ಶ್ರೀನಗರ : 18 ವರ್ಷದ ಬಿಲಾಲ್ ದಾರ್ ಎಂಬ ಚಿಂದಿ ಆಯುವ ಹುಡುಗನನ್ನು ಶ್ರೀನಗರ ಮುನ್ಸಿಪಲ್ ಕಾರ್ಪೊರೇಷನ್ನ ರಾಯಭಾರಿಯನ್ನಾಗಿ ನೇಮಕ ಮಾಡಲಾಗಿದೆ.
ಬಿಲಾಲ್ ದಾರ್ ಬಂಡಿಪೋರಾ ಜಿಲ್ಲೆಯ ಉಲಾರ್ ಸರೋವರದಲ್ಲಿನ ತ್ಯಾಜ್ಯಗಳನ್ನು ಕಳೆದ 5 ವರ್ಷಗಳಿಂದ ತೆಗೆದು ಅದರ ಮೂಲಕ ತನ್ನ ಜೀವನ ಸಾಗಿಸುತ್ತಿದ್ದಾನೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ನಗರಪಾಲಿಕೆಯ ಕಮಿಷನರ್ ಡಾ. ಶಪ್ಖತ್ಖಾನ್, ಬಿಲಾಲ್ ದಾರ್ ನಮ್ಮ ರಾಯಭಾರಿಯಾಗಿದ್ದು ಎಲ್ಲರಿಗೂ ಆತ ಸ್ಫೂರ್ತಿಯಾಗಿದ್ದಾನೆ. ಸರೋವರದ ತ್ಯಾಜ್ಯಗಳನ್ನು ಸ್ವಚ್ಛಗೊಳಿಸುವ ಮೂಲಕ ಆತ ಜೀವನ ಸಾಗಿಸುತ್ತಿದ್ದಾನೆ. ಸರೋವರದಲ್ಲಿದ್ದ ಬಾಟಲಿ ಮತ್ತು ಶೂಗಳನ್ನು ಆತ ತೆಗೆದು ಅವುಗಳನ್ನು ಮಾರಾಟ ಮಾಡುತ್ತಿದ್ದಾನೆ ಎಂದಿದ್ದಾರೆ.
ಲಹೋರ್ವರಾ ಪೊರಾದ ನಿವಾಸಿಯಾಗಿರುವ ಬಿಲಾಲ್ ಕಳೆದ ೫ ವರ್ಷದಿಂದ ಸರೋವರನ್ನು ಸ್ವಚ್ಛಗೊಳಿಸಿ ಅದರಲ್ಲಿನ ಬಾಟಲಿ, ಶೂ, ಮುಂತಾದ ತ್ಯಾಜ್ಯಗಳನ್ನು ಮಾರಿ ದಿನಕ್ಕೆ 150 ರಿಂದ 250 ರೂ.ಗಳನ್ನು ಸಂಪಾದಿಸುತ್ತಿದ್ದಾನೆ. ಅಲ್ಲದೆ ತನ್ನ ತಾಯಿ ಮತ್ತು ಇಬ್ಬರು ಸಹೋದರಿಯರನ್ನು ಸಾಕುತ್ತಿದ್ದಾನೆ.
ಮಾಧ್ಯಮದ ವರದಿಗಳ ಪ್ರಕಾರ ಆತ ಇದುವರೆಗೆ ಸುಮಾರು 12,000 ಕೆ.ಜಿ. ತ್ಯಾಜ್ಯವನ್ನು ಮೇಲೆತ್ತಿದ್ದಾನೆ.
ಇದೀಗ ಮಹಾನಗರ ಪಾಲಿಕೆಯ ರಾಯಭಾರಿಯಾಗಿ ಆತ ಸಮವಸ್ತ್ರ ಮತ್ತು ವಾಹನವನ್ನು ಪಡೆದುಕೊಳ್ಳಲಿದ್ದಾನೆ. ಅಲ್ಲದೆ ಜನರನ್ನು ಭೇಟಿಯಾಗಿ ಅವರಿಗೆ ಸ್ವಚ್ಛತೆ ಮತ್ತು ಪರಿಸರ ಸಂರಕ್ಷಣೆ ಬಗ್ಗೆ ಜಾಗೃತಿಯನ್ನು ಮೂಡಿಸುವ ಕಾರ್ಯ ಮಾಡಲಿದ್ದಾನೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.