ಕನ್ನಡದ ಪ್ರಸಿದ್ಧ ಚಿತ್ರ ತಾರೆ ಶಂಕರ್ ನಾಗ್ ಅವರ ಖ್ಯಾತ ಸಿನಿಮಾ ಆಟೋ ರಾಜವನ್ನು ನೋಡಿ ಪ್ರೇರಣೆಗೊಂಡು 1993ರಲ್ಲಿ ಆಟೋ ಚಾಲಕನಾದ ಶಿವಕುಮಾರ್ ಒರ್ವ ಕವಿ, ರೇಡಿಯೋ ಜಾಕಿಯೂ ಹೌದು. ತಮ್ಮ ಆಟೋದಲ್ಲಿ ವಿದ್ಯಾರ್ಥಿಗಳಿಗೆ, ಹಿರಿಯ ನಾಗರಿಕರಿಗೆ, ಸೈನಿಕರ ಕುಟುಂಬಸ್ಥರಿಗೆ ಡಿಸ್ಕೌಂಟ್ ನೀಡುವ ಇವರು, ತಮ್ಮ ಆಟೋದಲ್ಲಿ ಲೈಬ್ರರಿ, ಪ್ರಥಮ ಚಿಕಿತ್ಸಾ ಪೆಟ್ಟಿಗೆ, ಶ್ರೇಷ್ಠರ ಭಾವಚಿತ್ರ ಮತ್ತು ನುಡಿಮುತ್ತುಗಳನ್ನು, ಪೇಟಿಂಗ್ಗಳನ್ನು ಇಟ್ಟಿದ್ದಾರೆ.
ತಮ್ಮ ವಿಶಾಲ ಹೃದಯದ ಕಾರ್ಯಕ್ಕಾಗಿ ಇದುವರೆಗೆ ಅವರು 31 ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಹೆಚ್ಚಿನ ಪ್ರಶಸ್ತಿಗಳನ್ನು ಪ್ರಯಾಣಿಕರ ವಸ್ತುಗಳನ್ನು ವಾಪಾಸ್ ನಿಡುವ ಇವರ ಪ್ರಮಾಣಿಕತೆಯನ್ನು ನೋಡಿ ಬೆಂಗಳೂರು ಸಿಟಿ ಪೊಲೀಸರು ನೀಡಿದ್ದಾರೆ.
ವಾರದಲ್ಲಿ ಎರಡು ಬಾರಿ ರೇಡಿಯೋ ಜಾಕಿ ಆಗುವ ಇವರು, ರೇಡಿಯೋ ಆಕ್ಟಿವ್ನಲ್ಲಿ ಕಾರ್ಯಕ್ರಮ ನಡೆಸಿಕೊಡುತ್ತಾರೆ. ಇದುವರೆಗೆ ಇವರು 1,500 ಕವಿತೆಗಳನ್ನು ರಚಿಸಿದ್ದಾರೆ.
8ನೇ ತರಗತಿಗೆ ಶಾಲೆಬಿಟ್ಟ ಇವರು ಬಡ ಮಕ್ಕಳಿಗೆ ಉಚಿತವಾಗಿ ಪೆನ್ನು, ಪುಸ್ತಕ, ಸಮವಸ್ತ್ರಗಳನ್ನು ತೆಗೆದುಕೊಡುತ್ತಾರೆ. ಇದಕ್ಕಾಗಿ ವಾರ್ಷಿಕ ರೂ.1 ಲಕ್ಷ ವ್ಯಯ ಮಾಡುತ್ತಾರೆ.
ಆಟೋ ಚಾಲಕನಾಗಿ ಸಮಾಜಕ್ಕೆ ಉತ್ತಮ ಕಾರ್ಯವನ್ನು ಮಾಡುವ, ಇತರರಿಗೆ ಮಾದರಿ ಎನಿಸುವ ರೀತಿ ಬದುಕುತ್ತಿರುವ ಶಿವಕುಮಾರ್ ಅವರಿಗೆ ಹಾಟ್ಸಾಫ್.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.