ಅಯೋಧ್ಯಾ: ರಾಮಜನ್ಮಭೂಮಿ ವಿವಾದಕ್ಕೆ ಕೋರ್ಟ್ ಹೊರಗಡೆ ಪರಿಹಾರಕಂಡುಕೊಳ್ಳುವ ಬಗೆಗಿನ ಚರ್ಚೆಗಳು ಮುಂದುವರೆಯುತ್ತಿರುವ ಈ ಸಂದರ್ಭದಲ್ಲೇ ಮುಸ್ಲಿಮರ ಗುಂಪೊಂದು ಇಟ್ಟಿಗೆ ಹಿಡಿದುಕೊಂಡು ರಾಮ ಮಂದಿರವನ್ನು ನಿರ್ಮಿಸಲು ಮುಂದಾಗಿಯೇ ಬಿಟ್ಟಿದೆ.
ಗುರುವಾರ ‘ಮುಸ್ಲಿಂ ಕರಸೇವಕ್ ಮಂಚ್’ ಎಂಬ ಬ್ಯಾನರ್ ಹಿಡಿದ ಮುಸ್ಲಿಂ ಗುಂಪೊಂದು ಒಂದು ಟ್ರಕ್ನಲ್ಲಿ ಇಟ್ಟಿಗೆ ತುಂಬಿಸಿಕೊಂಡು ಅಯೋಧ್ಯೆಗೆ ಆಗಮಿಸಿದೆ. ಮಾತ್ರವಲ್ಲ ’ಜೈಶ್ರೀರಾಮ್’ ಎಂಬ ಉದ್ಘೋಷಗಳನ್ನು ಹಾಕಿದೆ. ಇದು ಅಯೋಧ್ಯಾ ಜನತೆಯನ್ನು ಒಂದು ಕ್ಷಣ ಆಶ್ಚರ್ಯಚಕಿತಗೊಳಿಸಿದೆ.
ಶ್ರೀರಾಮ ಮಂದಿರ್ ನಿರ್ಮಾಣ್ ಮುಸ್ಲಿಂ ಕರ್ ಸೇವಕ್ ಮಂಚ್ ಕಾರ್ಯಕರ್ತರು ಇವರಾಗಿದ್ದು, ರಾಮಮಂದಿರ ನಿರ್ಮಾಣದಲ್ಲಿ ಕೈಜೋಡಿಸಲು ಮುಂದಾಗಿದ್ದೇವೆ ಎಂದು ಇದರ ಅಧ್ಯಕ್ಷ ಅಝಂಖಾನ್ ಹೇಳಿದ್ದಾರೆ. ಲಕ್ನೋ, ಬಸ್ತಿ ಮತ್ತು ಇತರ ಜಿಲ್ಲೆಗಳಿಂದ ಇವರು ಇಲ್ಲಿಗೆ ಆಗಮಿಸಿದ್ದರು ಎನ್ನಲಾಗಿದೆ.
ಖಾನ್ ಇತ್ತೀಚಿಗೆ ಲಕ್ನೋದಲ್ಲಿ ರಾಮಮಂದಿರ ನಿರ್ಮಾಣದ ಪರವಾಗಿ ಪೋಸ್ಟರ್ ಹಾಕಿದ್ದರು.
ಇವರನ್ನು ಆವರಣದೊಳಕ್ಕೆ ಹೋಗಲು ಪೊಲೀಸರು ಬಿಡಲಿಲ್ಲ, ಅಲ್ಲದೇ ರಾಮಲಲ್ಲಾ ದೇಗುಲವನ್ನೂ ಮುಚ್ಚಲಾಗಿತ್ತು. ಇದರಿಂದಾಗಿ ಸ್ಥಳಿಯ ವಿಶ್ವ ಹಿಂದೂಪರಿಷದ್ ನಾಯಕರನ್ನು ಭೇಟಿಯಾಗಿ ಅವರಿಗೆ ತಾವು ತಂದ ಇಟ್ಟಿಗೆಗಳನ್ನು ಹಸ್ತಾಂತರ ಮಾಡಲು ಇವರು ಬಯಸಿದ್ದರು ಎನ್ನಲಾಗಿದೆ. ಆದರೆ ಪೊಲೀಸರು ಇವರನ್ನು ವಾಪಾಸ್ ಕಳುಹಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.