ಬಾಗಲಕೋಟೆ: ನವೆಂಬರ್ 1 ಬಂದಾಗ ಮಾತ್ರ ಹೆಚ್ಚಿನವರಿಗೆ ಕನ್ನಡದ ಬಗ್ಗೆ ನೆನಪಾಗುತ್ತದೆ. ಆದರೆ ಕೆಲವರು ಮಾತ್ರ ನಿತ್ಯವೂ ಜೀವನದಲ್ಲಿ ಕನ್ನಡತನವನ್ನು ಅಳವಡಿಸಿಕೊಳ್ಳುತ್ತಾರೆ. ಕನ್ನಡವೇ ಉಸಿರು ಎಂಬಂತೆ ಜೀವಿಸುತ್ತಾರೆ. ಅಂತಹ ಅಪರೂಪದ ವ್ಯಕ್ತಿಗಳಲ್ಲಿ ಬಾಗಲಕೋಟೆಯ ದೀರೇಂದ್ರ ಜೋಷಿ ಕೂಡ ಒಬ್ಬರು.
1983ರಲ್ಲಿ 27 ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಸ್ಥಾಪಿಸಲ್ಪಟ್ಟ ಕಿಲ್ಲಾ ವಿಭಾಗದ ಡಾ.ರಾಜಕುಮಾರ ಅಭಿಮಾನಿಗಳ ಸಂಘದ ಸದಸ್ಯರಾಗಿರುವ ದೀರೇಂದ್ರ ಅವರು, ಸಂಘದ ಇತರ ಸದಸ್ಯರ ಜೊತೆಗೂಡಿ ಕಿಲ್ಲಾ ಕೊತ್ತಲೇಶ ದೇವಸ್ಥಾನದ ಹತ್ತಿರ ನಾಮಫಲಕ ಸ್ಥಾಪಿಸಿ ಅದರ ಮೇಲೆ ಶಾಶ್ವತವಾಗಿ ಕರ್ನಾಟಕದ ಧ್ವಜವನ್ನು ಸ್ಥಾಪಿಸಿದ್ದಾರೆ. ಕಳೆದ 34 ವರ್ಷಗಳಿಂದ ನಿರಂತರವಾಗಿ ಇಲ್ಲಿ ಕನ್ನಡದ ಬಾವುಟ ರಾರಾಜಿಸುತ್ತಿದೆ.
ಇಷ್ಟು ಮಾತ್ರವಲ್ಲದೇ, ಕನ್ನಡ ಧ್ವಜ ಇರುವ ಪರಿಸರವನ್ನು ಸ್ವಚ್ಛವಾಗಿಡುವ ಕಾರ್ಯವನ್ನೂ ಅವರು ನಡೆಸುತ್ತಾ ಬಂದಿದ್ದಾರೆ. ನಿತ್ಯ ಇಲ್ಲಿಗೆ ಬಂದು ಸ್ವಚ್ಛತಾ ಕಾರ್ಯವನ್ನು ಮಾಡುತ್ತಾರೆ. ಇಲ್ಲಿ ಕಸಕಡ್ಡಿಗಳನ್ನು ಹಾಕದಂತೆ, ಉಗುಳದಂತೆ ಜನರಿಗೆ ಅವರು ಕಿವಿಮಾತು ಹೇಳುತ್ತಿರುತ್ತಾರೆ, ಯಾವುದೇ ವಾಹನಗಳಿಗೂ ಇಲ್ಲಿ ನಿಲುಗಡೆ ಮಾಡಲು ಅವರು ಅವಕಾಶವನ್ನು ನೀಡುವುದಿಲ್ಲ.
ತಾನು ಕನ್ನಡ ಪ್ರೇಮಿ ಅಂತ ಹೆಸರಿಗೆ ತೋರಿಸಿಕೊಳ್ಳುತ್ತಿರುವವರ ಮಧ್ಯೆ ನಿಸ್ವಾರ್ಥವಾಗಿ ಕನ್ನಡ ಸೇವೆ ಮಾಡುತ್ತಿರುವ ನಮ್ಮೊಳಗಿನ ಕನ್ನಡಿಗನೊಬ್ಬನ ಕನ್ನಡ ಪ್ರೇಮ ಎಲ್ಲರಿಗೂ ಮಾದರಿಯಾಗಿದೆ.
ಆ ಹೆಮ್ಮೆಯ ಕನ್ನಡಿಗ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸದಸ್ಯರೂ ಆಗಿದ್ದಾರೆ. ಇವರ ಕನ್ನಡದ ಬದುಕು ನಿಜಕ್ಕೂ ಅವಿಸ್ಮರಣೀಯ. ಇವರು ನಿಜವಾದ ಕನ್ನಡ ಪ್ರೇಮ ಮತ್ತೊಬ್ಬರಿಗೆ ಪ್ರೇರಣಾದಾಯಿಯಾಗಿದೆ. ಕನ್ನಡದ ಹೆಸರಿನಲ್ಲಿ ತಮ್ಮ ಬೆಳೆ ಬೇಯಿಸಿಕೊಳ್ಳುತ್ತಿರುವ ಸ್ವಾರ್ಥಿಗಳು ಇವರನ್ನು ನೋಡಿ ಕಲಿಯಬೇಕಾಗುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.