ಶ್ರೀನಗರ: 5 ವರ್ಷದ ಪುಟಾಣಿ ಬಾಲಕಿ ಜನ್ನತ್ ತನ್ನ ತಂದೆಯೊಂದಿಗೆ ಶ್ರೀನಗರದ ಐತಿಹಾಸಿಕ ದಾಲ್ ಸರೋವರವನ್ನು ಸ್ವಚ್ಛ ಮಾಡುವ ಕಾಯಕದಲ್ಲಿ ಮಗ್ನಳಾಗಿದ್ದಾಳೆ.
ಕೆಜಿ ಕಲಿಯುತ್ತಿರುವ ಜನ್ನತ್ ತನ್ನ ತಂದೆಯ ಸಹಾಯದೊಂದಿಗೆ ದಾಲ್ ಸರೋವರದಲ್ಲಿ ಸ್ಚಚ್ಛತಾ ಕಾರ್ಯವನ್ನು ನಡೆಸುತ್ತಿದ್ದಾಳೆ. ಮಾತ್ರವಲ್ಲ ಎಲ್ಲರಿಗೂ ಕಸವನ್ನು ಕಸದ ಬುಟ್ಟಿಗೆಯೇ ಹಾಕುವಂತೆ ಅರಿವು ಮೂಡಿಸುತ್ತಿದ್ದಾಳೆ.
ಜನರು, ಪ್ರವಾಸಿಗರು ಕಸಗಳನ್ನು ಸರೋವರಕ್ಕೆ ಬಿಸಾಕುತ್ತಿರುವುದರಿಂದ ಅದರ ಸೌಂದರ್ಯ ಮತ್ತು ಆರೋಗ್ಯ ಹಾಳಾಗುತ್ತಿದೆ. ಜನರು ಕಸದ ಬುಟ್ಟಿಗಳಿಗೆಯೇ ಕಸವನ್ನು ಹಾಕಲಿ ಎಂದು ನಾನು ಬಯಸುತ್ತೇವೆ ಎಂದು ಈಕೆ ಹೇಳುತ್ತಾಳೆ.
ಈ ಪುಟಾಣಿಯ ಕಾರ್ಯವನ್ನು ಪ್ರಧಾನಿ ನರೇಂದ್ರ ಮೋದಿಯವರೂ ಶ್ಲಾಘಿಸಿದ್ದಾರೆ.
ದಾಲ್ ಸರೋವರ ಕಾಶ್ಮೀರದ ಪ್ರಮುಖ ನೀರಿನ ಮೂಲ, ವಿಶ್ವದಾದ್ಯಂತದ ಜನರು ಇಲ್ಲಿಗೆ ಬಂದು ಇದರ ಸೌಂದರ್ಯವನ್ನು ವೀಕ್ಷಣೆ ಮಾಡುತ್ತಾರೆ,
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.