ಮುಂಬಯಿ: ಭಾರತದ ಮಹಾಕಾವ್ಯ ಮಹಾಭಾರತವನ್ನು ಸಿನಿಮಾ ಪರದೆ ಮೇಲೆ ಮೂಡುವಂತೆ ಮಾಡಬೇಕು ಎಂಬ ಕನಸನ್ನು ಹಲವಾರು ನಿರ್ಮಾಪಕರು ಕಂಡಿರಬಹುದು. ಆದರೆ ಇದುವರೆಗೆ ಆ ಕನಸು ಕನಸಾಗಿಯೇ ಉಳಿದು ಹೋಗಿದೆ.
ಆದರೆ ಇದೀಗ ಮಂಗಳೂರು ಮೂಲದ ದುಬೈನಲ್ಲಿನ ಖ್ಯಾತ ಉದ್ಯಮಿ ಡಾ.ಬಿಆರ್ ಶೆಟ್ಟಿ ಒಂದು ಸಾವಿರ ಕೋಟಿ ಬಂಡವಾಳ ಹೂಡಿ ಮಹಾಭಾರತವನ್ನು ಬೆಳ್ಳಿಪರದೆ ಮೇಲೆ ಮೂಡಿಸಲು ನಿರ್ಧರಿಸಿದ್ದಾರೆ.
ರಾಜಮೌಳಿ ಅವರ ಬಾಹುಬಲಿಯಂತೆ ಎರಡು ಹಂತದಲ್ಲಿ ಸಿನಿಮಾವನ್ನು ತೆರೆಗೆ ತರಲು ಅವರು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಇದನ್ನು ವಿ.ಎ.ಶ್ರೀಕುಮಾರ್ ಮೆನನ್ ಅವರು ನಿರ್ದೇಶಿಸಲಿದ್ದಾರೆ.
2018ರ ಸೆಪ್ಟಂಬರ್ಗೆ ಸಿನಿಮಾದ ಕಾರ್ಯ ಆರಂಭವಾಗಲಿದ್ದು, 2020ರ ವೇಳೆಗೆ ತೆರೆಗೆ ಅಪ್ಪಳಿಸುವ ಸಾಧ್ಯತೆ ಇದೆ. ಇಂಗ್ಲೀಷ್, ಹಿಂದಿ, ಕನ್ನಡ, ತಮಿಳು, ತೆಲುಗು ಸೇರಿದಂತೆ 100 ಭಾಷೆಗಳಲ್ಲಿ ಈ ಸಿನಿಮಾ ಮೂಡಿ ಬರಲಿದೆ.
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಮಲಯಾಳಂ ಸಾಹಿತಿ ಎಂ.ಟಿ ವಾಸುದೇವನ್ ಅವರ ’ರಂದಂಮೂಝಂ’ ಆಧರಿಸಿ ಸಿನಿಮಾ ರಚಿಸಲಾಗುತ್ತದೆ. ಇಲ್ಲಿ ಭೀಮನೇ ಮುಖ್ಯ ಕಥಾ ನಾಯಕನಾಗಿರುತ್ತಾನೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.