ನವದೆಹಲಿ: ಸಂವಿಧಾನದ 370ನೇ ವಿಧಿ ರದ್ದುಪಡಿಸಿದ ವಿಷಯದಲ್ಲಿ ಕಾಂಗ್ರೆಸ್ ಪಕ್ಷ ತೀವ್ರ ಹತಾಶ ಸ್ಥಿತಿಯಲ್ಲಿದೆ. ಸರ್ಕಾರದ ನಿರ್ಧಾರವನ್ನು ವಿರೋಧಿಸಲು ಹೋಗಿ ತನ್ನ ಗುಂಡಿಯನ್ನು ಅದು ತಾನೇ ತೋಡಿಕೊಂಡಿದೆ. ಲೋಕಸಭೆಯ ಕಾಂಗ್ರೆಸ್ ಪಕ್ಷದ ನಾಯಕನಾಗಿರುವ ಅಧೀರ್ ರಂಜನ್ ಅವರು ನೀಡಿರುವ ಹೇಳಿಕೆ ಆ ಪಕ್ಷವನ್ನು ತೀವ್ರ ಮುಜುಗರಕ್ಕೆ ದೂಡಿದೆ.
ಲೋಕಸಭೆಯಲ್ಲಿ ಇಂದು ಹೇಳಿಕೆ ನೀಡಿರುವ ಅಧೀರ್ ರಂಜನ್, “ಜಮ್ಮು ಕಾಶ್ಮೀರವನ್ನು ನೀವು ಹೇಗೆ ಆಂತರಿಕ ವಿಷಯ ಎಂದು ಹೇಳುತ್ತೀರಿ? ಜಮ್ಮು ಕಾಶ್ಮೀರವನ್ನು ವಿಶ್ವಸಂಸ್ಥೆ ಪರಿಶೀಲನೆ ಮಾಡುತ್ತಿಲ್ಲವೇ? ಶಿಮ್ಲಾ ಒಪ್ಪಂದಕ್ಕೆ, ಲಾಹೋರ್ ಒಪ್ಪಂದಕ್ಕೆ ನಾವು ಸಹಿ ಹಾಕಿಲ್ಲವೇ? ಇದು ಆಂತರಿಕ ವಿಷಯವೇ? ” ಎಂದು ಪ್ರಶ್ನಿಸಿದ್ದಾರೆ. ತನ್ನ ಹೇಳಿಕೆಯ ಮೂಲಕ ಅವರು ಜಮ್ಮ ಕಾಶ್ಮೀರ ಭಾರತದ ಆಂತರಿಕ ವಿಷಯವಲ್ಲ ಎಂಬುದಾಗಿ ಪ್ರತಿಪಾದನೆ ಮಾಡಿದ್ದಾರೆ.
ಇದಕ್ಕೆ ತೀಕ್ಷ್ಣ ಪ್ರತಿಕ್ರಿಯೆ ನೀಡಿರು ಅಮಿತ್ ಶಾ, “ಜಮ್ಮು ಕಾಶ್ಮೀರವನ್ನು ಭಾರತದ ಅವಿಭಾಜ್ಯ ಭಾಗವಾಗಿ ನೀವು ಪರಿಗಣಿಸುವುದಿಲ್ಲವೇ? ಏನು ಹೇಳುತ್ತಿದ್ದೀರಾ? ಜಮ್ಮು ಕಾಶ್ಮೀರ ಭಾರತದ ಅವಿಭಾಜ್ಯ ಭಾಗ. ಜಮ್ಮ ಕಾಶ್ಮೀರ ಎಂದು ನಾನು ಪ್ರತಿ ಬಾರಿ ಹೇಳಿದಾಗಲೂ ಪಿಓಕೆ ಅದರಡಿ ಬರುತ್ತದೆ. ನಾನು ಆಕ್ರಮಣಕಾರಿಯಾಗಿದ್ದೇನೆ ನಿಜ, ಯಾಕೆಂದರೆ ನೀವು ಪಿಓಕೆಯನ್ನು ಜಮ್ಮು ಕಾಶ್ಮೀರದ ಭಾಗ ಎಂದು ಪರಿಗಣಿಸುತ್ತಿಲ್ಲ ಎಂಬ ಕಾರಣಕ್ಕಾಗಿ. ನಾವು ಅದಕ್ಕಾಗಿ ಸಾಯಲೂ ಸಿದ್ಧರಿದ್ದೇವೆ” ಎಂದಿದ್ದಾರೆ.
ಅವರ ಈ ಹೇಳಿಕೆ ಕಾಂಗ್ರೆಸ್ ಪಕ್ಷಕ್ಕೆ ತೀವ್ರ ಮುಜುಗರವನ್ನುಂಟು ಮಾಡಿದೆ. ಮೂಲಗಳ ಪ್ರಕಾರ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರ ಹೇಳಿಕೆಯ ಬಗ್ಗೆ ತೀವ್ರ ಬೇಸರಗೊಂಡಿದ್ದಾರೆ ಎನ್ನಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.