ನವದೆಹಲಿ: ವಿಶ್ವದ ಅತೀದೊಡ್ಡ ಧಾರ್ಮಿಕ ಸಮಾವೇಶ ಎಂದು ಕರೆಯಲ್ಪಡುವ ಕುಂಭ ಮೇಳ ಇಂದಿನಿಂದ ಆರಂಭಗೊಂಡಿದ್ದು, ಇನ್ನೂ 50 ದಿನಗಳ ಕಾಲ ಮುಂದುವರೆಯಲಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ರಾಷ್ಟ್ರಪತಿ ರಾಮನಾಥ ಕೋವಿಂದ್ ಕುಂಭಮೇಳಕ್ಕೆ ಶುಭ ಕೋರಿದ್ದಾರೆ.
ಪ್ರಯಾಗ್ರಾಜ್ ಕುಂಭಮೇಳ 2019ನ್ನು ಆಯೋಜನೆಗೊಳಿಸಲು ಅತ್ಯಂತ ಪರಿಶ್ರಮಪಟ್ಟ ಕೇಂದ್ರ ಮತ್ತು ಉತ್ತರಪ್ರದೇಶ ಸರ್ಕಾರವನ್ನು ರಾಷ್ಟ್ರಪತಿಗಳು ಕೊಂಡಾಡಿದ್ದಾರೆ.
‘ಕುಂಭಮೇಳದ ಅಂಗವಾಗಿ ಎಲ್ಲಾ ನಾಗರಿಕರಿಗೂ, ವಿಶ್ವದಾದ್ಯಂತದಿಂದ ಬರುತ್ತಿರುವ ಭಕ್ತರಿಗೂ ನಮ್ಮ ಶುಭಕಾಮನೆಗಳು. ಕುಂಭ ಭಾರತದ ಸಂಸ್ಕೃತಿ, ಪರಂಪರೆಯ ಬಹುಮುಖ್ಯ ಭಾಗವಾಗಿದೆ. ಈ ಬೃಹತ್ ಸಮಾವೇಶ ಆಯೋಜನೆಗೊಳಿಸಿದ ಯುಪಿ ಮತ್ತು ಕೇಂದ್ರ ಸರ್ಕಾರಕ್ಕೆ ಅಭಿನಂದನೆಗಳು’ ಎಂದು ರಾಷ್ಟ್ರಪತಿಗಳು ಟ್ವಿಟ್ ಮಾಡಿದ್ದಾರೆ.
‘ಪ್ರಯಾಗ್ ರಾಜ್ನಲ್ಲಿ ಆರಂಭಗೊಳ್ಳುತ್ತಿರುವ ಕುಂಭಮೇಳಕ್ಕೆ ಶುಭಕೋರುತ್ತೇನೆ. ಈ ಸಂದರ್ಭದಲ್ಲಿ ದೇಶ ವಿದೇಶದ ಜನರು ಭಾರತದ ಸಂಸ್ಕೃತಿ, ಪರಂಪರೆ, ಆಧ್ಯಾತ್ಮ, ಬಹುತ್ವವನ್ನು ಕಣ್ತುಂಬಿಕೊಳ್ಳಲಿದ್ದಾರೆ. ಹೆಚ್ಚಿನ ಸಂಖ್ಯೆಯ ಜನರು ಇದರಲ್ಲಿ ಭಾಗಿಯಾಗಲಿ ಎಂದು ಆಶಿಸುತ್ತೇನೆ’ ಎಂದು ಮೋದಿ ಟ್ವಿಟ್ ಮಾಡಿದ್ದಾರೆ.
As the Kumbh Mela begins, greetings to fellow citizens and to pilgrims from across the world. The Kumbh is an important part of India’s spiritual and cultural heritage. Appreciate efforts of the Union and Uttar Pradesh govts in this logistically massive exercise #PresidentKovind
— President of India (@rashtrapatibhvn) January 15, 2019
प्रयागराज में आरंभ हो रहे पवित्र कुम्भ मेले की हार्दिक शुभकामनाएं।
मुझे आशा है कि इस अवसर पर देश-विदेश के श्रद्धालुओं को भारत की आध्यात्मिक, सांस्कृतिक एवं सामाजिक विविधताओं के दर्शन होंगे।
मेरी कामना है कि अधिक से अधिक लोग इस दिव्य और भव्य आयोजन का हिस्सा बनें। pic.twitter.com/qAxJtNrUPn
— Narendra Modi (@narendramodi) January 15, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.