ಭೋಪಾಲ್: ಮಧ್ಯಪ್ರದೇಶದ ಭೋಪಾಲ್ ಮೂಲದ 3ನೇ ತರಗತಿ ವಿದ್ಯಾರ್ಥಿನಿ, 9 ವರ್ಷದ ಮುಸ್ಕಾನ್ ಅಹಿರ್ವರ್ ತನ್ನ ಮನೆ ಸಮೀಪದ ಸ್ಲಂ ಮಕ್ಕಳಿಗೆ ಶಿಕ್ಷಣ ನೀಡುತ್ತಿದ್ದಾಳೆ. ಗೋಡೆ ಬದಿ ದಾರ ಕಟ್ಟಿ ಪುಸ್ತಕಗಳನ್ನು ಅದಕ್ಕೆ ತಗುಲಿ ಹಾಕಿ ಮಕ್ಕಳಿಗೆ ತನ್ನ ಲೈಬ್ರರಿಗೆ ಬರುವಂತೆ ಮಾಡಿ ಅವರಿಗೆ ಶಿಕ್ಷಣವನ್ನು ಈಕೆ ನೀಡುತ್ತಿದ್ದಾಳೆ.
ನೀತಿ ಆಯೋಗ ‘ಭಾರತವನ್ನು ಪರಿವರ್ತಿಸುತ್ತಿರುವ ಮಹಿಳೆಯರು’ ಪ್ರಚಾರ ಆಂದೋಲನದ ಅಡಿಯಲ್ಲಿ 12 ವಿಜೇತರ ಹೆಸರನ್ನು ಘೋಷಿಸಿದೆ. ನೀತಿ ಆಯೋಗವು ಶುಕ್ರವಾರ ಮುಸ್ಕಾನ್ಗೆ ‘ಥಾಟ್ ಲೀಡರ್’ ಪ್ರಶಸ್ತಿ ನೀಡಿ ಗೌರವಿಸಿದೆ. 12 ವಿಜೇತರಲ್ಲಿ ಈಕೆ ಅತಿ ಕಿರಿಯವಳು. ಒಲಿಂಪಿಕ್ ಪದಕ ವಿಜೇತೆ ಕುಸ್ತಿಪಟು ಸಾಕ್ಷಿ ಮಲಿಕ್ ಮುಸ್ಕಾನ್ಗೆ ಈ ಪ್ರಶಸ್ತಿಯನ್ನು ವಿತರಿಸಿದರು.
ಡಾಕ್ಟರ್ ಆಗಲು ಬಯಸುತ್ತಿರುವ ಮುಸ್ಕಾನ್ಗೆ ಈ ಪ್ರಶಸ್ತಿ ಲಭಿಸಿದ್ದು ತುಂಬ ಸಂತೋಷ ತಂದಿದೆ ಎಂದಿದ್ದಾಳೆ. ಪ್ರಶಸ್ತಿ ಲಭಿಸಿದ್ದಕ್ಕೆ ನನ್ನ ತಂದೆ, ತಾಯಿ ಮತ್ತು ಸ್ನೇಹಿತರೆಲ್ಲರೂ ಹೆಚ್ಚು ಸಂತಸಪಟ್ಟಿದ್ದಾರೆ. ಮೊದಲಿಗೆ 121 ಪುಸ್ತಕಗಳೊಂದಿಗೆ ಒಂದು ಲೈಬ್ರರಿ ಆರಂಭಿಸಿದ್ದು, ಈಗ ಇನ್ನಷ್ಟು ಪುಸ್ತಕಗಳು ಲೈಬ್ರರಿಯಲ್ಲಿ ಲಭ್ಯವಿದೆ. ಪ್ರಸ್ತುತ 50 ಮಕ್ಕಳು ಲೈಬ್ರರಿಗೆ ಬರುತ್ತಾರೆ. ಮತ್ತಷ್ಟು ಮಕ್ಕಳು ಬರುವಂತೆ ಆಹ್ವಾನಿಸುತ್ತಿದ್ದೇನೆ. ಅವರು ದೊಡ್ಡವರಾಗಿ ಜೀವನದಲ್ಲಿ ಏನಾದರೂ ಸಾಧನೆ ಮಾಡುವಂತೆ ಸಲಹೆ ನೀಡುತ್ತೇನೆ ಎಂದು ಮುಸ್ಕಾನ್ ಹೇಳಿದ್ದಾಳೆ.
ಸಮಾಜವನ್ನು ಬದಲಾಯಿಸಲು ಶಿಕ್ಷಣ ಎಂಬುದು ಅತಿ ಶಕ್ತಿಶಾಲಿ ಶಸ್ತ್ರ ಎಂಬ ನೆಲ್ಸನ್ ಮಂಡೇಲಾ ಅವರ ಪ್ರಭಾವೀ ಸೂಕ್ತಿಗೆ ತಕ್ಕಂತೆ ಮುಸ್ಕಾನ್ ಅದನ್ನು ಕಾರ್ಯರೂಪಕ್ಕೆ ತಂದಿದ್ದಾಳೆ. ಸಮಾಜದಲ್ಲಿ ಬದಲಾವಣೆ ತರಲು ಬಯಸಿದ ಅನೇಕರಿಗೆ ಈಕೆಯ ಈ ಕಾರ್ಯ ನಿಜಕ್ಕೂ ಸ್ಫೂರ್ತಿ ನೀಡಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.