ಬೆಂಗಳೂರು: ದೇಶವ್ಯಾಪಿಯಾಗಿ ನ್ಯಾಷನಲ್ ರಿಜಿಸ್ಟರ್ ಆಫ್ ಸಿಟಿಜನ್ಸ್ ಅನ್ನು ತರುವುದಾಗಿ ನರೇಂದ್ರ ಮೋದಿ ಸರ್ಕಾರ ಈಗಾಗಲೇ ಸ್ಪಷ್ಟಪಡಿಸಿದೆ. ಅಕ್ರಮವಾಗಿ ನೆಲೆಸಿರುವ ವಿದೇಶಿ ಪ್ರಜೆಗಳನ್ನು ಪತ್ತೆ ಹಚ್ಚುವ ಸಲುವಾಗಿ ದೇಶವ್ಯಾಪಿಯಾಗಿ ಎನ್ಆರ್ಸಿ ಅನ್ನು ತರಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಮತ್ತು ದಕ್ಷಿಣ ಭಾರತದ ಮಸೀದಿಗಳು ಈಗಾಗಲೇ ಸಕಲ ಸಿದ್ಧತೆಗಳನ್ನು ನಡೆಸುತ್ತಿದೆ.
ಈ ಬಗ್ಗೆ ತಿಳಿಸಿರುವ ಜಾಮಿಯಾ ಮಸ್ಜಿದ್ ಇಮಾಮ್ ಮೌಲಾನ ಮಸೂದ್ ಇಮ್ರಾನ್ ಅವರು, “ಹೆಸರು ಬಹಳ ಮುಖ್ಯವಾಗುತ್ತದೆ. ಉದಾಹರಣೆಗೆ ಮೊಹಮ್ಮದ್ ಎಂಬ Md, Mohd ಅಥವಾ ಮಹಮದ್ ಎಂದು ವಿವಿಧ ಸರಕಾರಿ ದಾಖಲೆಗಳಲ್ಲಿ ಉಲ್ಲೇಖ ಮಾಡಿದ್ದರೆ ಈ ತಪ್ಪುಗಳನ್ನು ಸರಿಪಡಿಸಲು ನಾವು ಮುಂದಾಗಿದ್ದೇವೆ” ಎಂದಿದ್ದಾರೆ.
ನಾವು ಮಸೀದಿ ಮತ್ತು ಹೊರಗಡೆ ಒಂದೇ ಹೆಸರು ಮತ್ತು ಒಂದೇ ಹುಟ್ಟಿದ ದಿನಾಂಕವನ್ನು ಹೊಂದಿದ್ದೇವೆ ಎಂಬುದನ್ನು ಇತರ ನಂಬಿಕೆ ಜನರಿಗೆ ಖಚಿತಪಡಿಸಲು ಮುಂದಾಗಿದ್ದೇವೆ ಎಂದಿದ್ದಾರೆ.
ಪೌರತ್ವ ತಿದ್ದುಪಡಿ ಮಸೂದೆ ಅಥವಾ ರಾಷ್ಟ್ರೀಯ ನಾಗರಿಕತ್ವ ನೋಂದಣಿ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಅವರು, ಅಸ್ಸಾಂನಲ್ಲಿ ರಾಷ್ಟ್ರೀಯ ನಾಗರಿಕತ್ವ ನೋಂದಣಿಯನ್ನು ನಡೆಸಿದಾಗ ಹಲವಾರು ಮಂದಿ ದಾಖಲೆಗಳ ಪರಿಣಾಮವಾಗಿ ಪರಿತಪಿಸಿದರು ಎಂದಿದ್ದಾರೆ.
