೂ ಧರ್ಮ ಆಚಾರ್ಯ ಸಭಾ ದೇಶದ ಜನತೆಗೆ ಕರೆ ನೀಡಿದೆ.
ಏಪ್ರಿಲ್ 16 ರಂದು ಮಹಾರಾಷ್ಟ್ರದ ಪಾಲ್ಘರ್ ಗ್ರಾಮದಲ್ಲಿ ಜುನಾ ಆಕಾಡಾಕ್ಕೆ ಸೇರಿದ ಕಲ್ಪವೃಕ್ಷ ಗಿರಿ ಮತ್ತು ಸುಶೀಲ್ ಗಿರಿ ಎಂಬ ಇಬ್ಬರು ಸಾಧುಗಳನ್ನು ಸುಮಾರು ನೂರು ಮಂದಿಯ ಗುಂಪು ಹಲ್ಲೆ ನಡೆಸಿ ಹತ್ಯೆ ಮಾಡಿದ ಘಟನೆ ಇಡೀ ದೇಶವನ್ನೇ ತಲ್ಲಣಗೊಳಿಸಿತ್ತು.
ಏಪ್ರಿಲ್ 28ರಂದು ಆದಿಶಂಕರಾಚಾರ್ಯರ, ಸಂತ ಸುರ್ದಾಸ್ ಮತ್ತು ಶ್ರೀರಾಮಾನುಜಾಚಾರ್ಯ ಅವರ ಜನ್ಮದಿನಾಚರಣೆಯನ್ನು ಆಚರಣೆ ಮಾಡಲಾಗುತ್ತದೆ. ಈ ಹಿನ್ನೆಲೆಯಲ್ಲಿ ಅಂದು ಸಂಜೆ ದೀಪ ಬೆಳಗಿಸಿ ಶ್ರದ್ಧಾಂಜಲಿಯನ್ನು ಅರ್ಪಿಸಿ, ಉಪವಾಸವನ್ನು ಮಾಡುವ ಮೂಲಕ ಸಾತ್ವಿಕ ಪ್ರತಿಭಟನೆಯಲ್ಲಿ ಪಾಲ್ಗೊಂಡು ಸಾಧುಗಳ ಹತ್ಯೆಗೆ ಖಂಡನೆಯನ್ನು ವ್ಯಕ್ತಪಡಿಸಬೇಕು ಎಂದು ಕರೆಯನ್ನು ನೀಡಲಾಗಿದೆ.
ಸಾಧುಗಳ ಹತ್ಯೆಯ ಹಿಂದಿನ ಕುತಂತ್ರವನ್ನು ಬಯಲು ಮಾಡಲು ದೊಡ್ಡ ಮಟ್ಟದ ತನಿಖೆ ನಡೆಸಬೇಕು ಎಂದು ಈಗಾಗಲೇ ವಿಎಚ್ಪಿ ಸೇರಿದಂತೆ ಹಲವು ಹಿಂದೂ ಸಂಘಟನೆಗಳು ಆಗ್ರಹಿಸಿವೆ. ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಆಗ್ರಹಿಸಿವೆ. ಮಹಾರಾಷ್ಟ್ರ ಸರಕಾರದ ಸಂಪೂರ್ಣ ವೈಫಲ್ಯವನ್ನು ಈ ಘಟನೆ ಎತ್ತಿ ತೋರಿಸುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.