ಭಾರತವನ್ನು ಬಯಲು ಶೌಚಮುಕ್ತಗೊಳಿಸಬೇಕು ಮತ್ತು ಎಲ್ಲಾ ತ್ಯಾಜ್ಯಗಳಿಂದ ಸ್ವತಂತ್ರಗೊಳಿಸಬೇಕು ಎಂಬುದು 12 ವರ್ಷದ ಮೊನಿದ್ರಿತ ಚಟರ್ಜಿಯ ಕನಸು. ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತಳಾಗಿರುವ ಈಕೆ ಪ್ಲಾಸ್ಟಿಕ್ ಬಾಟಲ್, ಬೂದಿ ಮುಂತಾದ ತ್ಯಾಜ್ಯಗಳನ್ನು ಹಾಗೂ ತನ್ನ ಪಾಕೆಟ್ ಮನಿಯನ್ನು ಬಳಸಿ ಟಾಯ್ಲೆಟ್ ನಿರ್ಮಿಸುತ್ತಿದ್ದಾಳೆ. ಈಗಾಗಲೇ 6 ಟಾಯ್ಲೆಟ್ಗಳನ್ನು ಕಟ್ಟಿಸಿದ ಕೀರ್ತಿ ಈಕೆಯದ್ದು.
ಈ ಪುಟಾಣಿ ಬಾಲಕಿ ಕಳೆದ ವರ್ಷ ಜೇಮ್ಶೆಡ್ಪುರದಿಂದ ತನ್ನ ಸ್ವಚ್ಛ ಭಾರತ ಅಭಿಯಾನವನ್ನು ಆರಂಭಿಸಿದ್ದಾಳೆ. ಆಕೆಯ ಶ್ರಮದ ಫಲವಾಗಿ 6 ಟಾಯ್ಲೆಟ್ ಅಲ್ಲಿ ಎದ್ದು ನಿಂತಿದೆ. ಈಕೆಯ ಕಾರ್ಯವನ್ನು ಪರಿಗಣಿಸಿ ಜಾರ್ಖಾಂಡ್ ಸರ್ಕಾರ ಆಕೆಗೆ ಸ್ವಾತಂತ್ರ್ಯ ದಿನಾಚರಣೆಯಂದು ಸ್ವಚ್ಛತಾ ಪ್ರಶಸ್ತಿ ನೀಡಿ ಗೌರವಿಸಿದೆ.
ತನಗೆ ಪೋಷಕರು ನೀಡಿದ ಹಣವನ್ನು ಕೂಡಿಟ್ಟು 24,000 ರೂ ಆದಾಗ ಅದರಿಂದ ಗ್ರಾಮವೊಂದರ ಹೆಣ್ಣು ಮಕ್ಕಳಿಗಾಗಿ ಎರಡು ಶೌಚಾಲಯಗಳನ್ನು ನಿರ್ಮಿಸಿದಳು. 3 ಸಾವಿರ ಪ್ಲಾಸ್ಟಿಕ್ ಬಾಟಲ್ಗಳನ್ನು ಸಂಗ್ರಹಿಸಿ ಮತ್ತೊಂದು ಗ್ರಾಮದಲ್ಲಿ ಟಾಯ್ಲೆಟ್ ನಿರ್ಮಿಸಿದಳು. ಅದರ ಕಾರ್ಯ ಇತ್ತೀಚಿಗಷ್ಟೇ ಪೂರ್ಣಗೊಂಡಿತ್ತು.
ಅಷ್ಟೇ ಅಲ್ಲದೇ ವಾರಕ್ಕೊಮ್ಮೆ ಗ್ರಾಮಗಳಿಗೆ ತೆರಳಿ ಸ್ವಚ್ಛತೆ, ನೈರ್ಮಲ್ಯಗಳ ಅವಶ್ಯತೆಯ ಬಗ್ಗೆ ಆಕೆ ಅರಿವು ಮೂಡಿಸುತ್ತಾಳೆ. ಗ್ರಾಮಸ್ಥರನ್ನು ಟಾಯ್ಲೆಟ್ ನಿಮಿಸಲು ಪ್ರೇರೇಪಿಸುತ್ತಾಳೆ. ಈ ಮೂಲಕ 2018ರ ವೇಳೆಗೆ ಬಯಲು ಶೌಚಮುಕ್ತಗೊಳ್ಳಬೇಕು ಎಂಬ ಗುರಿಯಿಟ್ಟುಕೊಂಡಿರುವ ಈಕೆ ಜಾರ್ಖಾಂಡ್ಗೆ ತನ್ನದೇ ಆದ ಕೊಡುಗೆಗಳನ್ನು ನೀಡುತ್ತಿದ್ದಾಳೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.