ನವದೆಹಲಿ: ಭಯೋತ್ಪಾದನೆಯಿಂದ ಹಿಡಿದು ಹವಮಾನ ವೈಪರೀತ್ಯದವರೆಗಿನ ಎಲ್ಲಾ ಜಾಗತಿಕ ಸಮಸ್ಯೆಗಳಿಗೂ ಮಾತುಕತೆ ಮತ್ತು ಚರ್ಚೆಯೊಂದೇ ಪರಿಹಾರ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಪಟ್ಟಿದ್ದಾರೆ.
‘ಸಂವಾದ್’ ಕಾರ್ಯಕ್ರಮದ 2ನೇ ಸಂಚಿಕೆಗೆ ವಿಡಿಯೋ ಸಂದೇಶ ರವಾನಿಸಿರುವ ಅವರು, ’21 ನೇ ಶತಮಾನದ ಅಂತರ್ ಅವಲಂಬಿತ ಮತ್ತು ಅಂತರ್ ಸಂಪರ್ಕಿತ ಜಗತ್ತು ಭಯೋತ್ಪಾದನೆಯಿಂದ ಹಿಡಿದು ಹವಮಾನ ವೈಪರೀತ್ಯದವರೆಗೆ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದೆ. ಈ ಎಲ್ಲದಕ್ಕೂ ಏಷ್ಯಾದ ಅತೀ ಹಳೆಯ ಸಂಪ್ರದಾಯ ಮಾತುಕತೆ ಮತ್ತು ಚರ್ಚೆಯ ಮೂಲಕ ಪರಿಹಾರಕಂಡುಕೊಳ್ಳಬಹುದು ಎಂಬ ಬಗ್ಗೆ ನನಗೆ ಭರವಸೆ ಇದೆ’ ಎಂದಿದ್ದಾರೆ.
ಕಠಿಣ ಸಮಸ್ಯೆಗಳಿಗೆ ಮಾತುಕತೆಯ ಮೂಲಕ ಪರಿಹಾರ ಕಂಡುಕೊಳ್ಳುವ ಅಚಲ ನಂಬಿಕೆ ಹೊಂದಿದ್ದ ಪ್ರಾಚೀನ ಭಾರತದ ಪ್ರೊಡಕ್ಟ್ ತಾನು ಎಂಬುದಾಗಿ ಮೋದಿ ಹೇಳಿಕೊಂಡಿದ್ದಾರೆ.
ಆಳವಾಗಿ ಬೇರೂರಿರುವ ಧಾರ್ಮಿಕತೆಯ ಕೆಲವೊಂದು ಮೌಢ್ಯಗಳನ್ನು, ಸಮುದಾಯಗಳನ್ನು ಒಡೆಯುವ ಪೂರ್ವಾಗ್ರಹಗಳನ್ನು, ರಾಷ್ಟ್ರಗಳ ಕಲಹಕ್ಕೆ ಬೀಜ ಬಿತ್ತುವ ಕಾರ್ಯವನ್ನು ನಿರ್ಮೂಲನೆ ಮಾಡುವುದು ಸಂವಾದದಿಂದ ಮಾತ್ರ ಸಾಧ್ಯ ಎಂದರು.
ರಾಮ, ಕೃಷ್ಣ, ಬುದ್ಧ, ಭಕ್ತ ಪ್ರಹ್ಲಾದನ ಉದಾಹರಣೆಗಳನ್ನು ನೀಡಿದ ಅವರು, ಇವರೆಲ್ಲರ ಕಾರ್ಯ ಧರ್ಮವನ್ನು ಎತ್ತಿಹಿಡಿಯುವುದೇ ಆಗಿತ್ತು, ಇದರಿಂದಾಗಿಯೇ ಪ್ರಾಚೀಣ ಕಾಲದಿಂದ ಆಧುನಿಕ ಕಾಲದವರೆಗೂ ಭಾರತೀಯರು ಜೀವಿಸಿದ್ದಾರೆ ಎಂದರು.
ಕಲಹಗಳನ್ನು ದೂರವಿರಿಸಿರುವ ಮತ್ತು ಪರಿಸರ ಜಾಗೃತಿಯನ್ನು ಬೆಳೆಸುವ ಜಾಗತಿಕ ಕಾರ್ಯಕ್ರಮ ‘ಸಂವಾದ’ವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.