ಸೂರತ್: ಒಮ್ಮೆ ಹೀರೋ ಆದವನು ಯಾವಾಗಲೂ ಹೀರೋನೇ ಆಗಿರುತ್ತಾನೆ ಎಂಬ ಇಂಗ್ಲಿಷ್ ಮಾತೊಂದಿದೆ. ಆ ಮಾತನ್ನು ನಿಜ ಮಾಡಿ ತೋರಿಸಿದ್ದಾರೆ ಅಮರನಾಥ ಯಾತ್ರಿಕರನ್ನು ಉಗ್ರರ ದಾಳಿಯಿಂದ ರಕ್ಷಿಸಿದ ಬಸ್ ಡ್ರೈವರ್ ಸಲೀಂ ಗಫೂರ್ ಶೇಖ್.
ಗಣರಾಜ್ಯೋತ್ಸವದ ವೇಳೆ ಅವರಿಗೆ ಭಾರತ ಸರ್ಕಾರ ಎರಡನೇ ಅತೀದೊಡ್ಡ ಶೌರ್ಯ ಪ್ರಶಸ್ತಿ ‘ಉತ್ತಮ್ ಜೀವನ್ ರಕ್ಷಾ ಪದಕ’ವನ್ನು ನೀಡಿ ಗೌರವಿಸಿತ್ತು. ಇದೀಗ ಅವರು ತಮ್ಮ ಒಂದು ತಿಂಗಳ ವೇತನಕ್ಕೆ ಸಮನವಾದ ರೂ.11 ಸಾವಿರವನ್ನು ಆರ್ಮಿ ವೆಲ್ಫೇರ್ ಫಂಡ್ಗಾಗಿ ನೀಡಿದ್ದಾರೆ.
‘ಸೈನಿಕರಿಂದಾಗಿ ನಾನು ಹಾಗೂ 52 ಮಂದಿ ಅಮರನಾಥ ಯಾತ್ರಿಕರು ಸುರಕ್ಷಿತರಾದೆವು. ಅವರು ನಮಗೆ ಚಿಕಿತ್ಸೆ ನೀಡಿದರು. ಕುಟುಂಬದೊಂದಿಗೆ ಮತ್ತೆ ಸೇರುವಂತೆ ಮಾಡಿದರು, ಭಾರತ ಸೇನೆಯೆಂದರೆ ನನಗೆ ಹೆಮ್ಮೆ, ಅದು ವಿಶ್ವದಲ್ಲೇ ಅತ್ಯಂತ ಬಲಶಾಲಿಯಾದುದು’ ಎಂದು ಗಫೂರ್ ಹೇಳಿದ್ದಾರೆ.
’ಇತ್ತೀಚಿಗಷ್ಟೇ 4 ಸೈನಿಕರು ಹುತಾತ್ಮರಾದ ಬಗ್ಗೆ ಕೇಳಿದೆ. ಅವರಿಗಾಗಿ ಏನೋ ಮಾಡಬೇಕು ಎನಿಸಿತು. ನನ್ನ ಅಕೌಂಟ್ನಲ್ಲಿದ್ದ 11 ಸಾವಿರ ರೂಪಾಯಿಯನ್ನು ನೀಡಿದೆ’ ಎಂದಿದ್ದಾರೆ.
2017ರ ಜುಲೈನಲ್ಲಿ ಅಮರನಾಥ ಯಾತ್ರಿಕರನ್ನು ಹೊತ್ತು ಇವರು ಬಸ್ ಚಲಾಯಿಸುತ್ತಿದ್ದ ವೇಳೆ ಉಗ್ರರು ಏಕಾಏಕಿ ದಾಳಿ ನಡೆಸಿದ್ದರು. ಎದೆ ಗುಂದದ ಗಫೂರ್ ಬಸ್ ನಿಲ್ಲಿಸದೆ ಸೀದಾ ಡ್ರೈವ್ ಮಾಡುತ್ತಾ ಮುಂದೆ ಸಾಗಿದರು. ಇದರಿಂದಾಗಿ ಹಲವರ ಜೀವ ಉಳಿಯಿತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.