ಉಧಯ್ಪುರ್ ಜಿಲ್ಲೆಯ ಬುಡಕಟ್ಟು ಗ್ರಾಮವಾದ ಜಡ ವುಡಾ ಸೇರಿದಂತೆ ಅದರ ಸುತ್ತಮುತ್ತಲ ಹಲವು ಹಳ್ಳಿಗಳ ಮಕ್ಕಳು ಎರಡು ವರ್ಷಗಳ ಹಿಂದೆ ಶಾಲೆಯ ಮೆಟ್ಟಿಲು ಹತ್ತದೆ, ಭವಿಷ್ಯದ ಚಿಂತೆಯಿಲ್ಲದೆ ಕೇರಿ ಕೇರಿ ಅಲೆದಾಡುತ್ತಿದ್ದರು. ಇವರ ಪೋಷಕರು ಮಕ್ಕಳನ್ನು ಅವರ ಪಾಡಿಗೆ ಬಿಟ್ಟು ಕೂಲಿಗೆ ಹೋಗುತ್ತಿದ್ದರು.
ಆದರೆ ಎರಡು ವರ್ಷದಿಂದೀಚೆಗೆ ಅಲ್ಲಿನ ಚಿತ್ರಣ ಬದಲಾಗಿದೆ. ಮಕ್ಕಳು ಶಿಸ್ತುಬದ್ಧವಾಗಿ ಶಾಲೆಗೆ ಹೋಗುತ್ತಿದ್ದಾರೆ, ಇದಕ್ಕೆ ಕಾರಣವಾಗಿದ್ದು ಇಬ್ಬರು ಯುವಕರ ಶ್ರಮ.
ಸೋನು ಮೀನಾ ಮತ್ತು ರಾಮ್ಲಾಲ್ ಎಂಬ ಯುವಕರು ಈ ಗ್ರಾಮದ ದಿಕ್ಕುದೆಸೆಯಿಲ್ಲದೆ ತಿರುತ್ತಿದ್ದ ಮಕ್ಕಳನ್ನು ನೋಡಿ ಮೊದಲು ಇಲ್ಲೊಂದು ಅರಣ್ಯ ಇಲಾಖೆಯ ಸಹಾಯ ಪಡೆದು ಅದರ ಕಟ್ಟಡದಲ್ಲಿ ಶಾಲೆಯನ್ನು ಆರಂಭಿಸಿದರು.
ಮನೆ ಮನೆಗೆ ತೆರಳಿ ಮಕ್ಕಳನ್ನು ತಮ್ಮ ಶಾಲೆಗೆ ಕಳುಹಿಸಿ ಎಂದು ಪೋಷಕರಿಗೆ ಮನವರಿಕೆ ಮಾಡಿದರು. ಅವರಿಗೆ ಅಕ್ಷರ ಕಲಿಸಿದರು, ಕಥೆಗಳನ್ನು ಹೇಳಿಕೊಟ್ಟರು, ಬರೆಸಿದರು, ಓದಿಸಿದರು. ಮಕ್ಕಳು ಸಂಪೂರ್ಣ ಸಾಕ್ಷರತೆಯನ್ನು ಪಡೆದ ಬಳಿಕ ಅವರ ವಯಸ್ಸಿಗೆ ಅನುಗುಣವಾಗಿ ಸರ್ಕಾರಿ ಶಾಲೆಯಲ್ಲಿ ಆಯಾ ತರಗತಿಗಳಿಗೆ ಸೇರ್ಪಡೆಗೊಳಿಸಿದರು.
ಇವರ ಶಾಲೆಯಿದ್ದ ಕಟ್ಟಡ ಮಳೆ ಬಂದಾಗ ಸೋರುತ್ತಿದ್ದರೂ ಅದೇನೋ ಕಸರತ್ತುಗಳನ್ನು ಮಾಡಿ ವರ್ಷಪೂರ್ತಿ ಶಾಲೆ ನಡೆಯುವಂತೆ ಮಾಡಿದ ಕೀರ್ತಿ ಇವರದ್ದು. ಸರ್ಕಾರದ ಯಾವುದೇ ನೆರವನ್ನು ಪಡೆಯದೆ ಇವರು ಗ್ರಾಮದ ಮಕ್ಕಳು ಶಾಲೆಯತ್ತ ಹೊರಳುವಂತೆ ಈ ಯುವಕರು ಮಾಡಿದ್ದು ನಿಜಕ್ಕೂ ಶ್ಲಾಘನಾರ್ಹ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.