ಡೋಕ್ಲಾಂ ಬಿಕ್ಕಟ್ಟನ್ನು ಭಾರತ-ಚೀನಾ ರಾಜತಾಂತ್ರಿಕ ನೆಲೆಯಲ್ಲಿ ಬಗೆಹರಿಸಿಕೊಳ್ಳಲು ಕಾರಣೀಕರ್ತರಾದವರು ಪ್ರಧಾನಿ ನರೇಂದ್ರ ಮೋದಿಯವರ ರಾಷ್ಟ್ರೀಯ ಭದ್ರತಾ ಸಲಹೆಗಾರರಾದ ಅಜಿತ್ ಕುಮಾರ್ ದೋವಲ್. ತಮ್ಮ ಕೌಶಲ್ಯಭರಿತ ಕಾರ್ಯಾಚರಣೆಗಳಿಂದ ಅವರು ದೇಶದ ಮನ್ನಣೆ ಗಳಿಸುತ್ತಿದ್ದಾರೆ.
ಭಾರತದ ಪಾಲಿಗೆ ಜೇಮ್ಸ್ ಬಾಂಡ್ ಆಗಿರುವ ದೋವಲ್ ಮೋದಿಯ ಅತೀ ನಂಬಿಕಸ್ಥ ವ್ಯಕ್ತಿ. ಅದು ಕೇವಲ ರಾಷ್ಟ್ರೀಯ ಭದ್ರತೆಯ ವಿಷಯದಲ್ಲಿ ಮಾತ್ರವಲ್ಲ, ವಿದೇಶಾಂಗ ಸಂಬಂಧಗಳ ವಿಷಯದಲ್ಲೂ. 7 ವರ್ಷಗಳ ಕಾಲ ಪಾಕಿಸ್ಥಾನದಲ್ಲಿ ಅಂಡರ್ ಕವರ್ ಏಜೆಂಟ್ ಆಗಿ ಕರ್ತವ್ಯ ನಿರ್ವಹಿಸಿದ ಸಾಹಸಿ ಇವರು. ಪಾಕಿಸ್ಥಾನಿ ಮುಸ್ಲಿಮನಾಗಿಯೇ ಅಲ್ಲಿ ಕಾರ್ಯ ಮಾಡಿದ್ದ ಇವರು, ಸ್ಥಳಿಯ ಮಸೀದಿಗಳಿಗೆ ತೆರಳಿ ಸ್ಥಳೀಯರ ಸಂಪರ್ಕ ಸಾಧಿಸುತ್ತಿದ್ದರು.
ಕಿವಿಯಲ್ಲಿ ತೂತಿದ್ದ ಕಾರಣ ಒಂದು ಬಾರಿ ಅವರು ಸ್ಥಳೀಯರ ಕೈಗೆ ಸಿಕ್ಕಿಬಿದ್ದಿದ್ದರು. ಹಿಂದೂ ಎಂಬ ಅನುಮಾನ ಅಲ್ಲಿರುವವರಿಗೆ ಬಂದಿತ್ತು. ಅದ್ಹೇಗೋ ಪಾರಾದ ಅವರು ಬಳಿಕ ಸರ್ಜರಿ ಮಾಡಿಸಿ ಕಿವಿತೂತನ್ನು ಮುಚ್ಚಿಸಿದ್ದರು.
1988ರಲ್ಲಿ ಅಪರೇಶನ್ ಬ್ಲ್ಯಾಕ್ ಥಂಡರ್ ನಡೆಯುವ ತುಸು ಮುಂಚೆ ಉಗ್ರರ ಬಳಿಕ ಹೋಗಿ ತಮ್ಮನ್ನು ತಾವು ಐಎಸ್ಐ ಸ್ಪೈ ಎಂದು ಪರಿಚಯಿಸಿ ನಿಮಗೆ ಸಹಾಯ ಮಾಡಲು ಬಂದಿದ್ದೇನೆ ಎಂದು ಹೇಳಿದ್ದರು. ಬಳಿಕ ಅವರಿಂದ ಮಾಹಿತಿ ಸಂಗ್ರಹಿಸಿ ಅಧಿಕಾರಿಗಳಿಗೆ ರವಾನಿಸಿದ್ದರು. ಗುಪ್ತಚರ ಇಲಾಖೆಯ ಸಿಬ್ಬಂದಿಯಾಗಿ ಅವರು ನಿರ್ವಹಿಸಿದ ಕಾರ್ಯ ನಿಜಕ್ಕೂ ರೋಮಾಂಚನಕಾರಿಯಾಗಿದೆ.
ಉತ್ತರಾಖಂಡದ ಪೌರಿ ಗರ್ಹ್ವಾಲ್ನಲ್ಲಿ ಜನಿಸಿದ ದೋವಲ್ 1968ರ ಬ್ಯಾಚ್ನ ಕೇರಳ ಕೇಡರ್ನ ಐಪಿಎಸ್ ಅಧಿಕಾರಿ. ಗುಪ್ತಚರ ಇಲಾಖೆ ಕಾರ್ಯಾಚರಣೆಗಳಲ್ಲಿ ಭಾಗಹಿಸಿದ ಇವರು, 2004-05 ರಲ್ಲಿ ಅದರ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದಾರೆ. ಭಾರತದ ಎರಡನೇ ಅತ್ಯುನ್ನತ ಶಾಂತಿ ಶೌರ್ಯ ಪ್ರಶಸ್ತಿ ಕೀರ್ತಿಚಕ್ರದಿಂದ ಇವರು ಪುರಸ್ಕೃತರಾಗಿದ್ದಾರೆ. ಗುಪ್ತಚರ ಇಲಾಖೆಯಿಂದ ನಿವೃತ್ತರಾದ ಬಳಿಕ ಇವರು ತಮ್ಮದೇ ಆದ ಥಿಂಕ್ ಟ್ಯಾಂಕ್ ವಿವೇಕಾನಂದ ಇಂಟರ್ನ್ಯಾಷನಲ್ ಫೌಂಡೇಶನ್ ಸ್ಥಾಪಿಸಿದರು.
ಇದೀಗ ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿ ಅವರು ಡೋಕ್ಲಾಂ ವಿಷಯವನ್ನು ಸದ್ಯದ ಮಟ್ಟಿಗೆ ಬಗೆಹರಿಸಲು ಯಶಸ್ವಿಯಾಗಿದ್ದಾರೆ. ಅವರ ರಾಜತಾಂತ್ರಿಕ ನೈಪುಣ್ಯತೆಗೆ ಇಡೀ ಭಾರತವೇ ಭೇಷ್ ಎಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.