ನವದೆಹಲಿ: ಭಾರತೀಯ ಸ್ವಾತಂತ್ರ್ಯ ಚಳುವಳಿಯ ಮರೆಯಲಾರದ ತ್ರಿವಳಿ ರತ್ನಗಳು ಭಗತ್ ಸಿಂಗ್, ರಾಜ್ ಗುರು ಮತ್ತು ಸುಖ್ದೇವ್. 1931ರ ಮಾ.23ರಂದು ಇವರು ಲಾಹೋರ್ ಜೈಲಿನಲ್ಲಿ ಬ್ರಿಟಿಷರ ನೇಣು ಕುಣಿಗೆಗೆ ಕೊರಳೊಡ್ಡಿದ್ದರು. ಇದರ ಸ್ಮರಣಾರ್ಥ ಪ್ರತಿವರ್ಷದ ಈ ದಿನವನ್ನು ಶಹೀದ್ ದಿನವನ್ನಾಗಿ ಸ್ಮರಿಸಲಾಗುತ್ತದೆ.
ಭಗತ್ ಸಿಂಗ್, ರಾಜ್ಗುರು, ಸುಖ್ದೇವ್ ಅವರನ್ನು ಸ್ಮರಿಸಿ ಟ್ವಿಟ್ ಮಾಡಿರುವ ಮೋದಿ, ‘ಇವರ ಬಲಿದಾನ ಭಾರತೀಯ ಇತಿಹಾಸದ ಮರೆಯಲಾರದ ಕ್ಷಣ. ಈ ಮೂರು ಶ್ರೇಷ್ಠರು ನಮ್ಮ ನಾಡಿಗೆ ಸಂಬಂಧಿಸಿದವರು ಎಂಬುದೇ ಸಮಸ್ತ ಭಾರತೀಯರ ಹೆಮ್ಮೆ. ತಮ್ಮ ದೇಶ ಜನ ಸ್ವಾತಂತ್ರ್ಯ ಮತ್ತು ಘನತೆಯುತ ಬದುಕನ್ನು ಬಾಳಲಿ ಎಂಬ ಕಾರಣಕ್ಕೆ ಯವ್ವನದಲ್ಲಿ ತಮ್ಮ ಜೀವವನ್ನು ಬಲಿದಾನ ಮಾಡಿದರು’ ಎಂದರು.
1931ರ ಮಾರ್ಚ್ 23ರಂದು ಸಂಜೆ 7 ಗಂಟೆಗೆ ಲಾಹೋರ್ ಜೈಲಿನಲ್ಲಿ ಭಾರತದ ಈ ಮೂರು ಅಪ್ರತಿಮ ಕ್ರಾಂತಿ ವೀರರನ್ನು ಬ್ರಿಟಿಷರು ನೇಣುಗಂಬಕ್ಕೆ ಏರಿಸಿದ್ದರು. ಸಾವಿನ ಕೊನೆಕ್ಷಣದಲ್ಲೂ ಎದೆಗುಂದದ ಇವರು ‘ಇನ್ಕ್ವಿಲಾಬ್ ಜಿಂದಾಬಾದ್’ ಎನ್ನುತ್ತಲೇ ಅಮರರಾದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.