ಮಂಗಳೂರಿನ ಮಣ್ಣಗುಡ್ಡೆಯಲ್ಲಿ ಉತ್ತರ ಕರ್ನಾಟಕ ಖಾದ್ಯಗಳನ್ನು ನೀಡುತ್ತಿರುವ ‘ಹಳ್ಳಿ ಮನೆ ರೊಟ್ಟಿಸ್’ನ ಸ್ಥಾಪಕಿ ಶಿಲ್ಪಾ ಅವರು ನಡೆದು ಬಂದ ಹಾದಿಯಿಂದ ಪ್ರೇರಿತಗೊಂಡಿರುವ ಮಹೀಂದ್ರ ಗ್ರೂಪ್ನ ಮುಖ್ಯಸ್ಥ ಆನಂದ್ ಮಹೀಂದ್ರ ಅವರು ಅವರಿಗೆ ಬೊಲೆರೋ ಮಾಕ್ಸಿ ಟ್ರಕ್ ಪ್ಲಸ್ನ್ನು ನೀಡಿ ಗೌರವಿಸಿದ್ದಾರೆ.
ಹಾಸನದವರಾದ ಶಿಲ್ಪಾ 10ನೇ ತರಗತಿ ಡ್ರಾಪ್ ಔಟ್. 2015ರಲ್ಲಿ ಮಂಗಳೂರಿನ ಮಣ್ಣಗುಡ್ಡೆಯಲ್ಲಿ ತಮ್ಮ ಫುಡ್ ಶಾಪ್ ತೆರೆದರು. ಮಗನ ಶಿಕ್ಷಣಕ್ಕಾಗಿ ಒಟ್ಟುಗೂಡಿಸಿದ್ದ ರೂ.1 ಲಕ್ಷ ರೂಪಾಯಿಯಿಂದ ಮಹೀಂದ್ರ ಬುಲೇರಾ ಟ್ರಕ್ನ್ನು ಖರೀದಿಸಿ ಅದರಲ್ಲಿ ಫುಡ್ ಟ್ರಕ್ ತೆರೆದರು. ಅವರ ಈ ಫುಡ್ ಟ್ರಕ್ಗೆ ಭಾರೀ ಸ್ಪಂದನೆ ದೊರಕಿತ್ತು. ಅವರು ಎರಡನೇ ಫುಡ್ ಟ್ರಕ್ನ್ನು ಆರಂಭಿಸಿ ಅದನ್ನು ತಮ್ಮ ಸಹೊದರನ ಸುಪರ್ದಿಗೆ ನೀಡಿದ್ದಾರೆ.
ಅವರ ಉತ್ತರ ಕರ್ನಾಟಕ ಶೈಲಿಯ ರೊಟ್ಟಿಗಳನ್ನು ಸವಿಯಲು ದಕ್ಷಿಣಕನ್ನಡದ ಜನತೆ ಮುಗಿ ಬೀಳುತ್ತಿರುವುದು ವಿಶೇಷ. ಇತ್ತೀಚಿಗೆ ಅವರ ಸಾಧನೆಯ ಬಗೆಗಿನ ಕತೆಯನ್ನು ಪತ್ರಿಕೆಯೊಂದು ಪ್ರಕಟಿಸಿತ್ತು. ಇದನ್ನು ನೋಡಿದ್ದ ಆನಂದ್ ಮಹೀಂದ್ರ ಅವರು ಶಿಲ್ಪಾ ಅವರಿಗೆ ಮಹೀಂದ್ರ ವಾಹನ ಉಡುಗೊರೆಯನ್ನು ನೀಡುವ ಭರವಸೆ ನೀಡಿದ್ದರು. ಇದೀಗ ಆ ಭರವಸೆಯನ್ನು ಈಡೇರಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.