ನವದೆಹಲಿ: ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆ(ಪಿಎಂಜಿಕೆವೈ)ಯಡಿ ಆದಾಯ ಬಹಿರಂಗಪಡಿಸದ ವ್ಯಕ್ತಿಗಳಿಗೆ ಡಿಪೋಸಿಟ್ ಮಾಡಲು ಇದ್ದ ಡೆಡ್ಲೈನ್ನ್ನು ಹಣಕಾಸು ಸಚಿವಾಲಯ ಎಪ್ರಿಲ್ 30ರವರೆಗೆ ವಿಸ್ತರಿಸಿದೆ.
ಈ ಯೋಜನೆಯಡಿ ವ್ಯಕ್ತಿ ತನ್ನ ಬಹಿರಂಗಪಡಿಸದ ಆದಾಯದ ಮೇಲೆ ಶೇ.30ರಷ್ಟು ತೆರಿಗೆ, ಆದಾಯದ ಮೇಲೆ ಶೇ.10ರಷ್ಟು ದಂಡ ಮತ್ತು ತೆರಿಗೆ ಪಾವತಿಯ ಮೇಲೆ ಶೇ.33ರಷ್ಟು ಸರ್ಚಾರ್ಜ್ಗಳನ್ನು ಕಟ್ಟಬೇಕಾಗುತ್ತದೆ. ಒಟ್ಟಾರೆಯಾಗಿ ವ್ಯಕ್ತಿ ತನ್ನ ಆಸ್ತಿಯ ಮೇಲೆ ಶೇ.50ರಷ್ಟು ಹಣ ಪಾವತಿಸಬೇಕು.
ಅಷ್ಟೇ ಅಲ್ಲದೇ ಶೇ.25ರಷ್ಟು ಬಹಿರಂಗ ಪಡಿಸದ ಆಸ್ತಿ ಮೊತ್ತ ಬ್ಯಾಂಕುಗಳಲ್ಲಿ ನಾಲ್ಕು ವರ್ಷಗಳ ಅವಧಿಗೆ ಯಾವುದೇ ಬಡ್ಡಿಯಿಲ್ಲದೆ ಇಡಬೇಕು. ಈ ಡಿಪೋಸಿಟ್ಗಳನ್ನು ಎಪ್ರಿಲ್ ಅಂತ್ಯದವರೆಗೆ ಮಾಡಬಹುದಾಗಿದೆ.
ನೇರ ತೆರಿಗೆಯ ಕೇಂದ್ರ ಇಲಾಖೆ ಈ ಹಿಂದೆ ಡಿಪೋಸಿಟ್ ಮಾಡಲು ಎಪ್ರಿಲ್ 10ರ ಡೆಡ್ಲೈನ್ ನೀಡಿತ್ತು, ಇದೀಗ ಅದನ್ನು ಎಪ್ರಿಲ್ ಅಂತ್ಯದವರೆಗೆ ವಿಸ್ತರಿಸಿದೆ.
ಜೂನ್ನಿಂದ ಸೆಪ್ಟಂಬರ್ವರೆಗೆ ಕೇಂದ್ರ ಆದಾಯ ಬಹಿರಂಗ ಯೋಜನೆ ಆರಂಭಿಸಿದ್ದು, ಈ ವೇಳೆ ಆಸ್ತಿ ವಿವರ ಬಹಿರಂಗಪಡಿಸಿದವರಿಗೆ ಶೇ.45ರಷ್ಟು ತೆರಿಗೆ ವಿಧಿಸಿತ್ತು. ಅವರಿಗೆ ಬ್ಯಾಂಕುಗಳಲ್ಲಿ ಶೇ.25ಷರ್ಟು ಡಿಪೋಸಿಟ್ ಮಾಡಬೇಕಾಗಿರಲಿಲ್ಲ. ಆದರೀಗ ಆ ಅವಕಾಶವನ್ನು ಬಳಸಿಕೊಳ್ಳದವರು ಈಗ ಬ್ಯಾಂಕ್ಗಳಲ್ಲಿ ಶೇ.25ರಷ್ಟು ಆಸ್ತಿ ಮೊತ್ತವನ್ನು ನಾಲ್ಕು ವರ್ಷ ಬಡ್ಡಿಯಿಲ್ಲದೆ ಡಿಪೋಸಿಟ್ ಮಾಡಬೇಕಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.