ನವದೆಹಲಿ: ಕರೋನಾವೈರಸ್ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ದೇಶವ್ಯಾಪಿಯಾಗಿ ಲಾಕ್ ಡೌನ್ ಅನ್ನು ಜಾರಿಗೊಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ಜನರ ಎಲ್ಲ ಚಟುವಟಿಕೆಗಳು ಸ್ಥಗಿತಗೊಂಡಿದೆ. ದೊಡ್ಡ ದೊಡ್ಡ ಕಾರ್ಖಾನೆಗಳು ತನ್ನ ಚಟುವಟಿಕೆಯನ್ನು ನಿಲ್ಲಿಸಿದೆ. ಮನುಷ್ಯನ ಕುಗ್ಗಿದ ಚಟುವಟಿಕೆಗಳ ಪರಿಣಾಮವಾಗಿ ನದಿ ನೀರುಗಳು ಸಿದ್ಧವಾಗುತ್ತಿವೆ, ಪ್ರಕೃತಿ ಸ್ವಚ್ಛಗೊಳ್ಳುತ್ತಿದೆ, ಮಾಲಿನ್ಯದ ಮಟ್ಟ ಕಡಿಮೆಯಾಗುತ್ತಿದೆ.
ಸ್ನಾನ ಮಾಡಲು ಕೂಡ ಯೋಗ್ಯವಾಗಿರದ ಯಮುನಾ ನದಿಯ ನೀರು ಈಗ ಕುಡಿಯಲು ಯೋಗ್ಯವಾಗಿದೆ. ಇನ್ನೊಂದೆಡೆ ದೇಶದ ಅತ್ಯಂತ ಪವಿತ್ರ ನದಿ ಎಂದು ಪರಿಗಣಿಸಲ್ಪಟ್ಟಿರುವ ಗಂಗಾನದಿ ಕೂಡ ಅತ್ಯಂತ ಶುಭ್ರವಾಗಿ ಹರಿಯುತ್ತಿದೆ.
ವರದಿಗಳ ಪ್ರಕಾರ, 2000 ಬಳಿಕ ಇದೇ ಮೊದಲ ಬಾರಿಗೆ ರಿಷಿಕೇಶ ಮತ್ತು ಹರಿದ್ವಾರದಲ್ಲಿನ ಗಂಗಾ ನದಿಯ ನೀರು ಕುಡಿಯಲು ಯೋಗ್ಯವಾಗಿದೆ. ಲಾಕ್ ಡೌನ್ ಹಿನ್ನಲೆಯಲ್ಲಿ ನೀರಿನ ಗುಣಮಟ್ಟವನ್ನು ಪರೀಕ್ಷೆಗೊಳಪಡಿಸುವ ನಿಟ್ಟಿನಲ್ಲಿ ಉತ್ತರಾಖಂಡ ಮಾಲಿನ್ಯ ನಿಯಂತ್ರಣ ಮಂಡಳಿ ನೀರಿನ ಸ್ಯಾಂಪಲ್ ಅನ್ನು ತೆಗೆದುಕೊಂಡು ಪರಿಶೀಲನೆಗೆ ನಡೆಸಿದೆ. ಪರೀಕ್ಷೆಯ ಸಕಾರಾತ್ಮಕವಾಗಿ ಹೊರಹೊಮ್ಮಿದೆ.
2000ದಲ್ಲಿ ಉತ್ತರಾಖಂಡ ರಾಜ್ಯ ರಚನೆಯಾದ ಬಳಿಕ ಹರಿದ್ವಾರ ಮತ್ತು ಋಷಿಕೇಶದ ಗಂಗಾ ನದಿಯ ನೀರು ಕುಡಿಯಲು ಯೋಗ್ಯವಾಗಿ ಹೊರಹೊಮ್ಮಿದೆ.
ಲಾಕ್ ಡೌನ್ ಕಾರಣದಿಂದಾಗಿಯೇ ಗಂಗಾ ನದಿಯ ನೀರು ಕುಡಿಯಲು ಯೋಗ್ಯವಾಗಿದೆ ಎಂದು ತಜ್ಞರು ಅಭಿಪ್ರಾಯಿಸಿದ್ದಾರೆ. ಲಾಕ್ ಡೌನ್ ಹಿನ್ನೆಲೆಯಲ್ಲಿ ಶೇಕಡ 80ರಷ್ಟು ಕೊಳಚೆಗಳು ಗಂಗಾನದಿಯನ್ನು ಸೇರುವುದು ತಪ್ಪಿದೆ.
ಕೇವಲ ಋಷಿಕೇಶ ಮತ್ತು ಹರಿದ್ವಾರ ಮಾತ್ರ ಅಲ್ಲ, ಗಂಗೆಯ 36 ಮಾನಿಟರಿಂಗ್ ಯೂನಿಟ್ಗಳ ಪೈಕಿ 27 ಸ್ನಾನ ಮಾಡಲು ಮತ್ತು ಜಲಚರಗಳ ವಾಸಕ್ಕೆ ಸುರಕ್ಷಿತವಾಗಿ ಹೊರಹೊಮ್ಮಿದೆ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಹೇಳಿದೆ.
ಕಳೆದ 34 ವರ್ಷಗಳಲ್ಲಿ 30 ಸಾವಿರ ಕೋಟಿ ರೂ.ಗಳನ್ನು ಗಂಗಾ ನದಿ ಸ್ವಚ್ಛತಾ ಯೋಜನೆಗಳಿಗೆ ವಿನಿಯೋಗಿಸಲಾಗಿದೆ, ಆದರೆ ಯಾವತ್ತೂ ಕೂಡ ಇಷ್ಟೊಂದು ದೊಡ್ಡ ಮಟ್ಟದ ಫಲಿತಾಂಶಗಳು ಬಂದಿರಲಿಲ್ಲ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.