ಬೆಂಗಳೂರು: ಸೌತ್ ವೆಸ್ಟರ್ನ್ ರೈಲ್ವೇಯು ಯಾವುದೇ ಸರಕಾರಿ ಸಂಸ್ಥೆಗಳು ಮಾಡದಂತಹ ಕಾರ್ಯವನ್ನು ಮಾಡಿದೆ. ನಿಗದಿತ ವೇಳೆಗೆ ಮೊದಲೇ ಎಸ್ಕಲೇಟರ್ ಅಳವಡಿಕೆ ಕಾರ್ಯವನ್ನು ಮುಕ್ತಾಯಗೊಳಿಸಿದ್ದು ಮಾತ್ರವಲ್ಲದೆ, ಯಾವುದೇ ವಿವಿಐಪಿಗಳಿಗೆ ಕಾಯದೆ ಕಾರ್ಮಿಕಳ 10 ವರ್ಷದ ಮಗಳ ಮೂಲಕ ಎಸ್ಕಲೇಟರ್ ಅನ್ನು ಉದ್ಘಾಟನೆಗೊಳಿಸಿದೆ.
ತನ್ನ ಈ ಕಾರ್ಯಕ್ಕಾಗಿ ಕೆಎಸ್ಆರ್ ಬೆಂಗಳೂರು ಸಿಟಿ ರೈಲ್ವೆ ಸ್ಟೇಷನ್ ಜನರಿಂದ ಮತ್ತು ಕಾರ್ಮಿಕರಿಂದ ಶ್ಲಾಘನೆಯನ್ನು ಪಡೆದುಕೊಂಡಿದೆ.
ಪ್ಲಾಟ್ಫಾರ್ಮ್ ನಂಬರ್ 4 ನಲ್ಲಿ ಅಳವಡಿಸಲಾಗಿರುವ ಎಸ್ಕಲೇಟರ್ ಮತ್ತು ನವೀಕರಿಸಿದ ಎಸಿ ವೇಟಿಂಗ್ ಹಾಲ್ ಅನ್ನು ಬೆಂಗಳೂರು ಸೆಂಟ್ರಲ್ ಸಂಸದ ಪಿಸಿ ಮೋಹನ್ ಅವರು ಶನಿವಾರ ಉದ್ಘಾಟನೆಗೊಳಿಸಬೇಕಿತ್ತು. ಆದರೆ ಅಯೋಧ್ಯ ತೀರ್ಪು ಹಿನ್ನೆಲೆಯಲ್ಲಿ ಸೆಕ್ಷನ್ 144 ಅನ್ನು ವಿಧಿಸಿದ್ದ ಕಾರಣ ಔಪಚಾರಿಕ ಉದ್ಘಾಟನಾ ಸಮಾರಂಭವು ರದ್ದುಗೊಂಡಿತ್ತು. ಆದರೆ ಸಂಸದರು ಕಾರ್ಯಕ್ರಮ ರದ್ದುಗೊಂಡರೂ ಸೇವೆಯನ್ನು ಸಾರ್ವಜನಿಕರಿಗಾಗಿ ತರಬೇಕು ಎಂಬ ಇಂಗಿತವನ್ನು ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ರೈಲ್ವೆ ಅಧಿಕಾರಿಗಳು ಹತ್ತು ವರ್ಷದ ಬೆಗುಮ್ಮಳಿಂದ ಉದ್ಘಾಟನೆಗೊಳಿಸಿದರು. ಈಕೆ ಅದೇ ಸ್ಥಳದಲ್ಲೇ ಕೆಲಸ ಮಾಡುತ್ತಿದ್ದ ಮಹಿಳೆಯ ಮಗಳಾಗಿದ್ದಾಳೆ.
ಇತ್ತೀಚಿನ ವರ್ಷಗಳಲ್ಲಿ ಸರ್ಕಾರದ ಯೋಜನೆಯನ್ನು ಜನಸಾಮಾನ್ಯರೊಬ್ಬರು ಉದ್ಘಾಟನೆಗೊಳಿಸುತ್ತಿರುವುದು ಇದೇ ಮೊದಲು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.