ನವದೆಹಲಿ: ಭಾರತ ಜಿಎಸ್ಟಿ ಮಸೂದೆಯನ್ನು ಸುಸಮಯಕ್ಕೆ, ಸರಿಯಾದ ರೀತಿಯಲ್ಲಿ ಜಾರಿಗೊಳಿಸಿದರೆ ಆರ್ಥಿಕತೆಗೆ ಸಾಕಷ್ಟು ಪ್ರಯೋಜನಗಳಿವೆ ಎಂದು ವಿಶ್ವಬ್ಯಾಂಕ್ ಅಭಿಪ್ರಾಯಪಟ್ಟಿದೆ.
ಸುಸಮಯಕ್ಕೆ, ಸರಳವಾಗಿ ಜಿಎಸ್ಟಿ ಮಸೂದೆಯನ್ನು ಭಾರತ ಜಾರಿಗೊಳಿಸಿದರೆ ಅದರಿಂದ ಆರ್ಥಿಕ ಚಟುವಟಿಕೆಗಳಿಗೆ ಮಹತ್ವದ ಲಾಭವಿದೆ. ಆದರೂ ಬಡತನ ನಿರ್ಮೂಲನಾ ಪ್ರಗತಿಯಲ್ಲಿ ಸವಾಲುಗಳನ್ನು ಎದುರಿಸಲೇ ಬೇಕಾಗುತ್ತದೆ ಎಂದು ವಿಶ್ವಬ್ಯಾಂಕ್ ತನ್ನ ವರದಿಯಲ್ಲಿ ತಿಳಿಸಿದೆ.
ಭಾರತದ ಆರ್ಥಿಕ ಪ್ರಗತಿ 2017ರ ಕೊನೆಗೆ 7.2ರಷ್ಟು ಏರಿಕೆಯಾಗಲಿದೆ. ಬಂಡವಾಳ ನಿರೀಕ್ಷಿತ ಮಟ್ಟ ತಲುಪದಿದ್ದರೂ, ನೋಟು ಬ್ಯಾನ್ ಪರಿಣಾಮ ಇದ್ದರೂ ಭಾರತದ ಆರ್ಥಿಕ ಪ್ರಗತಿ ಏರುಗತಿಯಲ್ಲೇ ಇರಲಿದೆ.
2016ರಲ್ಲಿ 6.8 ಇದ್ದ ಭಾರತದ ಆರ್ಥಿಕ ಪ್ರಗತಿ 2017ರ ಅತ್ಯಂತ ವೇಳೆಗೆ 7.2 ಆಗಲಿದೆ ಎಂದು ನಿರೀಕ್ಷಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.