22 ವರ್ಷಗಳ ಕಾಲ ಪರ್ವತವನ್ನು ಕೊರೆದು ರಸ್ತೆ ನಿರ್ಮಿಸಿದ ದಶರಥ ಮಾಂಝಿಯ ಕಥೆ ನಮಗೆಲ್ಲಾ ತಿಳಿದಿದೆ. ಆದರೆ ಛತ್ತೀಸ್ಗಢದ ದಶರಥ ಮಾಂಝೀಯೆಂದೇ ಕರೆಯಲ್ಪಡುವ ಶ್ಯಾಮ್ಲಾಲ್ನ ಬಗ್ಗೆ ನಾವು ತಿಳಿದುಕೊಳ್ಳುವುದು ಅತ್ಯವಶ್ಯಕ.
ಕೊರಿಯಾ ಜಿಲ್ಲೆಯ ಸಾಜ ಪಹದ್ ಗ್ರಾಮ ತೀವ್ರ ನೀರಿನ ಸಮಸ್ಯೆಯಿಂದ ಬಳಲುತ್ತಿತ್ತು. ದನ ಕರುಗಳಿಗೆ ನೀರಿಲ್ಲದೆ ಅಲ್ಲಿನ ಜನ ಕಂಗಾಲಾಗಿದ್ದರು. ಆದರೆ ಸಮಸ್ಯೆ ನೀಗಿಸಲು ಏನು ಮಾಡಬೇಕೆಂದು ಅಲ್ಲಿನ ಜನತೆಗೆ ತೋಚಿರಲಿಲ್ಲ, ಸರ್ಕಾರವೂ ಕೈಕಟ್ಟಿ ಕುಳಿತಿತ್ತು.
ಇಂತಹ ಪರಿಸ್ಥಿತಿಯಲ್ಲಿ ಸೆಟೆದು ನಿಂತ 15 ವರ್ಷದ ಶ್ಯಾಮ್ಲಾಲ್ ಕೊಳವನ್ನು ತೋಡಲು ಆರಂಭಿಸಿದ. ಗ್ರಾಮಸ್ಥರು ಈತನ ಕಾರ್ಯ ಕಂಡು ನಗಲಾರಂಭಿಸಿದರು. ಆದರೆ ಬುಡಕಟ್ಟು ಜನಾಂಗದ ಶ್ಯಾಮ್ ಧೃತಿಗೆಡದೆ ಕಾರ್ಯವನ್ನು ಮಾಡುತ್ತಲೇ ಸಾಗಿದ.
ಅರಣ್ಯವೊಂದರಲ್ಲಿ ಜಾಗವನ್ನು ಗೊತ್ತು ಮಾಡಿ ಬರೋಬ್ಬರಿ 27 ವರ್ಷಗಳ ಕಾಲ ಗುಂಡಿ ತೋಡಿ ಇಂದು ಅಲ್ಲೊಂದು ಸುಂದರ ನೀರಿನ ಕೊಳವನ್ನು ರಚಿಸಿದ್ದಾರೆ ಶ್ಯಾಮ್. ಈಗ ಅವರಿಗೆ 42 ವರ್ಷ.
ಗ್ರಾಮಸ್ಥರಾಗಲಿ, ಸ್ಥಳಿಯಾಡಳಿತವಾಗಲಿ ಯಾರೊಬ್ಬರೂ ಅವರ ಸಹಾಯಕ್ಕೆ ಬರಲಿಲ್ಲ. ಆದರೆ ಜನರಿಗಾಗಿ, ಈ ಗ್ರಾಮದ ದನಕರುಗಳಿಗಾಗಿ ಈ ಕಾರ್ಯ ಮಾಡಿದೆ ಎನ್ನುತ್ತಾರೆ ಅವರು.
ಇದೀಗ ಎಲ್ಲರ ಪಾಲಿಗೂ ಅವರು ರೋಲ್ ಮಾಡೆಲ್ ಆಗಿದ್ದಾರೆ, ರಕ್ಷಕನಾಗಿದ್ದಾರೆ. ಅವರು ತೋಡಿದ ಕೊಳದ ನೀರನ್ನು ಎಲ್ಲರೂ ಬಳಸುತ್ತಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.