ನವದೆಹಲಿ : ನೋಟ್ ನಿಷೇಧಗೊಂಡಿದ್ದ ಹಿನ್ನಲೆಯಲ್ಲಿ ಹಳೆ ನೋಟು ಬದಲಾವಣೆಗೆ ನೀಡಿದ್ದ ಅವಕಾಶ ಗುರುವಾರ ರಾತ್ರಿಗೆ ಮುಕ್ತಾಯಗೊಂಡಿದ್ದು, ಇಂದಿನಿಂದ (ನ. 25) ಬ್ಯಾಂಕ್ಗಳಲ್ಲಿ ಠೇವಣಿ ಇಡಲು ಮಾತ್ರ ಹಳೆ ನೋಟುಗಳಿಗೆ ಅವಕಾಶವಿದೆ.
ಅಂಚೆ ಕಛೇರಿ ಮತ್ತು ಬ್ಯಾಂಕ್ಗಳಲ್ಲಿ ಹಳೆ ನೋಟು ಬದಲಾವಣೆಗೆ ಅವಕಾಶ ಕಲ್ಪಿಸಿದ್ದನ್ನು ಸ್ಥಗಿತಗೊಳಿಸಿರುವ ಕೇಂದ್ರ ಹಣಕಾಸು ಸಚಿವಾಲಯ ತುರ್ತು ಸೇವೆಗಳಿಗೆ ಹಳೆ ನೋಟುಗಳನ್ನು ಬಳಸಿಕೊಳ್ಳಲು ಇದ್ದ ಅವಕಾಶವನ್ನು ಡಿಸೆಂಬರ್ 15 ರವರೆಗೆ ವಿಸ್ತರಿಸಿದೆ. ಆದರೆ ಕೇವಲ 500 ರೂ. ನೋಟುಗಳನ್ನು ಮಾತ್ರ ಬಳಸಿಕೊಳ್ಳಬಹುದು.
ರೂ. 1000 ಮುಖಬೆಲೆಯ ನೋಟುಗಳ ಚಲಾವಣೆ ಸಂಪೂರ್ಣ ರದ್ದುಗೊಳಿಸಲಾಗಿದ್ದು, ಇದನ್ನು ಕೇವಲ ಬ್ಯಾಂಕ್ ಮತ್ತು ಅಂಚೆ ಕಛೇರಿಗಳಲ್ಲಿ ಠೇವಣಿ ಇಡಲು ಮಾತ್ರ ಬಳಸಬಹುದು. ಬ್ಯಾಂಕ್ ಖಾತೆ ಇರದವರು ಹೊಸದಾಗಿ ಬ್ಯಾಂಕ್ ಖಾತೆ ತೆರೆದು ಹಳೆ ನೋಟುಗಳನ್ನು ಠೇವಣಿ ಇಡಬಹುದು ಎಂದು ಕೇಂದ್ರ ಹಣಕಾಸು ಸಚಿವಾಲಯ ಆದೇಶಿಸಿದೆ.
ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಗುರುವಾರ ದೇಶದ ವಿವಿಧ ಬ್ಯಾಂಕ್ಗಳ ಅಧಿಕಾರಿಗಳೊಂದಿಗೆ ವೀಡಿಯೋ ಕಾನ್ಫರೆನ್ಸ್ ಮೂಲಕ ಪರಿಸ್ಥಿತಿಯ ಅವಲೋಕನ ಮತ್ತು ಅವರ ಅಭಿಪ್ರಾಯಗಳನ್ನು ತೆಗೆದುಕೊಂಡ ನಂತರ ಇಂದಿನಿಂದ ನೋಟು ವಿನಿಮಯವನ್ನು ಸ್ಥಗಿತಗೊಳಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
ರೂ. 500 ಮುಖ ಬೆಲೆಯ ನೋಟುಗಳನ್ನು ತುರ್ತುಸೇವೆಗಳಿಗೆ ಉಪಯೋಗಿಸಬಹುದು. ಪ್ರೀಪೇಯ್ಡ್ ಮೊಬೈಲ್ ಟಾಪ್ ಅಪ್ ಗರಿಷ್ಠ ರೂ. 500 ರವರಗೆ ಮಾಡಬಹುದಾಗಿದೆ. ವಿದ್ಯುತ್ ಬಿಲ್, ನೀರಿನ ಬಿಲ್, ಸರ್ಕಾರಿ ಆಸ್ಪತ್ರೆ, ರೈಲ್ವೆ ಟಿಕೆಟ್ ಬುಕಿಂಗ್, ವಿಮಾನ ಟಿಕೆಟ್ ಬುಕಿಂಗ್, ಹಾಲಿನ ಬೂತ್ಗಳು, ಸರ್ಕಾರಿ, ಪಾಲಿಕೆ, ಮಹಾನಗರ ಪಾಲಿಕೆ ಅಧೀನದಲ್ಲಿ ಬರುವ ಶಾಲೆ/ಕಾಲೇಜುಗಳ ಶುಲ್ಕ ಪಾವತಿ, ಎಲ್ಪಿಜಿ ಗ್ಯಾಸ್, ಪೆಟ್ರೋಲ್ ಬಂಕ್, ಗ್ರಾಹಕ ಸೇವಾ ಮಳಿಗೆಗಳು ಇಂತಹ ಸ್ಥಳಗಳಲ್ಲಿ ನೋಟುಗಳನ್ನು ಬಳಸಬಹುದಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.