ನವದೆಹಲಿ: ಎಪ್ರಿಲ್ 18 ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಹೀರೋ ತಾತ್ಯಾಟೋಪಿ ಹುತಾತ್ಮರಾದ ದಿನ. ಮಧ್ಯಪ್ರದೇಶದ ಶಿವಪುರದಲ್ಲಿ 1859ರಲ್ಲಿ ಇವರನ್ನು ಬ್ರಿಟಿಷರು ಗಲ್ಲಿಗೇರಿಸಿದ್ದರು.
ನಾಸಿಕ್ನಲ್ಲಿ 1814ರಲ್ಲಿ ರಾಮಚಂದ್ರ ಪಾಂಡುರಂಗ ಟೋಪಿಯಾಗಿ ಜನಿಸಿದ ಇವರು ಅಪ್ಪಟ ದೇಶಭಕ್ತ. 1857ರ ಬ್ರಿಟಿಷರ ವಿರುದ್ಧದ ದಂಗೆಯಲ್ಲಿ ಇವರು ವಹಿಸಿದ ಪಾತ್ರ ಮಹತ್ವದ್ದು.
ದಂಗೆಯ ವೇಳೆ ಕಾನ್ಪುರದಲ್ಲಿ ಈಸ್ಟ್ ಇಂಡಿಯಾ ಕಂಪನಿಯ ಸೈನಿಕರೊಂದಿಗೆ ಹೋರಾಡಿ ಗೆದ್ದ ಇವರ ಮೇಲೆ ಬ್ರಿಟಿಷರು ಕಂಗೆಣ್ಣು ಬೀರಿದ್ದರು. ಬಳಿಕ 1859ರ ಎಪ್ರಿಲ್ 7ರಂದು ಬ್ರಿಟಿಷ್ ಕುಳಗಳು ಇವರನ್ನು ಬಂಧಿಸಿ, ಎಪ್ರಿಲ್ 18ರಂದು ಗಲ್ಲಿಗೇರಿಸಿದವು.
ಭಾರತ, ಪಾಕಿಸ್ಥಾನ, ಬಾಂಗ್ಲಾದೇಶವನ್ನು ಒಳಗೊಂಡ ’ಭಾರತವರ್ಷ’ ಸಿದ್ಧಾಂತವನ್ನು ಇವರು ಪ್ರತಿಪಾದಿಸುತ್ತಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.