ನವದೆಹಲಿ: ಈಶಾನ್ಯ ಭಾಗದ ಗುಡ್ಡಗಾಡು ಪ್ರದೇಶಗಳ ಜನರಿಗೆ ವೈದ್ಯಕೀಯ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಸಹಾಯಕವಾಗುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ವೈದ್ಯರು ಮತ್ತು ಪರಿಕ್ಕರಗಳನ್ನೊಳಗೊಂಡ ಹೆಲಿಕಾಫ್ಟರ್-ಮೊಬೈಲ್ ಏರ್ ಡಿಸ್ಪೆನ್ಸರಿ ಸರ್ವಿಸ್ನ್ನು ಆರಂಭಿಸಲು ಮುಂದಾಗಿದೆ.
ಏರ್ ಡಿಸ್ಪೆನ್ಸರಿ ಸರ್ವಿಸ್ ಯೋಜನೆಯನ್ನು ಆರಂಭಿಸಲು ರೂ.80-ರೂ.100 ಕೋಟಿ ಬಿಡುಗಡೆಗೊಳಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಇದಕ್ಕಾಗಿ ನ್ಯಾಷನಲ್ ಹೆಲಿಕಾಫ್ಟರ್ ಕ್ಯಾರಿಯರ್ ಪವನ್ ಹನ್ಸ್ ಹೆಲಿಕಾಫ್ಟರ್ನ್ನು ಬಳಸಿಕೊಳ್ಳಲು ನಿರ್ಧರಿಸಲಾಗಿದೆ.
ಅಸ್ಸಾಂನ್ನು ಹೊರತುಪಡಿಸಿ ಒಟ್ಟು 6 ರಾಜ್ಯಗಳಿಗೆ ಎರಡು ಏರ್ ಡಿಸ್ಪೆನ್ಸರಿಗಳು ಶಿಲ್ಲಾಂಗ್ ಮತ್ತು ಇಂಫಾಲದಿಂದ ಕಾರ್ಯಾಚರಿಸಲಿವೆ ಎಂದು ಮೂಲಗಳು ತಿಳಿಸಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.