ಲಕ್ನೋ: ಉತ್ತರಪ್ರದೇಶದ ಬಿಜೆಪಿ ರಕ್ತದಾನ ಮಾಡುವಂತಹ ತನ್ನ ಪಕ್ಷದ 1.35 ಲಕ್ಷ ಕಾರ್ಯಕರ್ತರ ಪಟ್ಟಿಯಿರುವ ಡೈರೆಕ್ಟರಿ ಸಿದ್ಧಪಡಿಸಿದ್ದು, ಸರ್ಕಾರಿ ಆಸ್ಪತ್ರೆಗಳಲ್ಲಿ ದಾಖಲಾಗಿರುವ ರೋಗಿಗಳ ಸಂಬಂಧಿಗಳು ಇವರಿಗೆ ಒಂದು ಕರೆ ಮಾಡಿ ಇವರಿಂದ ರಕ್ತವನ್ನು ಪಡೆದುಕೊಳ್ಳಬಹುದಾಗಿದೆ.
ವಿಸ್ತೃತ ರಕ್ತಪರೀಕ್ಷೆಯನ್ನು ನಡೆಸಿ 1.35 ಲಕ್ಷ ಕಾರ್ಯಕರ್ತರ ಡೈರೆಕ್ಟರಿಯನ್ನು ಸಿದ್ಧಪಡಿಸಲಾಗಿದೆ. ಇದರಿಂದಾಗಿ ರಕ್ತದಾನಿಗಳ ಸಂಖ್ಯೆ ದ್ವಿಗುಣಗೊಳ್ಳಲಿದೆ ಎಂದು ರಾಜ್ಯ ಬಿಜೆಪಿ ವಕ್ತಾರ ಸಲಭ್ ಮಣಿ ತ್ರಿಪಾಠಿ ತಿಳಿಸಿದ್ದಾರೆ.
ಈ ಕಾರ್ಯದಿಂದಾಗಿ ಸಾಮಾನ್ಯ ಜನರೊಂದಿಗೆ ನಮಗೆ ರಕ್ತ ಸಂಬಂಧವನ್ನು ಹೊಂದುವುದು ಸಾಧ್ಯವಾಗಲಿದೆ ಎಂದಿದ್ದಾರೆ.
ಈ ಡೈರೆಕ್ಟರಿಯಲ್ಲಿ ಅತೀ ವಿರಳ ರಕ್ತದ ಗುಂಪು ಹೊಂದಿರುವವರ ಬಗ್ಗೆ ವಿವರಗಳಿದೆ. ಹೀಗಾಗಿ ತುರ್ತು ಸಂದರ್ಭದಲ್ಲಿ ರೋಗಿ ಮನೆಯವರು ಇವರನ್ನು ಸಂಪರ್ಕಿಸಬಹುದಾಗಿದೆ.
ಸಿಎಂ ಯೋಗಿ ಆದಿತ್ಯನಾಥ ಅವರು ಬುಧವಾರ ಈ ಡೈರೆಕ್ಟರಿಯನ್ನು ಸಾರ್ವಜನಿಕರಿಗಾಗಿ ಬಿಡುಗಡೆಗೊಳಿಸಿದ್ದಾರೆ.
ಈ ವೇಳೆ ಮಾತನಾಡಿದ ಅವರು, ‘ದೇಶಕ್ಕೆ ಪ್ರತಿನಿತ್ಯ 120 ಲಕ್ಷ ಯುನಿಟ್ ರಕ್ತದ ಅವಶ್ಯಕತೆ ಇದೆ. ಆದರೆ ಕೇವಲ 60 ಲಕ್ಷ ಯುನಿಟ್ ರಕ್ತಗಳು ಮಾತ್ರ ಲಭ್ಯವಿದೆ. ಈ ಡೈರೆಕ್ಟರಿಯಿಂದ ರಕ್ತದ ಅವಶ್ಯಕತೆಯ ಕೊರತೆಯನ್ನು ಕೊಂಚವಾಗಿ ನೀಗಿಸಬಹುದು ಮತ್ತು ಇತರರಿಗೂ ರಕ್ತದಾನ ಮಾಡಲು ಉತ್ತೇಜಿಸಬಹುದು’ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.