ಲಕ್ನೋ: ದೇಶದ ವಿವಿಧ ರಾಜ್ಯಗಳಲ್ಲಿ ಸಿಲುಕಿ ಹಾಕಿಕೊಂಡಿದ್ದ ತನ್ನ ರಾಜ್ಯದ ವಲಸೆ ಕಾರ್ಮಿಕರು ಮತ್ತು ದಿನಗೂಲಿ ಕಾರ್ಮಿಕರನ್ನು ವಾಪಾಸ್ ಕರೆತಂದು ಮೊದಲ ರಾಜ್ಯವಾಗಿ ಉತ್ತರಪ್ರದೇಶ ಹೊರಹೊಮ್ಮಿದೆ.
ಮೊದಲ ಹಂತವಾಗಿ ಉತ್ತರಪ್ರದೇಶ 2,224 ಕಾರ್ಮಿಕರನ್ನು ಹರಿಯಾಣದಿಂದ ಶನಿವಾರ ಕರೆ ತಂದಿದೆ. ಇವರನ್ನು ಕರೆ ತರಲು 82 ಬಸ್ಗಳನ್ನು ಸರ್ಕಾರ ಕಳುಹಿಸಿಕೊಟ್ಟಿತ್ತು. ರಾಜ್ಯದ 16 ಜಿಲ್ಲೆಗಳಿಗೆ ಸೇರಿದ ಕಾರ್ಮಿಕರು ಇವರಾಗಿದ್ದಾರೆ. ಇವರೆಲ್ಲರನ್ನೂ 14 ದಿನಗಳ ಕ್ವಾರಂಟೈನ್ನಲ್ಲಿ ಇಡಲಾಗಿದೆ. ಇವರೆಲ್ಲರಿಗೂ ರೇಷನ್ ಕಿಟ್, 1 ಸಾವಿರ ರೂಪಾಯಿ ಹಣ ನೀಡಿ ಮನೆಗೆ ಕಳುಹಿಸಲಾಗಿದೆ. ಮನೆಯಲ್ಲೇ ಕ್ವಾರಂಟೈನ್ನಲ್ಲಿ ಇರಲಿದ್ದಾರೆ.
ಇನ್ನೂ 2ನೇ ಹಂತದಲ್ಲಿ 9,500 ಕಾರ್ಮಿಕರು ಉತ್ತರಪ್ರದೇಶಕ್ಕೆ ಆಗಮಿಸುವ ನಿರೀಕ್ಷೆ ಇದೆ.
ಮುಂದಿನ ಎರಡು ತಿಂಗಳ ಅವಧಿಯಲ್ಲಿ ರಾಜ್ಯಕ್ಕೆ ವಾಪಾಸ್ಸಾಗಲಿರುವ ಕಾರ್ಮಿಕರಿಗಾಗಿ ಮತ್ತು ಇತರರಿಗೆ 15 ಲಕ್ಷ ಉದ್ಯೋಗ ಗೋಳನ್ನು ಗ್ರಾಮೀಣ ಪ್ರದೇಶದಲ್ಲಿ ಸೃಷ್ಟಿ ಮಾಡುವ ಸಲುವಾಗಿ ಉತ್ತರಪ್ರದೇಶ ಸರ್ಕಾರವು ಈಗಾಗಲೇ ಸಮಿತಿಯನ್ನು ರಚನೆ ಮಾಡಿದೆ.
ಯುಪಿಯ ಗ್ರಾಮೀಣ ಪ್ರದೇಶಗಳಲ್ಲಿ ಮನ್ರೇಗಾ ಯೋಜನೆಗಳಿಗೆ ಉತ್ತೇಜನ ನೀಡಲು ನಿರ್ಧರಿಸಲಾಗಿದೆ. ಈಗಾಗಲೇ ಯುಪಿಯ 18,823 ಗ್ರಾಮ ಪಂಚಾಯತ್ಗಳಲ್ಲಿ 44,478 ಯೋಜನೆಗಳು ಪ್ರಸ್ತುತ ಜಾರಿಯಲ್ಲಿದೆ. ಈ ಯೋಜನೆಗಳು 4,23,231 ಜನರಿಗೆ ಉದ್ಯೋಗವನ್ನು ನೀಡುತ್ತಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.