ನವದೆಹಲಿ : ಸದಾ ಭಾರತೀಯ ಸೇನೆಯ ಪರವಾಗಿ ನಿಲ್ಲುವ, ಯೋಧರ ಬಗ್ಗೆ ಸ್ಫೂರ್ತಿದಾಯಕ ಸಂದೇಶಗಳನ್ನು ಬಿತ್ತರಿಸುವ ಕ್ರಿಕೆಟಿಗ ಗೌತಮ್ ಜಮ್ಮು ಕಾಶ್ಮೀರದಲ್ಲಿ ಇತ್ತೀಚೆಗಷ್ಟೇ ಹುತಾತ್ಮರಾದ ಅಸಿಸ್ಟೆಂಟ್ ಸಬ್ ಇನ್ಸ್ಪೆಕ್ಟರ್ ಅಬ್ದುಲ್ ರಶೀದ್ ಅವರ ಪುತ್ರಿಯ ವಿದ್ಯಾಭ್ಯಾಸಕ್ಕಾಗಿ ಸಹಾಯ ಮಾಡುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.
ಮಂಗಳವಾರ ಈ ಕುರಿತು ಟ್ವೀಟ್ ಮಾಡಿರುವ ಗೌತಮ್ ಗಂಭೀರ್, ಝೊಹ್ರಾ, ನಿನಗೆ ಲಾಲಿ ಹಾಡಿ ಮಲಗಿಸಲು ಸಾಧ್ಯವಿಲ್ಲವಾದರೂ, ನೀನು ಎದ್ದಾಗ ನಿನ್ನ ಕನಸು ನನಸಾಗುವಂತೆ ನಾನು ಸಹಾಯ ಮಾಡುತ್ತೇನೆ. ಜೀವನ ಪರ್ಯಂತ ನಿನ್ನ ವಿದ್ಯಾಭ್ಯಾಸಕ್ಕೆ ನಾನು ಸಹಾಯ ಮಾಡುತ್ತೇವೆ. ಝೊಹ್ರಾ ದಯವಿಟ್ಟು ನಿನ್ನ ಕಣ್ಣೀರಿನ ಹನಿಗಳನ್ನು ಕೆಳಗೆ ಉದುರಲು ಬಿಡಬೇಡ. ಆ ಕಣ್ಣೀರಿನ ಹನಿಯ ನೋವಿನ ಭಾರವನ್ನು ಹೊರಲು ಭೂಮಿ ತಾಯಿಗೆ ಕೂಡಾ ಕಷ್ಟವಾಗಬಹುದೆಂದೆನಿಸುತ್ತದೆ. ಹುತಾತ್ಮರಾದ ನಿನ್ನ ತಂದೆ ASI ಅಬ್ದುಲ್ ರಶೀದ್ ಅವರಿಗೆ ನನ್ನ ಸೆಲ್ಯೂಟ್’ ಎಂದು ಗೌತಮ್ ಗಂಭೀರ್ ಹೇಳಿದ್ದಾರೆ.
Zohra,I can’t put u 2 sleep wid a lullaby but I’ll help u 2 wake up 2 live ur dreams. Will support ur education 4 lifetime #daughterofIndia pic.twitter.com/XKINUKLD6x
— Gautam Gambhir (@GautamGambhir) September 5, 2017
Zohra,plz don’t let those tears fall as i doubt even Mother Earth can take d weight of ur pain. Salutes to ur martyred dad ASI,Abdul Rashid. pic.twitter.com/rHTIH1XbLS
— Gautam Gambhir (@GautamGambhir) September 5, 2017
ಐಪಿಎಲ್ ವೇಳೆ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ವತಿಯಿಂದ ಛತ್ತೀಸ್ಗಢದ ಸುಕ್ಮಾದಲ್ಲಿ ನಕ್ಸಲರು 25 ಸಿಆರ್ಪಿಎಫ್ ಯೋಧರನ್ನು ಹತ್ಯೆ ಮಾಡಿರುವುದನ್ನು ಖಂಡಿಸುವ ಸಲುವಾಗಿ ಆಟಗಾರರು ಕಪ್ಪುಪಟ್ಟಿ ಧರಿಸಿ ಕ್ರೀಡಾಂಗಣಕ್ಕೆ ಇಳಿದಿದ್ದರು. ಅಲ್ಲದೆ ಗೌತಮ್ ಗಂಭೀರ್ ಅವರ ಫೌಂಡೇಶನ್ ಛತ್ತೀಸ್ಗಢದ ಸುಕ್ಮಾದಲ್ಲಿ ಹುತಾತ್ಮರಾದ 25 ಸಿಆರ್ಪಿಎಫ್ ಯೋಧರ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ತಗಲುವ ವೆಚ್ಚವನ್ನು ಭರಿಸುತ್ತೇವೆ ಎಂದು ಘೋಷಿಸಿತ್ತು.
ಇದೀಗ ಹುತಾತ್ಮ ಅಬ್ದುಲ್ ರಶೀದ್ ಅವರ ಪುತ್ರಿಯ ವಿದ್ಯಾಭ್ಯಾಸಕ್ಕೆ ನೆರವು ನೀಡುವುದಾಗಿ ಘೋಷಿಸಿದ್ದು, ಸೈನಿಕರ ಬಗೆಗಿನ ತಮ್ಮ ಅಭಿಮಾನವನ್ನು ತೋರಿದ್ದಾರೆ.
ಹುತಾತ್ಮರಾದ ಯೋಧರ ಮಕ್ಕಳ ವಿದ್ಯಾಭ್ಯಾಸ ಹೊಣೆ ಹೊತ್ತಿರುವ ಗೌತಮ್ ಗಂಭೀರ್, ಯೋಧರ ಬಗ್ಗೆ ಅಪಾರ ಪ್ರೀತಿ, ಗೌರವವುಳ್ಳ ಸೆಲೆಬ್ರಿಟಿಯಾಗಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.