ನವದೆಹಲಿ: ನರೇಂದ್ರ ಮೋದಿ ಸರ್ಕಾರವು ಸೇನೆಯ ದೀರ್ಘಕಾಲದ ಬೇಡಿಕೆಯನ್ನು ಈಡೇರಿಸಿದೆ. ಯುದ್ಧದ ಸಂದರ್ಭದಲ್ಲಿ ನಡೆಯುವ ದುರ್ಘಟನೆಯ ವೇಳೆ ಯೋಧರ ಕುಟುಂಬಿಕರಿಗೆ ನೀಡುವ ಹಣಕಾಸು ನೆರವಿನ ಪ್ರಮಾಣವನ್ನು ರೂ. 2 ಲಕ್ಷದಿಂದ ರೂ. 8 ಲಕ್ಷಕ್ಕೆ ಹೆಚ್ಚಳಗೊಳಿಸಲು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಅನುಮೋದನೆಯನ್ನು ನೀಡಿದ್ದಾರೆ.
ಯುದ್ಧದ ಸಮಯದಲ್ಲಿನ ದುರ್ಘಟನೆ (Battle Casualties) ಯ ಸಂದರ್ಭದಲ್ಲಿ ಸೈನಿಕರ ಕುಟುಂಬಗಳಿಗೆ ನೀಡಲಾಗುವ ಆರ್ಥಿಕ ನೆರವಿನ ಮೊತ್ತವನ್ನು 2 ಲಕ್ಷ ರೂ. ಗಳಿಂದ 8 ಲಕ್ಷ ರೂ. ಗಳಿಗೆ ಹೆಚ್ಚಿಸಲಾಗಿದೆ. ಈ ಮೊತ್ತವನ್ನು Army Battle Casualties Welfare Fund (ABCWF) ಮೂಲಕ ನೀಡಲಾಗುತ್ತದೆ.
ದುರ್ಘಟನೆಯ ವೇಳೆ ಹುತಾತ್ಮರಾಗುವ ಅಥವಾ ಶೇ. 60 ರಷ್ಟು ಮತ್ತು ಅದಕ್ಕಿಂತ ಹೆಚ್ಚು ವಿಕಲಾಂಗತೆಗೆ ಒಳಗಾಗುವ ಯೋಧರ ಕುಟುಂಬಿಕರಿಗೆ ಈ ಮೊತ್ತವನ್ನು ನೀಡಲಾಗುತ್ತದೆ.
ಉದಾರೀಕೃತ ಕುಟುಂಬ ಪಿಂಚಣಿ, ಆರ್ಮಿ ಗ್ರೂಪ್ ವಿಮೆಯಿಂದ, ಆರ್ಮಿ ವೆಲ್ಫೇರ್ ಫಂಡ್ನಿಂದ ಹಣಕಾಸು ನೆರವು ಮತ್ತು ಎಕ್ಸ್-ಗ್ರೇಟಿಯಾ ಮೊತ್ತದ ಜೊತೆಗೆ ಹೆಚ್ಚುವರಿಯಾಗಿ ಈ ಮೊತ್ತವನ್ನು ಯೋಧರ ಕುಟುಂಬಕ್ಕೆ ನೀಡಲಾಗುತ್ತದೆ.
ಈ ಮೊತ್ತವನ್ನು ನಾಲ್ಕು ಪಟ್ಟು ಏರಿಕೆ ಮಾಡುವ ಮೂಲಕ ಯೋಧರ ಕುಟುಂಬಕ್ಕೆ ಮೋದಿ ಸರ್ಕಾರ ಹೆಚ್ಚಿನ ಬೆಂಬಲವನ್ನು ನೀಡಿದೆ. ಈ ಹಿಂದಿನ ಅವಧಿಯಲ್ಲಿ ಯೋಧರ ಕುಟುಂಬಕ್ಕೆ ನೆರವನ್ನು ನೀಡುವ ಸಲುವಾಗಿ ‘ಭಾರತ್ ಕೀ ವೀರ್’ ಅನ್ನು ಆರಂಭಿಸಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.