ನವದೆಹಲಿ: ಇಹಲೋಕವನ್ನು ತ್ಯಜಿಸಿರುವ ಕೇಂದ್ರ ಪರಿಸರ ಸಚಿವರಾಗಿದ್ದ ಅನಿಲ್ ಮಾಧವ್ ದಾವೆ ಅವರು ಪರಿಸರದ ಬಗ್ಗೆ ಅತೀವ ಕಾಳಜಿಯನ್ನು ಹೊಂದಿದ್ದವರು. ನನ್ನ ಸಾವಿನ ಬಳಿಕವೂ ಮರ ನೆಟ್ಟು ನನ್ನ ನೆನಪನ್ನು ಹಸಿರಾಗಿಸಿ ಎಂದು ತಮ್ಮ ಅಭಿಮಾನಿಗಳಿಗೆ ಇವರು ಕರೆ ನೀಡಿದ್ದರು.
ನರ್ಮದಾ ನದಿ ತಟದಲ್ಲಿ ತನ್ನ ಅಂತ್ಯಸಂಸ್ಕಾರ ನಡೆಯಬೇಕು ಎಂಬ ಇಚ್ಛೆ ಇವರದ್ದಾಗಿತ್ತು. ಅದರಂತೆ ಇಂದು ಇವರ ಅಂತ್ಯಸಂಸ್ಕಾರ ನರ್ಮದೆಯ ತಟದಲ್ಲಿ ನಡೆಯಲಿದ್ದು, ಪ್ರಧಾನಿ ನರೇಂದ್ರ ಮೋದಿಯವರೂ ಆಗಮಿಸಲಿದ್ದಾರೆ.
ಪ್ರಕೃತಿ ಬಗ್ಗೆ ಅಪಾರ ಪ್ರೀತಿ ಹೊಂದಿದ್ದ ಇವರ ಭೋಪಾಲ್ ನಿವಾಸದ ಹೆಸರು ಕೂಡ ನದಿ ಕಾ ಘರ್ ಎಂದು. ಅವರ ಕಾರ್ಯದಲ್ಲೂ ಪ್ರಕೃತಿ ಪ್ರೇಮ ಎದ್ದು ಕಾಣುತ್ತಿತ್ತು.
ನಾನು ಸತ್ತ ಬಳಿಕವೂ ನನ್ನ ನೆನಪನ್ನು ಅಚ್ಚಳಿಯದಂತೆ ಉಳಿಸುವ ಬಯಕೆ ನಿಮಗಿದ್ದರೆ ಗಿಡಗಳನ್ನು ನೆಡಿರಿ. ಅವುಗಳನ್ನು ಸಂರಕ್ಷಿಸಿ. ಅದರಿಂದ ನನಗೆ ಗೌರವ ಸಿಗುತ್ತದೆ. ಆದರೆ ನನ್ನ ಹೆಸರನ್ನು ಉಲ್ಲೇಖಿಸಬೇಡಿ. ನನಗಾಗಿ ಸ್ಮಾರಕ, ಪ್ರತಿಮೆಗಳನ್ನು ಕಟ್ಟಬೇಡಿ ಎಂದು ಇವರು ಬೆಂಬಲಿಗರಿಗೆ ಹೇಳುತ್ತಿದ್ದರು.
ಪರಿಸರ ಖಾತೆಗೆ ನ್ಯಾಯ ಒದಗಿಸಬಲ್ಲ ಎಲ್ಲಾ ಅರ್ಹತೆಗಳಿದ್ದ ದಾವೆ ಅವರು ಇಷ್ಟು ಬೇಗ ಇಹಲೋಕ ತ್ಯಜಿಸಿದ್ದರು ಎಲ್ಲರಿಗೂ ಬೇಸರ ಮೂಡಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.