ನವದೆಹಲಿ: ದಿಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳುವುದಕ್ಕೆ ಹೆಸರುವಾಸಿಯಾಗಿರುವ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಅವರು ಇದೀಗ ಗಂಗಾ ನದಿಯ ಸಂರಕ್ಷಣೆ ವಿಷಯದಲ್ಲೂ ಅತೀದೊಡ್ಡ ನಿರ್ಧಾರವನ್ನು ತೆಗೆದುಕೊಳ್ಳಲು ಮುಂದಾಗಿದ್ದಾರೆ.
ಗಂಗಾ ನದಿಗೆ ವಿಷಕಾರಿ ತ್ಯಾಜ್ಯಗಳನ್ನು ಬಿಡುಗಡೆ ಮಾಡುವ ಕಾನ್ಪುರದಲ್ಲಿನ ಬ್ರಿಟಿಷರ ಕಾಲದ ಚರ್ಮ ಸಂಸ್ಕರಣಾ ಘಟಕಗಳನ್ನು ಬೇರೆಡೆಗೆ ಸ್ಥಳಾಂತರ ಮಾಡಲು ಯೋಗಿ ಮುಂದಾಗಿದ್ದಾರೆ.
ಗಂಗೆಯ ಮಾಲಿನ್ಯಕ್ಕೆ ಅತಿ ಮುಖ್ಯ ಕಾರಣವಾಗಿರುವ ಈ ಚರ್ಮ ಘಟಕಗಳನ್ನು ಬೇರಡೆಗೆ ಸ್ಥಳಾಂತರ ಮಾಡುವುದಕ್ಕೆ ಸೂಕ್ತ ಜಾಗವನ್ನು ಹುಡುಕುತ್ತಿದ್ದೇವೆ ಎಂದು ಯೋಗಿ ಸರ್ಕಾರ ಹಸಿರು ನ್ಯಾಯ ಮಂಡಳಿಗೆ ತಿಳಿಸಿದೆ.
400 ಚರ್ಮ ಸಂಸ್ಕರಣಾ ಘಟಕಗಳು ಇಲ್ಲಿ ಇದ್ದು, 2 ಮಿಲಿಯನ್ ಜನರಿಗೆ ಉದ್ಯೋಗ ಕಲ್ಪಿಸಿದೆ. ಹೀಗಾಗಿ ಇದನ್ನು ಇನ್ನೊಂದು ಸ್ಥಳಕ್ಕೆ ಸ್ಥಳಾಂತರ ಮಾಡುವುದು ಸಾಧ್ಯವೇ ಇಲ್ಲ ಎಂದು ಹಿಂದಿನ ಅಖಿಲೇಶ್ ಸಿಂಗ್ ಯಾದವ್ ಸರ್ಕಾರ ಹೇಳಿತ್ತು.
ಆದರೆ ಇದೀಗ ಯೋಗಿ ಸರ್ಕಾರ ಇದನ್ನು ಸ್ಥಳಾಂತರ ಮಾಡುವುದಕ್ಕೆ ಆಸಕ್ತಿ ತೋರಿಸಿದ್ದು, ಹಸಿರು ನ್ಯಾಯ ಮಂಡಳಿಯೊಂದಿಗೆ ನಡೆದ ಸಭೆಯಲ್ಲಿ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.