ದೆಹಲಿ: ದೇಶವನ್ನು ರಕ್ಷಿಸಲು ಜೀವನ ಮುಡಿಪಾಗಿಟ್ಟಿರುವ ಯೋಧರನ್ನು ಗೌರವಿಸಿ ಎಂದು ಎರಡು ತಿಂಗಳ ಹಿಂದೆಯಷ್ಟೇ ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಗೆ ಕರೆ ನೀಡಿದ್ದರು. ಅವರ ಮನವಿಯನ್ನು ಜನ ಗಂಭೀರವಾಗಿ ಪರಿಗಣಿಸಿದ್ದಾರೆ ಎಂಬುದು ದೆಹಲಿ ಏರ್ಪೋರ್ಟ್ನಲ್ಲಿ ನಡೆದ ಸನ್ನಿವೇಶದಿಂದ ಸ್ಪಷ್ಟವಾಗಿದೆ.
ದೆಹಲಿ ಇಂದಿರಾ ಗಾಂಧಿ ಇಂಟರ್ನ್ಯಾಷನಲ್ ಏರ್ಪೋರ್ಟ್ಗೆ ಯೋಧರು ಆಗಮಿಸುತ್ತಿದ್ದಂತೆ ಅಲ್ಲಿದ್ದ ಜನ ಸಮೂಹ ಎದ್ದುನಿಂತು ಅವರಿಗೆ ಗೌರವ ಸಲ್ಲಿಸಿದ್ದು ಮಾತ್ರವಲ್ಲ, ಜೋರಾಗಿ ಚಪ್ಪಾಳೆ ತಟ್ಟಿ ಅವರೆಡೆಗಿನ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದೆ. ಈ ದೃಶ್ಯ ಒಂದು ಕ್ಷಣ ಭಾವನಾತ್ಮಕ ಸನ್ನಿವೇಶವನ್ನೇ ಸೃಷ್ಟಿಸಿದೆ.
ಮಧ್ಯಪ್ರದೇಶದಲ್ಲಿ ಶೌರ್ಯ ಸ್ಮಾರಕವನ್ನು ಉದ್ಘಾಟನೆಗೊಳಿಸಿ ಮಾತನಾಡಿದ್ದ ಮೋದಿ, ವಿದೇಶಗಳಲ್ಲಿ ಜನರು ಎಲ್ಲಿ ಯೋಧರನ್ನು ಕಂಡರೂ ಎದ್ದು ನಿಂತು ಗೌರವ ನೀಡುತ್ತಾರೆ. ನಮ್ಮಲ್ಲೂ ಅವರನ್ನು ಗೌರವಿಸುವ ಮನೋಭಾವ ಬೆಳೆಯಬೇಕು ಎಂದಿದ್ದರು.
ಈವರೆಗೆ ಕ್ರಿಕೆಟ್ ತಾರೆಯರು, ಜನಪ್ರಿಯ ತಾರೆಯರು ಬಂದಾಗ ಮಾತ್ರ ಇಂತಹ ದೃಶ್ಯಗಳು ಕಾಣಸಿಗುತ್ತಿದ್ದವು, ಇದೀಗ ನಮ್ಮ ದೇಶ ರಕ್ಷಣೆ ಮಾಡುತ್ತಿರುವ ಯೋಧರಿಗೂ ಈ ರೀತಿಯ ಸ್ವಾಗತ ಸಿಗುತ್ತಿರುವುದು ಕಂಡಾಗ ನಿಜವಾಗಿ ಭಾರತ ಬದಲಾಗುತ್ತಿದೆ ಎಂದೆನಿಸುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.