ನವದೆಹಲಿ: ಹಿಂದುತ್ವವನ್ನು ಆಧರಿಸಿದ ಕಲಾಕೃತಿ, ವರ್ಣಚಿತ್ರ ಮತ್ತು ಇತರ ಪಾರಂಪರಿಕ ಮಹತ್ವವನ್ನು ಸಾರುವ ಸಣ್ಣ ಮತ್ತು ಬೃಹತ್ ಮ್ಯೂಸಿಯಂ ಮತ್ತು ಗ್ಯಾಲರಿಗಳನ್ನು ದೇಶದಾದ್ಯಂತ ಸಂಸ್ಕೃತಿ ಇಲಾಖೆ ಏರ್ಪಡಿಸುತ್ತಿದೆ.
ಸುಮಾರು 800 ಸಣ್ಣ ಮಟ್ಟದ ಮತ್ತು ದೊಡ್ಡ ವಸ್ತು ಪ್ರದರ್ಶನಗಳನ್ನು ಆಯೋಜನೆ ಮಾಡಲಾಗುತ್ತದೆ. ದೆಹಲಿಯಲ್ಲಿ 5 ಮ್ಯೂಸಿಯಂ, ಗ್ಯಾಲರಿ ಏರ್ಪಡಲಿದೆ. ಸ್ಥಳವಕಾಶದ ಕೊರತೆಯಿಂದಾಗಿ ಸಾರ್ವಜನಿಕರಿಗೆ ಪ್ರದರ್ಶನಗೊಳ್ಳದೆ ಇರುವಂತಹ ಕೋಟ್ಯಾಂತರ ವಸ್ತುಗಳು ಇಲ್ಲಿ ಪ್ರದರ್ಶನಗೊಳ್ಳಲಿದೆ.
ಸುಮಾರು 2 ಲಕ್ಷ ವಸ್ತುಗಳು ಪ್ರದರ್ಶನಗೊಳ್ಳಲಿದೆ. ನವದೆಹಲಿಯಲ್ಲಿ ನ್ಯಾಷನಲ್ ಮ್ಯೂಸಿಯಂ ಈ ವಸ್ತುಪ್ರದರ್ಶನಗಳನ್ನು ಆಯೋಜನೆ ಮಾಡುತ್ತಿದೆ. ಕಳೆದ ವಾರದಿಂದಲೇ ಇದು ಆರಂಭಗೊಂಡಿದೆ. ‘ಟೋಪಿಸ್’ ಎಂಬ ಹೆಸರಲ್ಲಿ ವಸ್ತು ಪ್ರದರ್ಶನ ಏರ್ಪಡಿಸಲಾಗಿತ್ತು. ಇಲ್ಲಿ ಮರಾಠ, ಝರ್ದೊಷಿ ಸೇರಿದಂತೆ ಹಲವಾರು ಪ್ರಿಂಟೆಡ್ ಟರ್ಬನ್, ದೊಪಲ್ಲಿಗಳನ್ನು ಪ್ರದರ್ಶನಕ್ಕಿಡಲಾಗಿತ್ತು.
ರಾಮ, ಲಕ್ಷ್ಮಣ, ಸೀತಾ, ರಾವಣ ಮತ್ತಿತರರ ಕಲ್ಲಿನ ಶಿಲೆ, ರಾಮ-ರಾವಣ ಯುದ್ಧ, ಶೂರ್ಪನಕಿಯ ಮೂಗು ಕೊಯ್ಯುವ ಚಿತ್ರಣ ಕೂಡ ವೀಕ್ಷಕರ ಕಣ್ಮನ ಸೆಳೆದಿತ್ತು. ಕಾಳಿ ಪ್ರತಿಮೆಯನ್ನೂ ಅನಾವರಣಗೊಳಿಸಲಾಗಿತ್ತು.
ಗಾಂಧಾರ ಗುರುಕುಲ, ಮಥುರ ಗುರುಕುಲ, ಇಕ್ಷ್ವಾಕು ಗುರುಕುಲಗಳನ್ನೂ ಪ್ರದರ್ಶಿಸಲಾಗಿತ್ತು.
ಪ್ರತಿ 15 ದಿನಗಳಿಗೊಮ್ಮೆ ಪ್ರದರ್ಶನವನ್ನು ಬದಲಾಯಿಸಲಾಗುತ್ತದೆ. ಇದರಿಂದ ವೀಕ್ಷಕರು ಹೆಚ್ಚಿನ ಕಲೆ, ವಸ್ತುಗಳನ್ನು ನೋಡಬಹುದಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.