ಚೆನ್ನೈ: ಮೈತ್ರಿಗೆ ತೆರೆದುಕೊಂಡಿರುವುದಾಗಿ ಮತ್ತು ಹಳೆಯ ಗೆಳೆಯರನ್ನು ಸ್ವಾಗತಿಸಲು ಮುಕ್ತರಾಗಿರುವುದಾಗಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಈ ಮೂಲಕ 2019ರ ಲೋಕಸಭಾ ಚುನಾವಣೆಯಲ್ಲಿ ತಮಿಳುನಾಡು ಸೇರಿದಂತೆ ಇತರ ರಾಜ್ಯಗಳಲ್ಲಿ ಬಿಜೆಪಿಯನ್ನು ಬಲಿಷ್ಠಗೊಳಿಸುವ ಸೂಚನೆಯನ್ನು ನೀಡಿದ್ದಾರೆ.
ತಮಿಳುನಾಡಿನ ಬೂತ್ ಮಟ್ಟದ ಕಾರ್ಯಕರ್ತರೊಂದಿಗೆ ವೀಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಿದ ಮೋದಿ, 1990ರಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಮೈತ್ರಿಯ ಮೂಲಕ ಯಶಸ್ವಿ ರಾಜಕಾರಣ ನಡೆಸಿದರು ಎಂದರು. ಅಲ್ಲದೇ ಬಿಜೆಪಿಯ ಬಾಗಿಲು ಸದಾ ತೆರೆದೇ ಇದೆ ಎಂದಿದ್ದಾರೆ.
’20 ವರ್ಷಗಳ ಹಿಂದೆ ವಾಜಪೇಯಿ ಅವರು ಭಾರತದ ರಾಜಕೀಯದಲ್ಲಿ ಹೊಸ ಸಂಸ್ಕೃತಿಯನ್ನು ತಂದರು. ಅದುವೇ ಯಶಸ್ವಿ ಮೈತ್ರಿ ರಾಜಕಾರಣ. ಅವರು ಪ್ರಾದೇಶಿಕ ಪಕ್ಷಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಿದರು. ವಾಜಪೇಯಿ ಅವರು ತೋರಿಸಿದ ದಾರಿಯಲ್ಲೇ ಬಿಜೆಪಿ ನಡೆಯುತ್ತಿದೆ’ ಎಂದಿದ್ದಾರೆ.
ಬಿಜೆಪಿ ಪಕ್ಷ 2014ರ ಲೋಕಸಭಾ ಚುನಾವಣೆಯಲ್ಲಿ ಸಂಪೂರ್ಣ ಬಹುಮತವನ್ನು ಪಡೆದುಕೊಂಡರೂ, ಮೈತ್ರಿಗಳೊಂದಿಗೆ ಸೇರಿ ಸರ್ಕಾರ ರಚಿಸಲು ನಿರ್ಧರಿಸಿತು. ಹಳೆಯ ಗೆಳಯರಿಗೆ ನಮ್ಮ ಸ್ವಾಗತವಿದೆ, ಬಿಜೆಪಿ ಬಾಗಿಲು ಸದಾ ತೆರದೇ ಇದೆ ಎಂದರು.
source: zeenews
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.