ನವದೆಹಲಿ: ಶಿಕ್ಷಕರು ಕೇವಲ ಬೋಧನೆಯತ್ತ ಮಾತ್ರ ಗಮನ ಹರಿಸಬೇಕು, ಅವರನ್ನು ಯಾವುದೇ ಶೈಕ್ಷಣಿಕವಲ್ಲದ ಕಾರ್ಯಕ್ಕೆ ಬಳಸಿಕೊಳ್ಳಬಾರದು ಎಂದು ಪ್ರಧಾನಿ ನರೇಂದ್ರ ಮೋದಿ ನಿಯೋಜಿತ ಕಾರ್ಯದರ್ಶಿಗಳ ತಂಡ ಶಿಫಾರಸ್ಸು ಮಾಡಿದೆ.
ಶಿಕ್ಷಕರನ್ನು ಶೈಕ್ಷಣಿಕವಲ್ಲದ ಇನ್ನಿತರ ಕಾರ್ಯಗಳಿಗೆ ಬಳಸಿಕೊಳ್ಳುವುದರಿಂದ ಅವರ ಮೂಲಕ ಕರ್ತವ್ಯಕ್ಕೆ ಧಕ್ಕೆಯಾಗುತ್ತದೆ, ಇದರಿಂದ ಫಲಿತಾಂಶದ ಮೇಲೂ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ಈ ತಂಡವು ವರದಿಯನ್ನು ನೀಡಿದೆ.
ಶೈಕ್ಷಣಿಕ ಗುಣಮಟ್ಟದ ಹೆಚ್ಚಳಕ್ಕೆ ಅಗ್ರ ಕೊಡುಗೆಯನ್ನು ನೀಡುವ ಶಿಕ್ಷಕರನ್ನು ಕೇವಲ ಶಿಕ್ಷಣದ ಕರ್ತವ್ಯಕ್ಕೆ ಮಾತ್ರ ನಿಯೋಜಿಸಬೇಕು, ಅವರ ಗಮನವೇನಿದ್ದರೂ ಶಿಕ್ಷಣ ಮಾತ್ರವೇ ಆಗಿರಬೇಕು ಎಂದಿದೆ.
ಗೋವುಗಳ ಸಮೀಕ್ಷೆ, ಪಲ್ಸ್ ಪೋಲಿಯೋ, ಚುನಾವಣಾ ಕರ್ತವ್ಯ, ರೇಷನ್ ಕಾರ್ಡ್ ದೃಢೀಕರಣ ಮುಂತಾದ ಕೆಲಸಗಳಿಗೆ ದೇಶದಾದ್ಯಂತದ ಶಿಕ್ಷಕರನ್ನು ಬಳಸಿಕೊಳ್ಳಲಾಗುತ್ತದೆ. ಇದಕ್ಕೆ ಶಿಕ್ಷಣ ತಜ್ಞರಿಂದ ಭಾರೀ ವಿರೋಧಗಳೂ ಕೇಳಿ ಬರುತ್ತಿವೆ. ಶಿಕ್ಷಣ ಹಕ್ಕು ಕಾಯ್ದೆ 2009ರಡಿಯಲ್ಲಿ ಶಿಕ್ಷಕರನ್ನು ಮೂರು ಕಾರ್ಯಗಳಿಗೆ ಮಾತ್ರ ನಿಯೋಜಿಸಬಹುದು. ಅದೆಂದರೆ, ಸಮೀಕ್ಷೆ, ವಿಪತ್ತು ಮತ್ತು ಚುನಾವಣೆ (ಕೇವಲ ಮತದಾನ ಮತ್ತು ಫಲಿತಾಂಶದ ದಿನ). ಆದರೆ ಕೆಲವೊಂದು ಕಡೆ ಇದಕ್ಕಿಂತಲೂ ಹೆಚ್ಚಿನ ಹೊರೆಯನ್ನು ಶಿಕ್ಷಕರ ಮೇಲೆ ಹೊರಿಸಲಾಗುತ್ತಿದೆ.
ತಂಡವು ತನ್ನ ವರದಿಯನ್ನು ಮಾನವ ಸಂಪನ್ಮೂಲ ಸಚಿವಾಲಯಕ್ಕೆ ಸಲ್ಲಿಕೆ ಮಾಡಿದ್ದು, ಸಚಿವಾಲಯ ಶೀಘ್ರದಲ್ಲೇ ಶಿಫಾರಸ್ಸುಗಳ ಬಗ್ಗೆ ಪರಿಶೀಲನೆ ನಡೆಸಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.