ಮಂಗಳೂರು: ಶ್ರೀನಗರ ಉಪಚುನಾವಣೆಯ ವೇಳೆ ಕಲ್ಲು ತೂರಾಟಗಾರರನ್ನು ಎದುರಿಸಲು ಪ್ರತಿಭಟನೆ ನಡೆಸುತ್ತಿದ್ದ ವ್ಯಕ್ತಿಯನ್ನು ಜೀಪಿಗೆ ಕಟ್ಟಿದ ಸೇನೆಯ ಕ್ರಮವನ್ನು ಮಾಜಿ ಸೇನಾಧಿಕಾರಿ ಜನರಲ್ ವೇದ್ ಪ್ರಕಾಶ್ ಮಲಿಕ್ ಅವರು ಸಮರ್ಥಿಸಿಕೊಂಡಿದ್ದಾರೆ.
ಕಾರ್ಗಿಲ್ ಯುದ್ಧದ ವೇಳೆ ಮಲಿಕ್ ಸೇನಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು.
ಬುಧವಾರ ದಕ್ಷಿಣಕನ್ನಡ ಜಿಲ್ಲಾ ಮಾಜಿ ಸೈನಿಕರ ಅಸೊಸಿಯೇಶನ್ ಹಮ್ಮಿಕೊಂಡಿದ್ದ ಕಾರ್ಗಿಲ್ ಯುದ್ಧ ಸಂವಾದ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿದ್ದರು.
ಈ ವೇಳೆ ಮಾತನಾಡಿದ ಅವರು, ವ್ಯಕ್ತಿಯನ್ನು ಜೀಪಿಗೆ ಕಟ್ಟಿ ಆತನ ಮಾನವ ಹಕ್ಕನ್ನು ಉಲ್ಲಂಘಿಸಿದಕ್ಕೆ ಆರ್ಮಿ ಯುನಿಟ್ ಕಮಾಂಡರ್ನ್ನು ನಾನು ದೋಪಿಯಾಗಿ ಮಾಡುತ್ತಿದ್ದೆ. ಆದರೂ ಅನಿವಾರ್ಯ ಪರಿಸ್ಥಿತಿಯಲ್ಲಿ ಈ ಕ್ರಮಕೈಗೊಂಡದ್ದಕ್ಕೆ ಕ್ಷಮೆಯನ್ನೂ ನೀಡುತ್ತಿದ್ದೆ ಎಂದಿದ್ದಾರೆ.
ಸೇನೆ ನಿಯಮಗಳ ಅನುಸಾರವೇ ನಾಗರಿಕರೊಂದಿಗೆ ವ್ಯವಹರಿಸಲು ಬಯಸುತ್ತದೆ, ಆದರೆ ಸೈನಿಕರೂ ಮಾನವರೇ, ರೋಬೋಟ್ಗಳಲ್ಲ ಎಂದಿದ್ದಾರೆ. ನಿಮ್ಮ ಸ್ವಂತ ಜನರೇ ನಿಮ್ಮ ಮೇಲೆ ಕಲ್ಲು ತೂರಾಟ ಮಾಡುತ್ತಿದ್ದಾರೆ, ನಿಮಗೆ ಹೊಡೆಯುತ್ತಿದ್ದಾರೆ, ಆದರೂ ಯಾರು ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳುವ ಸ್ಥಿತಿಯಲ್ಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಭಾರತದ ಆಡಳಿತ ಕಾಶ್ಮೀರದ ಸಿದ್ಧಾಂತಗಳನ್ನು ಟಾರ್ಗೆಟ್ ಮಾಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿರುವ ಅವರು, ದುಷ್ಕರ್ಮಿಗಳನ್ನು ಸುತ್ತುವರೆದು ದೇಶ ವಿವಿಧ ಜೈಲುಗಳಿಗೆ ಕಳುಹಿಸುವ ಅಗತ್ಯವಿದೆ ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.