ನವದೆಹಲಿ: ಕಳೆದ ಸೆಪ್ಟಂಬರ್ ತಿಂಗಳಿನಲ್ಲಿ ಆರಂಭವಾದ ಆಯುಷ್ಮಾನ್ ಭಾರತ್-ಪ್ರಧಾನ ಮಂತ್ರಿ ಜನ್ ಆರೋಗ್ಯ ಯೋಜನಾದಡಿಯಲ್ಲಿ ಇದುವರೆಗೆ ಸುಮಾರು 3 ಲಕ್ಷ ಮಂದಿ ರೋಗಿಗಳು ರೂ.4,405 ಕೋಟಿ ಮೌಲ್ಯದ ಕ್ಲೇಮ್ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮಂಗಳವಾರ ಸಂಸತ್ತಿನಲ್ಲಿ ಮಂಡಿಸಲಾದ ಹೊಸ ಮಾಹಿತಿಯ ಪ್ರಕಾರ, ಗುಜರಾತ್ 915 ಕೋಟಿ ರೂ ಕ್ಲೇಮ್ ಮಾಡಿದರೆ, ತಮಿಳುನಾಡು 618 ಕೋಟಿ ಮತ್ತು ಕರ್ನಾಟಕ 553 ಕೋಟಿ ರೂ. ಕ್ಲೇಮ್ ಮಾಡಿದೆ.
ಈ ಯೋಜನೆಯನ್ನು ಛತ್ತೀಸ್ಗಢದಲ್ಲಿ ಹೆಚ್ಚು ಬಳಸಿಕೊಳ್ಳಲಾಗಿದೆ, ಅಲ್ಲಿನ 611,216 ರೋಗಿಗಳು ಕ್ಲೇಮ್ ಪಡೆಯಲು ಯೋಜನೆಯಡಿ ನೋಂದಾಯಿತರಾಗಿದ್ದಾರೆ. ನಂತರ ಕೇರಳದ 574,448 ರೋಗಿಗಳು ಮತ್ತು ಗುಜರಾತಿನ 523,011 ರೋಗಿಗಳು ಕ್ಲೇಮ್ ಪಡೆದುಕೊಂಡಿದ್ದಾರೆ.
ಆದರೆ, ದುರ್ಬಲ ಆರೋಗ್ಯ ಸೂಚಕಗಳನ್ನು ಹೊಂದಿರುವ ಬಿಹಾರ, ಉತ್ತರ ಪ್ರದೇಶ, ಉತ್ತರಾಖಂಡ ಮತ್ತು ಮಧ್ಯಪ್ರದೇಶದಂತಹ ರಾಜ್ಯಗಳು ಈ ಯೋಜನೆಯನ್ನು ದೊಡ್ಡ ಪ್ರಮಾಣದಲ್ಲಿ ಬಳಕೆ ಮಾಡುತ್ತಿಲ್ಲ. ಈ ಯೋಜನೆಯಡಿ ಈ ರಾಜ್ಯಗಳಲ್ಲಿ ಕ್ರಮವಾಗಿ 56,139, 130,721 ಮತ್ತು 107,718 ರೋಗಿಗಳು ನೋಂದಾಯಿಸಿಕೊಂಡಿದ್ದಾರೆ. ನಿರೀಕ್ಷೆಗಿಂತಲೂ ಇದು ಕಡಿಮೆಯಾಗಿದೆ. ವಾಸ್ತವವಾಗಿ, ನಾಲ್ಕು ರಾಜ್ಯಗಳಲ್ಲಿ ನೂರಕ್ಕಿಂತಲೂ ಕಡಿಮೆ ರೋಗಿಗಳು ಈ ಯೋಜನೆಯನ್ನು ಬಳಸಿದ್ದಾರೆ. ಅಂತೆಯೇ, ಅಸ್ಸಾಂ ಹೊರತುಪಡಿಸಿ ಇತರ ಈಶಾನ್ಯ ರಾಜ್ಯಗಳು ಕೂಡ ಯೋಜನೆಯ ಬಗ್ಗೆ ಇನ್ನೂ ಆಸಕ್ತಿಯನ್ನು ಪಡೆದುಕೊಂಡಿಲ್ಲ.
ಆರಂಭದಲ್ಲಿ ಯೋಜನೆಯನ್ನು ಜಾರಿಗೆ ತರಲು ಹಿಂದೇಟು ಹಾಕಿದ್ದ ಪಶ್ಚಿಮ ಬಂಗಾಳದಲ್ಲಿ 17,636 ರೋಗಿಗಳು ಈ ಯೋಜನೆಯಡಿ ನೋಂದಾಯಿಸಿಕೊಂಡಿದ್ದು, 17 ಕೋಟಿ ರೂ. ಕ್ಲೇಮ್ ಮಾಡಿದ್ದಾರೆ.
ಈ ಯೋಜನೆಯಡಿ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ವಾರ್ಷಿಕ ರೂ.5 ಲಕ್ಷ ರೂಪಾಯಿಗಳ ಆರೋಗ್ಯ ವಿಮೆ ದೊರಕುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.