“ನಾನು ಕಳೆದ 14 ವರ್ಷಗಳಿಂದ ಅಮೆರಿಕಾಗೆ ನಿರಂತರವಾಗಿ ಭೇಟಿ ನೀಡುತ್ತಿದ್ದೇನೆ. ಅಮೆರಿಕ ಮತ್ತು ಯುರೋಪ್ನಲ್ಲಿ ದಾಖಲೆ ಮಾಡಿಸಲು ಯಾವುದೇ ಸಮಸ್ಯೆಗಳಿಲ್ಲ. ಆದರೆ ಭಾರತದಲ್ಲಿ ಸಮಸ್ಯೆ ಬಹಳಷ್ಟು ಪ್ರಮಾಣದಲ್ಲಿ ಇದೆ” ಎಂದಿದ್ದಾರೆ.
ಮತದಾರರ ಚೀಟಿ ಮತ್ತು ಹೆಸರು ಹೀಗೆ ಯಾವುದೇ ದಾಖಲೆಗಳನ್ನು ಪರಿಶೀಲನೆಗಾಗಿ ಸರ್ಕಾರ ಕೇಳಿದರೂ ಅದನ್ನು ಮಸೀದಿಯ ಮೂಲಕವೇ ಅದನ್ನು ನೀಡಲಾಗುವುದು ಎಂದಿದ್ದಾರೆ.
ಅನಕ್ಷರತೆ ಎಂಬುದು ಭಾರತದಲ್ಲಿನ ಮುಸ್ಲಿಂ ಸಮುದಾಯದ ದೊಡ್ಡ ಸಮಸ್ಯೆಯಾಗಿದೆ. ಹೀಗಾಗಿ ದಾಖಲೆಗಳನ್ನು ಸರಿಪಡಿಸುವ ಕಾರ್ಯಕ್ಕೆ ನಾನು ಇಳಿದೆ ಎಂದು ಅವರು ಹೇಳಿದ್ದಾರೆ.
ಜನರು ಅಕ್ಷರಸ್ಥರಾಗಿದ್ದಾರೆ ಮಾತ್ರ ದಾಖಲೆಗಳು ಸರಿಯಾಗಿರುತ್ತದೆ ಎಂದು ಅವರು ಹೇಳಿದ್ದಾರೆ.
ಕೆಲವರಿಗೆ ಒಂದು ಹೊತ್ತಿನ ಊಟ ಮಾಡುವುದೇ ಕಷ್ಟದ ಪರಿಸ್ಥಿತಿ, ಹಾಗಿರುವಾಗ ದಾಖಲೆಗಳನ್ನು ಸರಿಯಾಗಿ ಇಡುವುದಾದರೂ ಹೇಗೆ ಎಂದು ಅವರು ಪ್ರಶ್ನಿಸಿದ್ದಾರೆ.
ಕರ್ನಾಟಕದ 1600 ಮಸೀದಿಗಳು ದಾಖಲೆಯ ಪರಿಶೀಲನೆ ನಡೆಸುವ ಕಾರ್ಯವನ್ನು ಮಾಡಲಿದೆ ಎಂದು ಅವರು ಹೇಳಿದ್ದಾರೆ.
ಕರ್ನಾಟಕ ಮಾತ್ರವಲ್ಲದೆ ದಕ್ಷಿಣ ಭಾರತದ ಹಲವು ಮಸೀದಿಗಳು ಈ ಕಾರ್ಯವನ್ನು ಮಾಡಲು ಈಗಾಗಲೇ ಸಿದ್ಧತೆಯನ್ನು ನಡೆಸಿಕೊಳ್ಳುತ್ತಿವೆ. ಒಂದು ವೇಳೆ ರಾಷ್ಟ್ರೀಯ ನಾಗರಿಕತ್ವ ನೋಂದಣಿ ಅನುಷ್ಠಾನಕ್ಕೆ ಬಂದರೆ ಮುಸ್ಲಿಂ ನಾಗರಿಕರು ಪರದಾಡಬಾರದು ಋಂಬ ಉದ್ದೇಶವನ್ನಿಟ್ಟುಕೊಂಡು ಈ ಕಾರ್ಯಕ್ಕೆ ಮುಂದಾಗಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.