ನವದೆಹಲಿ: ಲಾಕ್ಡೌನ್ ಎಫೆಕ್ಟ್ ದೇಶ ಕಾಯುವ ಯೋಧರಿಗೂ ತಟ್ಟಿದೆ. ಸೇನೆಯ ದಕ್ಷಿಣ ಕಮಾಂಡ್ಗಳಾದ ಸಿಕಂದರಾಬಾದ್, ಬೆಳಗಾವಿ, ಬೆಂಗಳೂರು ಮೊದಲಾದೆಡೆಗಳಲ್ಲಿ ಸೇನಾ ತರಬೇತಿ ಮುಗಿಸಿ ಪೂರ್ವ ಮತ್ತು ಉತ್ತರ ಕಮಾಂಡ್ಗಳಲ್ಲಿ ಸೇವೆ ಸಲ್ಲಿಸಲು ನಿಯೋಜನೆಗೊಂಡಿರುವ ಯೋಧರಿಗೆ ಅಲ್ಲಿಗೆ ತೆರಳಿ ಕರ್ತವ್ಯಕ್ಕೆ ಹಾಜರಾಗದಂತಾಗಿದೆ. ಇವರ ಸಮಸ್ಯೆ ಮನಗಂಡಿರುವ ಭಾರತೀಯ ರೈಲ್ವೇ ಇಲಾಖೆ, ಯೋಧರನ್ನು ಕರೆದೊಯ್ಯಲು ವಿಶೇಷ ರೈಲು ಸೇವೆಗಳನ್ನು ಒದಗಿಸಲು ಮುಂದಾಗಿದೆ.
ಲಾಕ್ಡೌನ್ ಅವಧಿ ಮತ್ತೆ 19 ದಿನ ಅಂದರೆ ಮೇ 3 ರ ವರೆಗೆ ವಿಸ್ತರಣೆಗೊಂಡಿದ್ದು ಸೇನಾ ತರಬೇತಿ ಮುಗಿಸಿರುವ ಯೋಧರು, ತಮಗೆ ನಿಗದಿಪಡಿಸಿದ ಪ್ರದೇಶಗಳಿಗೆ ಕರ್ತವ್ಯಕ್ಕೆ ತೆರಳಲು ಹರಸಾಹಸ ಪಡುವಂತಾಗಿದೆ. ಇವರ ಪರಿಸ್ಥಿತಿ ಅರಿತ ರೈಲ್ವೆ ಇಲಾಖೆ, ಗೃಹ ಇಲಾಖೆ ಮತ್ತು ರಕ್ಷಣಾ ಇಲಾಖೆಗಳು ಜಂಟಿಯಾಗಿ ಇವರಿಗೆ ವಿಶೇಷ ರೈಲು ಸೇವೆಗಳನ್ನು ಒದಗಿಸುವ ತೀರ್ಮಾನ ಕೈಗೊಂಡಿವೆ. ಅದರಂತೆ 1,200 ಯೋಧರಿಗೆ ಜಮ್ಮುವಿನ ತಾವಿ ಮತ್ತು ಗುವಾಹಟಿಗೆ ತೆರಳಲು 2 ಸ್ಪೆಷಲ್ ರೈಲಿನ ವ್ಯವಸ್ಥೆ ಮಾಡಲಾಗಿದೆ.
ಯೋಧರ ಆರೋಗ್ಯ ಪರಿಶೀಲಿಸಿದ ನಂತರ ಅಥವಾ ಕಡ್ಡಾಯ ಕ್ವಾರಂಟೈನ್ ಅವಧಿ ಪೂರೈಸಿದ ಯೋಧರನ್ನು ನಿಗದಿತ ಕಮಾಂಡ್ಗಳಿಗೆ ತಲುಪಿಸಲಾಗುತ್ತದೆ. ಇದು ಎಸಿ ರೈಲು ಆಗಿದ್ದು 72 ಜನ ಹಿಡಿಯುವ ಬೋಗಿಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಟ್ಟಿನಿಂದ 40 ಯೋಧರನ್ನು ಮಾತ್ರ ಕುಳ್ಳಿರಿಸಲಾಗುವುದಾಗಿಯೂ ರೈಲ್ವೆ ಮಾಹಿತಿ ನೀಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.