ಮುಂಬಯಿ: ಸುಮಾರು 30 ವರ್ಷಗಳ ಹಿಂದೆ ಕಾಶ್ಮೀರಿ ಪಂಡಿತರ ಮೇಲೆ ನಡೆದ ದೌರ್ಜನ್ಯ, ಹತ್ಯೆಗಳನ್ನು ಆಧರಿಸಿದ ಸಿನಿಮಾವೊಂದು ಬಾಲಿವುಡ್ನಲ್ಲಿ ನಿರ್ಮಾಣವಾಗಿದೆ. ‘ಶಿಕರ: ದಿ ಅನ್ಟೋಲ್ಡ್ ಸ್ಟೋರಿ ಆಫ್ ಕಾಶ್ಮೀರಿ ಪಂಡಿತ್ಸ್’ ಎಂಬ ಶೀರ್ಷಿಕೆಯ ಸಿನಿಮಾವನ್ನು ವಿಧು ವಿನೋದ್ ಚೋಪ್ರಾ ಅವರು ನಿರ್ದೇಶಿಸಿದ್ದು, ಇದರ ಟ್ರೈಲರ್ ಬಿಡುಗಡೆಯಾಗಿದೆ.
1990ರ ಜನವರಿಯಲ್ಲಿ ನಡೆದ ಘಟನೆಗಳ ಮೇಲೆ ಈ ಸಿನಿಮಾ ಬೆಳಕು ಚೆಲ್ಲಲಿದೆ. ಶ್ರೀನಗರ ಕಣಿವೆಯಲ್ಲಿ ಕಾಶ್ಮೀರಿ ಪಂಡಿತರು ಅನುಭವಿಸಿದ ದೌರ್ಜನ್ಯಗಳನ್ನು ಈ ಸಿನಿಮಾ ಎಳೆ ಎಳೆಯಾಗಿ ವಿವರಿಸಲಿದೆ.
ಟ್ರೈಲರ್ ಬಿಡುಗಡೆಯ ವೇಳೆ ಮಾತನಾಡಿದ ವಿಧು ವಿನೋದ್ ಚೋಪ್ರಾ, ತಾನು ಇಂದು ನಡೆಯುತ್ತಿರುವ ಹಿಂಸಾಚಾರಗಳನ್ನು ಮತ್ತು 30 ವರ್ಷಗಳ ಹಿಂದೆ ನಡೆದ ಹಿಂಸಾಚಾರಗಳನ್ನು ಕಟುವಾಗಿ ಖಂಡಿಸುತ್ತೇನೆ ಎಂದಿದ್ದಾರೆ.
“ನಾನು ಎಲ್ಲಾ ಹಿಂಸಾಚಾರವನ್ನು ಖಂಡಿಸುತ್ತೇನೆ. ಸಿನಿಮಾದ ಸಲುವಾಗಿ ಈ ಮಾತನ್ನು ನಾನು ಹೇಳುತ್ತಿಲ್ಲ. 30 ವರ್ಷಗಳ ಹಿಂದೆ ನಡೆದ ಹಿಂಸಾಚಾರವನ್ನು ನಾನು ಖಂಡಿಸುತ್ತೇನೆ ಮತ್ತು ಇಂದು ನಡೆಯುತ್ತಿರುವ ಹಿಂಸಾಚಾರವನ್ನು ನಾನು ಖಂಡಿಸುತ್ತೇನೆ. ಆದರೆ ನನ್ನ ಹೃದಯದಲ್ಲಿ ಎಲ್ಲೋ ಆಳದಲ್ಲಿ ಒಂದು ಭರವಸೆ ಇದೆ – ಬಹುಶಃ ನಾನು ಕಾಶ್ಮೀರದವನು ಎಂಬ ಕಾರಣ ಕಾವ್ಯಾತ್ಮಕವಾಗಿ ಕಾಣುತ್ತೇನೆ. ಒಂದು ದಿನ ಹಿಮಾವೃತ ಪರ್ವತ ಕರಗುತ್ತದೆ, ಹಿಮವು ಇಳಿದು ಹೋಗುತ್ತದೆ ಮತ್ತು ವಸಂತಕಾಲ ಬರುತ್ತದೆ ಎಂದು ನಾನು ಭಾವಿಸುತ್ತೇನೆ. ಇದನ್ನು ನಾನು ಪ್ರಾಮಾಣಿಕತೆಯಿಂದ ಹೇಳುತ್ತಿದ್ದೇನೆ. ಆ ದಿನ ಶೀಘ್ರದಲ್ಲೇ ಅಲ್ಲಿಗೆ ಬರಬಹುದೆಂದು ನಾನು ಭಾವಿಸುತ್ತೇನೆ. ನಮ್ಮಲ್ಲಿನ ಪ್ರತಿಯೊಬ್ಬರಿಗೂ ಭಾರತ ಹೂಬಿಡುವ ಮರವಾಗಲಿದೆ “ಎಂದು ಚೋಪ್ರಾ ಹೇಳಿದ್ದಾರೆ.
ಕಾಶ್ಮೀರಿ ಪಂಡಿತರ ಸಂಕಷ್ಟಗಳನ್ನು ಹೇಳುವ ಸಿನಿಮಾಗಳು ಬಾಲಿವುಡ್ನಲ್ಲಿ ಬಂದಿದ್ದೇ ಕಡಿಮೆ. ಆದರೆ ಶಿಖರ ಈ ನಿಟ್ಟಿನಲ್ಲಿ ಒಂದು ಉತ್ತಮ ಪ್ರಯತ್ನವಾಗಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.