ನವದೆಹಲಿ: ಈಗಾಗಲೇ ತನ್ನ ಮೊದಲ ಮಾನವಸಹಿತ ಮಿಷನ್ ಅನ್ನು ಬಾಹ್ಯಾಕಾಶಕ್ಕೆ ಕಳುಹಿಸಲು ಸಜ್ಜಾಗಿರುವ ಭಾರತ, ಗಗನಯಾತ್ರಿಗಳಿಗೆ ತರಬೇತಿ ನೀಡುವ ವಿಶ್ವ ದರ್ಜೆಯ ಸೌಲಭ್ಯವನ್ನು ಮುಂದಿನ ಮೂರು ವರ್ಷಗಳಲ್ಲಿ ಕರ್ನಾಟಕದ ಚಿತ್ರದುರ್ಗ ಜಿಲ್ಲೆಯ ಬೆಂಗಳೂರು-ಪುಣೆ ಎನ್ಎಚ್ 4 ನಲ್ಲಿನ ಚಳ್ಳಕೆರೆಯಲ್ಲಿ ಸ್ಥಾಪಿಸಲು ಚಿಂತನೆ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ.
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ತನ್ನ ಯುವ ಹ್ಯೂಮನ್ ಸ್ಪೇಸ್ ಫ್ಲೈಟ್ ಸೆಂಟರ್ (ಎಚ್ಎಸ್ಎಫ್ಸಿ) ಅನ್ನು ನಿರ್ಮಿಸುವ ಉನ್ನತ ಮೂಲಸೌಕರ್ಯಗಳನ್ನು ರಚಿಸಲು 2,700 ಕೋಟಿ ರೂಪಾಯಿಗಳ ಮಹತ್ವದ ಯೋಜನೆಯನ್ನು ಪ್ರಸ್ತಾಪಿಸಿದೆ, ಇದು ಬಾಹ್ಯಾಕಾಶ ಯಾತ್ರಿಕರಿಗೆ ಸಂಬಂಧಿಸಿದ ಮೂಲಸೌಕರ್ಯ ಮತ್ತು ಚಟುವಟಿಕೆಗಳನ್ನು ಏಕೀಕರಿಸುವ ಏಕ-ನಿಲುಗಡೆಯಾಗಲಿದೆ.
ಈ ಸೌಲಭ್ಯವು ಭಾರತಕ್ಕೆ ದೀರ್ಘಾವಧಿಯಲ್ಲಿ ಸಹಾಯ ಮಾಡಲಿದೆ. ಯಾಕೆಂದರೆ ಭಾರತ ಪ್ರಸ್ತುತ ವಿದೇಶಗಳಲ್ಲಿ ತರಬೇತಿ ಮತ್ತು ಅಂತಹ ಸೌಲಭ್ಯಗಳನ್ನು ಬಳಸಲು ಸಾಕಷ್ಟು ಮೊತ್ತವನ್ನು ವ್ಯಯ ಮಾಡುತ್ತಿದೆ. 2022 ಕ್ಕೆ ನಿಗದಿಯಾಗಿದ್ದ ಮೊದಲ ಗಗನಯಾನ ಯೋಜನೆಗೆ ನಾಲ್ಕು ಗಗನಯಾತ್ರಿ ಅಭ್ಯರ್ಥಿಗಳನ್ನು ರಷ್ಯಾಕ್ಕೆ ಕಳುಹಿಸಲು ಕೂಡ ಇದು ಕಾರಣವಾಗಿದೆ.
30 ಮತ್ತು 40 ವರ್ಷದ ಭಾರತೀಯ ವಾಯುಪಡೆಯ ನಾಲ್ಕು ಪೈಲಟ್ಗಳು “ಯುರಿ ರಿ ಗಗಾರಿನ್ ಕಾಸ್ಮೋಟನ್ ಟ್ರೈನಿಂಗ್ ಸೆಂಟರ್”ನಲ್ಲಿ 15 ತಿಂಗಳ ಕಾಲ ಗಗನಯಾನ ತರಬೇತಿ ಪಡೆಯಲಿದ್ದಾರೆ.
ಚಳ್ಳಕೆರೆ, ಬೆಂಗಳೂರಿನಿಂದ ಸುಮಾರು 400 ಕಿ.ಮೀ ದೂರದಲ್ಲಿದೆ ಮತ್ತು ಇದು ದೇಶದ ಪ್ರಮುಖ ವೈಜ್ಞಾನಿಕ ಸಂಸ್ಥೆಗಳಿಗೆ ನೆಲೆಯಾಗಿದೆ. ಇಸ್ರೋ, ಡಿಆರ್ಡಿಓದ ಸುಧಾರಿತ ಏರೋನಾಟಿಕಲ್ ಟೆಸ್ಟ್ ಶ್ರೇಣಿ, ಭಾಭಾ ಪರಮಾಣು ಸಂಶೋಧನಾ ಕೇಂದ್ರ ಮತ್ತು ಭಾರತೀಯ ವಿಜ್ಞಾನ ಸಂಸ್ಥೆಯ ಸೌಲಭ್ಯಗಳನ್ನು ಹೊಂದಿರುವ ಕಾರಣ ಇದನ್ನು ವಿಜ್ಞಾನ ನಗರ ಎಂದೂ ಕರೆಯುತ್ತಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.