ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ 9 ರಾಜ್ಯಗಳ 80 ಕಡೆ ಹಣಕಾಸು ಸಾಕ್ಷರತಾ ಅಭಿಯಾನವನ್ನು ನಡೆಸಲಿದೆ. ಪ್ರಾಯೋಗಿಕ ಕಾರ್ಯಕ್ರಮ ಇದಾಗಿದ್ದು, ಇದು ಯಶಸ್ವಿಯಾದರೆ ಈ ಅಭಿಯಾನವನ್ನು ವಿಸ್ತರಿಸಲು ನಿರ್ಧರಿಸಲಾಗಿದೆ.
ಜನರಿಗೆ ಇ-ವಹಿವಾಟುಗಳು, ಔಪಚಾರಿಕ ವಲಯದ ಸಾಲಗಳು, ವಿಮಾ ಖರೀದಿಗಳ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಈ ಅಭಿಯಾನವನ್ನು ಆರ್ಬಿಐ ನಡೆಸುತಿದೆ.
ಡೆಪೋಸಿಟರ್ ಎಜುಕೇಶನ್ ಆಂಡ್ ಅವಾರ್ನ್ನೆಸ್ ಫಂಡ್ನೊಂದಿಗೆ ನೋಂದಾವಣೆ ಮಾಡಿಕೊಂಡ 6 ಎನ್ಜಿಓಗಳಾದ ಕ್ರಿಸಿಲ್ ಫೌಂಡೇಶನ್, ಧನ್ ಫೌಂಡೇಶನ್, ಸ್ವಧಾರ್ ಫಿನ್ ಎಸೆಸ್, ಇಂಡಿಯನ್ ಸ್ಕೂಲ್ ಆಫ್ ಮೈಕ್ರೋ ಫೈನಾನಸ್ಸ್ ಫಾರ್ ವುಮೆನ್, ಸಮರ್ಪಿತ್ ಮತ್ತು ಪೇಸ್ ಫೌಂಡೇಶನ್ಗಳಿಗೆ ಈ ಕಾರ್ಯಕ್ರಮವನ್ನು 9 ರಾಜ್ಯಗಳಲ್ಲಿ ನಡೆಸುವ ಜವಾಬ್ದಾರಿಯನ್ನು ಆರ್ಬಿಐ ನೀಡಿದೆ.
ಮಹಾರಾಷ್ಟ್ರ, ಛತ್ತೀಸ್ಗಢ, ಬಿಹಾರ, ಒರಿಸ್ಸಾ, ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ, ಉತ್ತರಪ್ರದೇಶ, ಹರಿಯಾಣಗಳಲ್ಲಿ ’ಹಣಕಾಸು ಸಾಕ್ಷರತಾ’ ಅಭಿಯಾನ ಜರುಗಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.